ಹಾವೇರಿಗೆ ಹೊಸ ಜೋಡೆತ್ತುಗಳ ಪರಿಚಯಿಸಿದ ಯಡಿಯೂರಪ್ಪ
ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್ವುಡ್ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ. ಜೋಡೆತ್ತು ರೀತಿ ಕೆಲಸ ಮಾಡ್ತಾರೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ […]

ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್ವುಡ್ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ.
ಜೋಡೆತ್ತು ರೀತಿ ಕೆಲಸ ಮಾಡ್ತಾರೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ ನಾನು ಬರುವ ಅವಶ್ಯಕತೆ ಇಲ್ಲ. ಬಣಕಾರ ತಲೆ ತಗ್ಗಿಸೋ ಕೆಲಸ ಮಾಡಲು ಬಿಡೋದಿಲ್ಲ. ಈ ಇಬ್ಬರೂ ನನ್ನೆರಡು ಕಣ್ಣುಗಳು. ಜೋಡೆತ್ತು ರೀತಿಯಲ್ಲಿ ಇಬ್ಬರೂ ಕೆಲಸ ಮಾಡ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ : ಹಿರೇಕೆರೂರಿನ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಸಿಎಂ ಯಡಿಯೂರಪ್ಪ, ಯಾವುದೇ ತಾಲೂಕಿಗೆ ಕೊಡದಷ್ಟು ಅನುದಾನವನ್ನು ಹಿರೇಕೆರೂರಿಗೆ ಕೊಟ್ಟಿದ್ದೇನೆ ಎಂದರು. U.B.ಬಣಕಾರ, ಬಿ.ಸಿ.ಪಾಟೀಲ್ ಆಸೆಯಂತೆ ಹಿರೇಕೆರೂರು ಪಟ್ಟಣವನ್ನ ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ. ಮುಂದಿನ ಬಜೆಟ್ನಲ್ಲಿ ತಾಲೂಕಿನ ಎಲ್ಲ ಬೇಡಿಕೆ ಈಡೇರಿಸುವೆ. ಕೇಂದ್ರ ಮತ್ತು ಎನ್ಡಿಆರ್ಎಫ್ ನಿಯಮ ಪಕ್ಕಕ್ಕಿಟ್ಟು ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡುತ್ತೇನೆ. ನನ್ನ ಜೊತೆ ನಮ್ಮ ಸಚಿವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ ಹಣ ಕೊಡುತ್ತೇನೆ ಎಂದು ಬಿಎಸ್ವೈ ಭರವಸೆ ನೀಡಿದರು.
Published On - 6:00 pm, Thu, 7 November 19




