AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರದಲ್ಲಿ ಹೊಸವರ್ಷಾಚರಣೆಗೆ ಬ್ರೇಕ್; ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್​ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ.

ಬಂಡೀಪುರದಲ್ಲಿ ಹೊಸವರ್ಷಾಚರಣೆಗೆ ಬ್ರೇಕ್; ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ
ಸಾಂದರ್ಭಿಕ ಚಿತ್ರ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಆಯೇಷಾ ಬಾನು

Updated on: Dec 31, 2023 | 7:05 AM

ಚಾಮರಾಜನಗರ, ಡಿ.31: ಹೊಸ ವರ್ಷಕ್ಕೆ (New Year) ಕೌಂಟ್ ಡೌನ್ ಆರಂಭವಾಗಿದೆ. ಹೊಸ ವರ್ಷವನ್ನ ಹೊಸ ಹೊರುಪಿನೊಂದಿಗೆ ಬರಮಾಡಿಕೊಳ್ಳಲು ಜನರು ಕಾಯುತ್ತಿದ್ದಾರೆ. ಇನ್ನು ಬಂಡೀಪುರದಲ್ಲಿ(Bandipur)  ಹೊಸವರ್ಷಾಚರಣೆಗೆ ಅರಣ್ಯ ಇಲಾಖೆ ಬ್ರೇಕ್​ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ. ಬಂಡೀಪುರದ ಖಾಸಗಿ ರೆಸಾರ್ಟ್​​ಗಳಲ್ಲಿಯೂ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ.

2023ರನ್ನು ಕಳಿಸಿ 2024ಕ್ಕೆ ಸ್ವಾಗತ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೊಸಾ ವರ್ಷಕ್ಕೆ ಪಾರ್ಟಿ ಮಾಡೊದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಪಬ್ , ಕ್ಲಬ್, ಪ್ರವಾಸಿ ತಾಣ, ಫಾರ್ಮ್ ಹೌಸ್, ರೆಸಾರ್ಟ್ ಹೀಗೆ ಯೋಚಿಸುತ್ತಿದ್ದಾರೆ. ಆದರೆ ಮುನ್ನೆಚ್ಚರಿಕಾಕ್ರಮವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್​ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ. ಆದರೆ ಅರಣ್ಯ ಇಲಾಖೆ ವಸತಿಗೃಹ ಹಾಗೂ ಬಂಡೀಪುರದ ಖಾಸಗಿ ರೆಸಾರ್ಟ್​​ಗಳಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಿದೆ. ಡಿಜೆ ಡ್ಯಾನ್ಸ್​, ಮೋಜು ಮಸ್ತಿ ಹಾಗೂ ಕಲರ್ ಲೈಟಿಂಗ್ಸ್‌ಗೆ ನಿರ್ಬಂಧ ಹೇರಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ‌ಮಾಹಿತಿ ನೀಡಿದ್ದಾರೆ.

ಈ ಪ್ರವಾಸಿತಾಣಗಳಿಗೆ ನಿರ್ಬಂಧ

ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕುಂತಿ ಬೆಟ್ಟ, ಶಿವಗಂಗೆ ಬೆಟ್ಟ, ನಂದಿ ಹಿಲ್ಸ್ ಮತ್ತು ಸಿದ್ದರ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗುವ ಪ್ಲಾನ್ ಇದ್ರೆ ಕೈ ಬಿಟ್ಟುಬಿಡಿ. ಯಾಕಂದ್ರೆ ಡಿಸೆಂಬರ್ 30, 31 ಮತ್ತು ಜನವರಿ 01 ತನಕ ಯಾರಿಗೂ ಎಂಟ್ರಿ ಇಲ್ಲ. ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಮುನ್ನವೇ 37 ಐಪಿಎಸ್​ಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ಸರ್ಕಾರ ಆದೇಶ

ಬೆಂಗಳೂರಲ್ಲಿ ಹೈ ಅಲರ್ಟ್

ಪಬ್ ಕ್ಲಬ್​ನಲ್ಲಿ ಎಷ್ಟು ಜನರಿಗೆ ಕುಳಿತುಕೊಳ್ಳಲು ಜಾಗ ಇದೆಯೋ ಅಷ್ಟೇ ಟಿಕೆಟ್​ಗಳನ್ನು ಮಾರಾಟ ಮಾಡ್ಬೇಕು. ಡಿಜೆ ನೈಟ್ಸ್ ಮಾಡುವವರು ಅನುಮತಿ ಪಡೆಯುವುದರ ಜೊತೆಗೆ ಸೌಂಡ್ ಲಿಮಿಟ್ಸ್ ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು. ರಾತ್ರಿ ಒಂದು ಘಂಟೆ ಅಷ್ಟರಲ್ಲಿ ಪಾರ್ಟಿ ಎಂಡ್ ಮಾಡ್ಬೇಕು. ಒಂದು ಘಂಟೆ ನಂತ್ರ ಪಾರ್ಟಿ ಮಾಡುವಹಾಗಿಲ್ಲ. ಪಾರ್ಟಿ ಎಂಟ್ರಿಕೊಡುವ ಪ್ರತಿಯೊಂದು ವ್ಯಕ್ತಿಯ ಹೆಸರು ಮತ್ತು ಫೋನ್ ನಂಬರ್ ಸಂಗ್ರಹ ಮಾಡ್ಬೇಕು, ಪಾರ್ಟಿಯಲ್ಲಿ ಡ್ರಗ್ಸ್ ಗಾಂಜಾ ನಶೆ ಏರಿಸುವ ಯಾವುದಾದ್ರು ವಸ್ತುಗಳ ಬಳಕೆ ಆಗುವುದು ತಿಳಿದ್ರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸರು ಜೋನ್ ರೀತಿಯಲ್ಲಿ ವಿಭಾಗ ಮಾಡಿಕೊಂಡು ತಮ್ಮ ಏರಿಯಾದಲ್ಲಿ ಇರುವ ಎಲ್ಲಾ ಕ್ಲಬ್, ಪಬ್, ಬಾರ್ ಮತ್ತು ಮಾಲ್ ಗಳಿಗೆ ಮತ್ತು ಪಾರ್ಟಿ ಆಯೋಜನೆ ಮಾಡುವ ಪಂಚತಾರಾ ಹೋಟೆಲ್ ಗಳಿಗೆ ಸೂಜನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ