AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?

Chikkaballapur Police: ಮಾಹಿತಿ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್, ಡಿ.ವೈ.ಎಸ್ಪಿ ವಿ.ಕೆ. ವಾಸುದೇವ್ ಜಿಲ್ಲೆಯಾದ್ಯಂತ ನಾಕಾ ಬಂದಿ ಮಾಡಿ, ಪರಿಶೀಲನೆಗೆ ಸೂಚನೆ ನೀಡಿದರು. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ ನಿನ್ನೆ ತಡರಾತ್ರಿ ವಾಹನಗಳ ಪರಿಶೀಲನೆ ವೇಳೆ ಫಾರೂಕ್ ಕಾರು ಬರುವ ಮಾಹಿತಿ ಲಭ್ಯವಾಗಿದೆ.

ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?
ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?
TV9 Web
| Updated By: ಸಾಧು ಶ್ರೀನಾಥ್​|

Updated on: Sep 17, 2022 | 4:21 PM

Share

ಚಿಕ್ಕಬಳ್ಳಾಪುರ: ಬ್ಯಾಂಕ್ ನ ಹಣವನ್ನು ಎ.ಟಿ.ಎಂ ಗಳಿಗೆ ತುಂಬಿಸಬೇಕಾದ ಸಿಬ್ಬಂದಿಯೊಬ್ಬ, ಸ್ವತಃ ತಾನೆ ಹಣವನ್ನು ಖಾಸಗಿ ವಾಹನಕ್ಕೆ ಶಿಫ್ಟ್​​ ಮಾಡಿ ಬರೋಬ್ಬರಿ 56 ಲಕ್ಷ ರೂಪಾಯಿ ನಗದು ಜೊತೆ ಪರಾರಿಯಾಗುತ್ತಿದ್ದ. ಆದರೆ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಹಣ ಹಾಗೂ ಕಾರನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ (Chikkaballapur Police).

ಆಂಧ್ರ ಪ್ರದೇಶದ ಕಡಪ ನಗರದ ಎಸ್.ಬಿ.ಐ ಬ್ಯಾಂಕ್ ಗೆ (Kadapa SBI ATM) ಸೇರಿದ ಹಣವನ್ನು ಸಿ.ಎಂ.ಎಸ್ ಕಂಪನಿಯು ಎ.ಟಿ.ಎಂ ಗಳಿಗೆ ತುಂಬಿಸುವ ಗುತ್ತಿಗೆ ಪಡೆದಿದೆ. ಹಣ ಸಾಗಿಸುವ ವಾಹನದ ಚಾಲಕನಾಗಿದ್ದ ಫಾರೂಕ್ ಎನ್ನುವಾತ ಸ್ವತಃ ತಾನೆ ಕಡಪದಲ್ಲಿ ಬೇರೊಂದು ಕಾರನ್ನು ತರಿಸಿ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಹಣ ಶಿಫ್ಟ್ ಮಾಡಿದ್ದಾನೆ. ನಂತರ ಕಂಪನಿಯ ವಾಹನವನ್ನು ಅಲ್ಲಿಯೇ ಬಿಟ್ಟು 56 ಲಕ್ಷ ರೂಪಾಯಿ ನಗದು ಜೊತೆ ಎಸ್ಕೇಪ್ ಆಗಿದ್ದಾನೆ.

ಇದನ್ನರಿತ ಕಡಪ ಪೊಲೀಸರು ತನಿಖೆ ನಡೆಸುತ್ತಿದ್ದ ಸಮಯದಲ್ಲಿಯೇ… ಇತ್ತ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ… ಫಾರೂಕ್ ಚಲಾಯಿಸುತ್ತಿದ್ದ ಎಪಿ39, ಎಚ್.ಜಿ 3109 ಟಾಟಾ ಇಟಿಯಸ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಪೊಲೀಸರನ್ನು ನೋಡಿದ ಆರೋಪಿ ಫಾರೂಕ್ ಸ್ಥಳದಲ್ಲೆ ಹಣ ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು (Bagepalli Police) ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 53 ಲಕ್ಷ 50 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.

ಪ್ರಕರಣ ಬಯಲಾಗಿದ್ದು ಹೇಗೆ!?

ನಿನ್ನೆ ದಿನ ಆಂಧ್ರದ ಕಡಪದಲ್ಲಿ ಬ್ಯಾಂಕ್ ಹಣವನ್ನು ಸಿ.ಎಂ.ಎಸ್ ಕಂಪನಿಯ ವಾಹನ ಚಾಲಕ ಫಾರೂಕ್ ವಾಹನವನ್ನು ಬಿಟ್ಟು ಬೇರೊಂದು ವಾಹನದಲ್ಲಿ ಹಣ ಸಮೇತ ಪರಾರಿಯಾಗಿದ್ದ, ಕಡಪ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಫಾರೂಕ್ ಹಾಗೂ ಆತ ಬಳಸಿದ್ದ ಕಾರಿನ ನಂಬರ್ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಆಂಧ್ರದಲ್ಲಿ ನಾಕಾ ಬಂದಿ ಮಾಡಿ, ಪರಿಶೀಲನೆ ನಡೆಸಿದರೂ ಫಾರೂಕ್ ಹಾಗೂ ಆತ ಬಳಸಿದ್ದ ಕಾರು ಪತ್ತೆಯಾಗಿರಲಿಲ್ಲ. ಇದ್ರಿಂದ ಸಿಸಿಟಿವಿ ದೃಶ್ಯ ಹಾಗೂ ಕಾರಿನ ನಂಬರ್ ಹಾಗೂ ದಾಖಲಾದ ಪ್ರಕರಣದ ದೂರನ್ನು ಸಾಮಾಜಿಕ ಜಾಲತಾಣ ಹಾಗೂ ಆಂಧ್ರ ಕರ್ನಾಟಕ ಗಡಿನಾಡು ಪೊಲೀಸರ ವಾಟ್ಸಪ್ ಗ್ರೂಪ್ ಗಳಿಗೆ ಹಂಚಿಕೊಂಡು ಪತ್ತೆಗೆ ಮಾಹಿತಿ ನೀಡಲು ವಿನಂತಿಸಿದ್ದರು.

ತಕ್ಷಣ ಮಾಹಿತಿ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್, ಡಿ.ವೈ.ಎಸ್ಪಿ ವಿ.ಕೆ. ವಾಸುದೇವ್ ಜಿಲ್ಲೆಯಾದ್ಯಂತ ನಾಕಾ ಬಂದಿ ಮಾಡಿ, ಪರಿಶೀಲನೆಗೆ ಸೂಚನೆ ನೀಡಿದರು. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ ನಿನ್ನೆ ತಡರಾತ್ರಿ ವಾಹನಗಳ ಪರಿಶೀಲನೆ ವೇಳೆ ಫಾರೂಕ್ ಕಾರು ಬರುವ ಮಾಹಿತಿ ಲಭ್ಯವಾಗಿದೆ. ಇದ್ರಿಂದ ಬಾಗೇಪಲ್ಲಿ ಪೊಲೀಸ್ ಇನ್ಸ್​ಪೆಕ್ಟರ್ ನಾಗರಾಜ್ ಮತ್ತವರ ಸಿಬ್ಬಂದಿ ಫಾರೂಕ್ ಕಾರನ್ನು ಬೆನ್ನಟ್ಟಿದ್ದಾರೆ. ಆಗ ಟೋಲ್ ನಿಂದ ಅನತಿ ದೂರದಲ್ಲಿ ಕಾರನ್ನು ಬಿಟ್ಟು ಫಾರೂಕ್ ಪರಾರಿಯಾಗಿದ್ದಾನೆ.

ಸದ್ಯ ಕಾರು ಹಾಗೂ ಹಣ ಬಾಗೇಪಲ್ಲಿ ಪೊಲೀಸರ ವಶದಲ್ಲಿದೆ. ಚಿಕ್ಕಬಳ್ಳಾಪುರ ಪೊಲೀಸರು ಇದೀಗ ಆಂಧ್ರ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳ ನಿರೀಕ್ಷೆಯಲ್ಲಿದ್ದು ನ್ಯಾಯಾಲಯದ ಮೂಲಕ ಹಣವನ್ನು ಆಂಧ್ರ ಪೊಲೀಸರಿಗೆ ಒಪ್ಪಿಸುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ ತಿಳಿಸಿದ್ದಾರೆ – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಪುರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ