ಅರಣ್ಯ ಪ್ರವಾಸೋದ್ಯಮ ಟಿಕೆಟ್ ಬುಕ್ಕಿಂಗ್‍ನಲ್ಲೂ ಗೋಲ್‍ಮಾಲ್! ಚಾರಣಿಗರಿಂದ ಹಣ ಪಡೆದು ಇಲಾಖೆಗೆ ವಂಚನೆ

| Updated By: ಸಾಧು ಶ್ರೀನಾಥ್​

Updated on: Mar 06, 2024 | 2:37 PM

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಬಳಿ ಸ್ಕಂದಗಿರಿ ಎನ್ನುವ ಸುಂದರ ಗಿರಿಧಾಮವಿದೆ. ಅದು ಚಾರಣಕ್ಕೆ ಅಚ್ಚುಮೆಚ್ಚಿನ ತಾಣ. ಲ್ಲಿಗೆ ಬರುವ ಚಾರಣಿಗರಿಗೆ ಸೋಮವಾರದಿಂದದ ಶುಕ್ರವಾರದವರೆಗೆ ತಲಾ 303 ರೂಪಾಯಿ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ. ಇನ್ನು ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಹೆಚ್ಚುವರಿಯಾಗಿ ತಲಾ 600 ರೂಪಾಯಿ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ.

ಅರಣ್ಯ ಪ್ರವಾಸೋದ್ಯಮ ಟಿಕೆಟ್ ಬುಕ್ಕಿಂಗ್‍ನಲ್ಲೂ ಗೋಲ್‍ಮಾಲ್! ಚಾರಣಿಗರಿಂದ ಹಣ ಪಡೆದು ಇಲಾಖೆಗೆ ವಂಚನೆ
ಚಿಕ್ಕಬಳ್ಳಾಪುರ, ಅರಣ್ಯ ಪ್ರವಾಸೋದ್ಯಮ ಟಿಕೆಟ್ ಬುಕ್ಕಿಂಗ್‍ನಲ್ಲೂ ಗೋಲ್‍ಮಾಲ್!
Follow us on

ಚಿಕ್ಕಬಳ್ಳಾಪುರ, ಮಾರ್ಚ್​ 6: ರಾಜಧಾನಿ ಬೆಂಗಳೂರು ಪಕ್ಕದಲ್ಲಿ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಗಿರಿಧಾಮವೊಂದಿದೆ. ಸಮುದ್ರಮಟ್ಟದಿಂದ 1,400 ಮೀಟರ್ ಎತ್ತರದಲ್ಲಿದೆ. ಅದು ಚಾರಣಿಗರ ಅಚ್ಚುಮೆಚ್ಚಿನ ತಾಣವೂ (Chikkaballapur forest tourism) ಆಗಿದೆ. ಪ್ರತಿದಿನ ಅಲ್ಲಿಗೆ ನೂರಾರು ಜನ ಚಾರಣಿಗರು ಬಂದು-ಹೋಗುತ್ತಾರೆ. ಶನಿವಾರ-ಭಾನುವಾರ ಅಂದರೆ ಸಾಕು ಸಾವಿರಾರು ಜನ ಚಾರಣಿಗರು ಇಲ್ಲಿಗೆ ಆಗಮಿಸುತ್ತಾರೆ. ಚಾರಣಿಗರಿಗೆ (Trekking) ವಿಧಿಸುವ ಪ್ರವೇಶ ಶುಲ್ಕದಲ್ಲಿಯೂ ಗೋಲ್‍ಮಾಲ್ (Golmaal) ಮಾಡಿದ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಬಳಿ ಸ್ಕಂದಗಿರಿ ಎನ್ನುವ ಸುಂದರ ಗಿರಿಧಾಮವಿದೆ. ಅದು ಚಾರಣಕ್ಕೆ ಅಚ್ಚುಮೆಚ್ಚಿನ ತಾಣ. ಇದರಿಂದ ಇಲ್ಲಿಗೆ ಬರುವ ಚಾರಣಿಗರಿಗೆ ಸೋಮವಾರದಿಂದ ಶುಕ್ರವಾರದವರೆಗೆ ಚಾರಣಿಗರಿಂದ ತಲಾ 303 ರೂಪಾಯಿ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ. ಇನ್ನು ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಹೆಚ್ಚುವರಿಯಾಗಿ ಚಾರಣಿಗರಿಗೆ ತಲಾ 600 ರೂಪಾಯಿ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ.

Also Read: ಚಿಕ್ಕಬಳ್ಳಾಪುರ -ಡೆಬಿಟ್ ಕಾರ್ಡ್ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ

ಆದರೆ ಅಡ್ವಾನ್ಸ್ ಬುಕ್ಕಿಂಗ್ ಇಲ್ಲದೇ ಚಾರಣಕ್ಕೆ ಬರುವವರಿಗೆ ಗಿರಿಧಾಮದ ಬಳಿಯೇ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಡಲಾಗುತ್ತಿದೆ. ಟ್ರಕ್ಕಿಂಗ್ ಇನ್ಚಾರ್ಜ್ ಗುರುನಾಥ್ ಎನ್ನುವವರು ಇಕೋ ಟೂರಿಸಂನ ವೆಬ್‍ಸೈಟ್ ನಿರ್ವಾಹಕರಿಗೆ ಹಣ ಸಂದಾಯ ಮಾಡಿ, ಟಿಕೆಟ್ ಬುಕ್ಕಿಂಗ್ ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ: ಗೌರಿಬಿದನೂರು: ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!

ಆದರೆ ವೆಬ್‍ಸೈಟ್ ನಿರ್ವಾಹಕ ಸುನಿಲ್‍ಕುಮಾರ್ ಎನ್ನುವವರು ಪ್ರವೇಶ ಶುಲ್ಕ ಪಡೆದು ಟಿಕೆಟ್ ರವಾನಿಸಿದ್ದಾರೆ. ಸುಮಾರು ರೂ. 50,000 ಕ್ಕೂ ಹೆಚ್ಚು ಹಣವನ್ನು ಇಲಾಖೆಗೆ ಸಂದಾಯ ಮಾಡದೇ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ. ಇದರಿಂದ ಇಕೋ ಟೂರಿಸಂ ಇಲಾಖೆ ಸುನಿಲ್‍ಕುಮಾರ್ ರನ್ನು ಕೆಲಸದಿಂದ ತೆಗೆದಿದ್ದು, ಹಣ ವಾಪಸಾತಿಗೆ ಯತ್ನಿಸಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:35 pm, Wed, 6 March 24