ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ; ಇಲ್ಲಿದೆ ವಿವರ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾವಂತ ಯುವಕನೋರ್ವ ಕೆಲಸ ತೊರೆದು, ತಂದೆ ಮಾಡುತ್ತಿದ್ದ ಕೃಷಿ ಕಾಯಕವನ್ನೇ ಮುಂದುವರೆಸಿದ್ದಾನೆ. ಇದೀಗ ತನ್ನ 2 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದು ಲಕ್ಷಾಧಿಪತಿಯಾಗುವುದರ ಮೂಲಕ ಇನ್ನೀತರ ರೈತರಿಗೆ ಮಾದರಿಯಾಗಿದ್ದಾನೆ. 2 ಎಕರೆ ಬೀನ್ಸ್​ನಿಂದ 20 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ; ಇಲ್ಲಿದೆ ವಿವರ
ಚಿಕ್ಕಬಳ್ಳಾಪುರದಲ್ಲಿ ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ
Edited By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 4:04 PM

ಚಿಕ್ಕಬಳ್ಳಾಪುರ, ಮೇ.17: ನಗರದ ಹೊರವಲಯದ ತಿಪ್ಪೇನಹಳ್ಳಿ(Thippenahalli) ಗ್ರಾಮದ ಗಿರೀಶ್ ಎನ್ನುವ ಯುವರೈತ, ಪದವಿ ಮುಗಿಸಿ 15 ರಿಂದ 20 ಸಾವಿರ ಸಂಬಳಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನಿಗೆ ಬರುತ್ತಿದ್ದ ಸಂಬಳ ಸಾಕಾಗುತ್ತಿಲ್ಲವೆಂದು ಕೆಲಸ ತೊರೆದು ತಂದೆಯ ಜೊತೆ ಕೃಷಿ, ತೋಟಗಾರಿಕೆಯತ್ತ ವಾಲಿದ್ದಾನೆ. ಅದರಂತೆ ಈ ಬಾರಿ ಬೀನ್ಸ್​ ಬೆಳೆದು ಲಕ್ಷಾಧಿಪತಿ ಅಗಿದ್ದಾನೆ. ಈಗ ಬೀನ್ಸ್​ಗೆ ಬಂಗಾರದ ಬೆಲೆ ಇದೆ. ಕೆಜಿ ಬೀನ್ಸ್ 170 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ.

2 ತಿಂಗಳಿನಲ್ಲಿ 17 ಲಕ್ಷಕ್ಕೂ ಹೆಚ್ಚು ಆದಾಯ

ಇನ್ನು ವಿಪರೀತ ತಾಪಮಾನದಿಂದ ಫಸಲು ಬರದೇ ಮೊಳಕೆಯಲ್ಲೇ ಬೀನ್ಸ್ ಕಮರಿತ್ತು. ಆದರೂ ಛಲಬಿಡದ ಗಿರೀಶ್, ಹಗಲು-ರಾತ್ರಿ ಕಷ್ಟಪಟ್ಟು 2 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದಾನೆ. ಜೊತೆಗೆ ಈಗಾಗಲೇ 4 ರಿಂದ 5 ಸಲ ಕಟಾವು ಮಾಡಿದ್ದು, 10 ಟನ್‍ಗೂ ಹೆಚ್ಚು ಬೀನ್ಸ್ ಬಂದಿದೆ. ಕೆಜಿ ಬೀನ್ಸ್​ಗೆ ಸರಾಸರಿ 180 ರೂಪಾಯಿ ಮಾರಾಟವಾಗಿದೆ. ಇದರಿಂದ ಕೇವಲ 2 ತಿಂಗಳಿನಲ್ಲಿ 17 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾನೆ.

ಇದನ್ನೂ ಓದಿ:ರಾಮನಗರದಲ್ಲಿ ರಣಬಿಸಿಲು: 500 ಕೋಟಿ ಮೌಲ್ಯದ ಮಾವು ಲಾಸ್! 28 ‌ಸಾವಿರ ರೈತ ಕುಟುಂಬಗಳು ಸಂಷಕ್ಟದಲ್ಲಿ

ಗಿರೀಶ್ ತಂದೆ ಹೆಸರಿನಲ್ಲಿ 8 ಎಕರೆ ಜಮೀನಿದೆ. ಅದರಲ್ಲಿ ಗಿರೀಶ್​ 2 ಎಕರೆ ರೋಜಾಹೂವು ಬೆಳೆದಿದ್ದಾನೆ. ಭರಪೂರ ಆದಾಯ ಬರುತ್ತಿದೆ. ಇನ್ನು ತುಂಬಾ ಬಿಸಿಲು ಎಂದು ಈ ಬಾರಿ ರೈತರು ಬೀನ್ಸ್ ಬೆಳೆಯಲು ಹೋಗಿಲ್ಲ. ಆದರೂ ಛಲಬಿಡದ ಗಿರೀಶ್​, ಬೋರ್​ವೇಲ್‍ಗೆ ಜನರೇಟರ್ ಅಳವಡಿಸಿ ಹಗಲು-ರಾತ್ರಿ ಬೀನ್ಸ್ ತೋಟ ಸಾಕುತ್ತಿದ್ದಾನೆ. ಇದರಿಂದ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಿರೀಶ್ ಬೆಳೆದ ಬೀನ್ಸ್​ದೇ ಹವಾ ಹೆಚ್ಚಾಗಿದೆ.

ಬೀನ್ಸ್ ಸೇರಿದಂತೆ ತರಹೆವಾರಿ ತರಕಾರಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಬೀನ್ಸ್​ನ್ನು ದುರ್ಬಿನ್ ಹಾಕಿ ಹುಡುಕುವಂತಾಗಿದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಟನ್‍ಗಟ್ಟಲೇ ಬೀನ್ಸ್ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಬೆರಳಣಿಕೆಯಷ್ಟು ಬೀನ್ಸ್ ಮೂಟೆಗಳು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೀನ್ಸ್​ಗೆ ಬಂಗಾರದ ಬೆಲೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us