Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ

ಕಳೆದ ಎರಡು ವರ್ಷಗಳಿಂದ ರೈತರ ಪಾಲಿಗೆ ಬಿಟ್ಟು ಬಿಡದೆ ಕಾಡುತ್ತಿದ್ದ ಪುಂಡಾನೆ ಇದೀಗ ಅರಣ್ಯಾಧಿಕಾರಿಗಳ ಖೆಡ್ಡಾಗೆ ಬಿದ್ದಿದೆ. ಮೂರು ರಾಜ್ಯಗಳಿಗೆ ಬೇಕಾಗಿದ್ದ ಒಂಟಿ ಸಲಗವನ್ನ ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ.

Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ
ಚಾಮರಾಜನಗರದಲ್ಲಿ ಕೊನೆಗೂ ಸೆರೆ ಸಿಕ್ಕ ಕಾಡಾನೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 22, 2023 | 11:43 AM

ಚಾಮರಾಜನಗರ, ಜು.22: ಕಳೆದ ಎರಡು ವರ್ಷಗಳಿಂದ ರೈತರ ಪಾಲಿಗೆ ಬಿಟ್ಟು ಬಿಡದೆ ಕಾಡುತ್ತಿದ್ದ ಪುಂಡಾನೆ ಇದೀಗ ಅರಣ್ಯಾಧಿಕಾರಿಗಳ ಖೆಡ್ಡಾಗೆ ಬಿದ್ದಿದೆ. ಹೌದು ಈ ಕಾಡಾನೆ(Elephant)ಯನ್ನ ಬಂದಿಸಿದ್ದೆ ಬಲು ರೋಚಕವಾಗಿದೆ. ಕಳೆದ 2 ವರ್ಷಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯದ ರೈತರಿಗೆ ತಲೆ ನೋವಾಗಿದ್ದ ಈ ಒಂಟಿ ಸಲಗ, ಅಕ್ಕಿ ದಾಸ್ತಾನು ಗೋಧಾಮುಗಳಿಗೆ ನುಗ್ಗಿ ರೈತರು ಬೆಳೆದ ಅಕ್ಕಿ ತರಕಾರಿಗಳನ್ನ ತಿಂದು ತೇಗುತ್ತಿತ್ತು. ಈ ಹಿನ್ನಲೆ ಮೂರು ರಾಜ್ಯಗಳ ಅರಣ್ಯಾಧಿಕಾರಿಗಳು ಎಷ್ಟೇ ತಡಕಾಡಿದ್ರು, ಕೈಗೆ ಸಿಗದೆ ಎಸ್ಕೇಪ್ ಆಗುತ್ತಿತ್ತು. ಕಳೆದ ಒಂದು ತಿಂಗಳ ಹಿಂದೆ ಈ ಪುಂಡಾನೆಯನ್ನ ಬಂಡಿಪುರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು

ಇನ್ನು ಕೂಂಬಿಂಗ್ ಕಿಂಗ್ ಜೆಪಿ ನೇತೃತ್ವದಲ್ಲಿ ಸತತ 6 ತಾಸುಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಸತತ ಮೂರು ಅರವಳಿಕೆ ಮದ್ದು ನೀಡಿ ಪುಂಡಾನೆಯನ್ನ ಸೆರೆ ಹಿಡಿಯಲಾಯಿತು. ಅದಕ್ಕೂ ಮುಂಚೆ ಈ ಒಂಟಿ ಸಲಗ ಕೂಂಬಿಂಗ್​ಗೆ ಕರೆದೊಯ್ಯಲಾಗಿದ್ದ ಆನೆಗಳ ಮೇಲೆ ರಿವರ್ಸ್ ಅಟ್ಯಾಕ್ ಮಾಡಿತ್ತು. ಈ ವೇಳೆ ಆನೆಯ ದಂತ ಮುರಿದು ಹೋಗಿ, ಬಳಿಕ ಎರಡು ಬಾರಿ ಅರವಳಿಕೆ ಮದ್ದು ನೀಡಲಾಯಿತು. ಆದರೂ, ಬಗ್ಗದ ಈ ಆನೆ ಮತ್ತೆ ದಾಳಿ ನಡೆಸಿತು.

ಇದನ್ನೂ ಓದಿ:Viral Video: ಕಾಡಾನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆಯಲು ಹೋದ ಯುವಕರು, ಮುಂದೇನಾಯಿತು?; ವಿಡಿಯೋ ವೈರಲ್​​

ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಅರವಳಿಕೆ ಮದ್ದು ನೀಡಿದ ವೈದ್ಯರು

ಇನ್ನು ಈ ಒಂಟಿ ಸಲಗವನ್ನ ಸೆರೆ ಹಿಡಿಯಲು, ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಬಳಿಕ ವೈದ್ಯರು ಅರವಳಿಕೆ ಮದ್ದು ನೀಡಿದರು. ಸದ್ಯ ರಾಮಪುರ ಆನೆ ಬಿಡಾರದ ಬೃಹತ್ ಮರದ ದಿಂಬೆಯ ಖೆಡ್ಡಾದಲ್ಲಿ ಇತನನ್ನ ಬಂಧಿಸಲಾಗಿದೆ. ಈಗಲೂ ಕೂಡ ಈ ಪುಂಡಾನೆ ಬಂಧನದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದೆ. ಊಟ ನೀಡಲು ತೆರಳುವ ಕಾವಾಡಿ ಮಾವುತರ ಮೇಲೆ ಎಗರಿ ಬೀಳುತ್ತಿದೆ.

ಒಂಟಿ ಸಲಗಕ್ಕೆ ಟ್ರೈನಿಂಗ್ ನೀಡುತ್ತಿರುವ ಅರಣ್ಯಾಧಿಕಾರಿಗಳು

ನಿಧಾನವಾಗಿ ಸೆರೆಯಾದ ಈ ಒಂಟಿ ಸಲಗಕ್ಕೆ ಅರಣ್ಯಾಧಿಕಾರಿಗಳು ಟ್ರೈನಿಂಗ್ ನೀಡುತ್ತಿದ್ದಾರೆ. ಇನ್ನು 90 ದಿನಗಳ ಕಾಲ ಟ್ರೈ ಜಂಕ್ಷನ್ ಕಿಂಗ್​ ಎಂದೇ ಕರೆಯುವ ಈ ಆನೆಗೆ ಸೆರೆವಾಸದಲ್ಲಿಡಲಾಗಿದೆ. ಅಲ್ಲಿಯೇ ಇದಕ್ಕೆ ಅರಣ್ಯಾಧಿಕಾರಿಗಳು ತರಭೇತಿ ನೀಡಲಿದ್ದಾರೆ. ಇನ್ನು ಈ ಸಲಗಕ್ಕೆ ನಿಖರ ತರಭೇತಿ ನೀಡಿದ್ರೆ, ಅಭಿಮನ್ಯು ರೀತಿ ದಸರಾ ಜಂಬೂ ಸವಾರಿಗೆ ಸನ್ನದನಾಗಲಿದ್ದಾನೆ. ಹೌದು ಬೃಹತ್ ಸದೃಡ ದೇಹ ಅಜಾನು ಬಾಹುವಾಗಿರುವ ಈ ಸಲಗ ನೋಡುವುದಕ್ಕೆ ಬಲು ಸುಂದರವಾಗಿದೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರದ ರಾಮಪುರ ಆನೆ ಬಿಡಾರದಲ್ಲಿ ತರಭೇತಿ ಕಾರ್ಯ ನಡೆಯುತ್ತಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 am, Sat, 22 July 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ