AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ

ಮಕ್ಕಳಾಗಿಲ್ಲ ಎಂದು ಹೇಳಿ ಮನೆಗೆ ಬೆಳಕಾಗಿ ಬಂದ ಸೊಸೆಯನ್ನೇ ಮನೆಯಿಂದಲೇ ದೂರ ಇರಿಸುವ ಮೂಲಕ ಅತ್ತೆ ಅಮಾನವೀಯವಾಗಿ ನಡೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಯಿಯ ಈ ಕೃತ್ಯಕ್ಕೆ ಮಗನೂ ಸಾಥ್ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಪತಿ ಮನೆ ಮುಂದೆಯೇ ಧರಣಿ ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ
ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: Rakesh Nayak Manchi|

Updated on:Sep 18, 2023 | 5:29 PM

Share

ಚಿಕ್ಕಬಳ್ಳಾಪುರ, ಸೆ.18: ಅದು ಶ್ರೀಮಂತರಲ್ಲಿ ಶ್ರೀಮಂತ ಕುಟುಂಬ, ಒಂದು ಪ್ರತಿಷ್ಟಿತ ಖಾಸಗಿ ಶಾಲೆ ಬೇರೆ ನಡೆಸುತ್ತಿದೆ, ಇನ್ನು ಅವರ ಮನೆಗೆ ಬಂದ ಸೊಸೆಗೆ ಮದುವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಲಿಲ್ಲ ಅಂತ ಆಕೆಯ ಗಂಡನ ಜೊತೆ ಬೇರೆ ಮನೆ ಮಾಡಿ ಇಟ್ಟಿದ್ರು, ಇನ್ನು ಕೈ ಹಿಡಿದ ಗಂಡ ಕಳೆದ 8 ತಿಂಗಳಿಂದ ಪತ್ನಿಯನ್ನ ಬಿಟ್ಟು ತಾಯಿ ಜೊತೆ ವಾಸ ಮಾಡುತ್ತಿದ್ದಾನೆ ಅಂತ ನೊಂದ ಆತನ ಪತ್ನಿ ,ಅತ್ತೆ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾಳೆ. ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ.

ಅತ್ತೆಯ ಮನೆಯ ಮುಂದೆ ಸೊಸೆ ಅಹೋರಾತ್ರಿ ಧರಣಿ ನಡೆಸುತ್ತಿರೋದು, ಚಿಕ್ಕಬಳ್ಳಾಪುರ ನಗರದ ಮುನ್ಸಿಫಲ್ ಬಡಾವಣೆಯಲ್ಲಿ.. ಹೌದು, ದಿವಂಗತ ನಿವೃತ್ತ ಪ್ರಾಂಶುಪಾಲ ಖುದ್ದೂಸ್ ಹಾಗೂ ಆತನ ಪತ್ನಿ ನ್ಯಾಮತ್ ಬೇಗಂ ರ ಎರಡನೇ ಮಗ ಮುಕ್ತಾರ್​ ಅಹ್ಮದ್ ಪತ್ನಿ ಜಬೀನ್ ತಾಜ್ ಈಗ ನ್ಯಾಯ ಕೋರಿ ಅತ್ತೆ ನ್ಯಾಮತ್ ಬೇಗಂ ಮನೆ ಮುಂದೆ ದರಣಿ ನಡೆಸಿದ್ದಾಳೆ..

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧದ ಶಂಕೆ; ಪತ್ನಿಯನ್ನ ನಡು ಬೀದಿಯಲ್ಲಿ ಕೊಚ್ಚಿ ಕೊಲೆಗೈದ ಪತಿ

ಜಬೀನ್ ತಾಜ್ ಹಾಗೂ ಮುಕ್ತಾರ ಅಹ್ಮದ್ ಗೆ ಮದುವೆಯಾಗಿ 8 ವರ್ಷಗಳಾಗಿವೆ.. ದಂಪತಿಗೆ ಮಕ್ಕಳಾಗಿಲ್ಲವಂತೆ, ಇದೇ ವಿಚಾರಕ್ಕೆ ಅತ್ತೆ, ಬಾವ ಹಾಗೂ ಗಂಡನ ಮದ್ಯೆ ಮನಸ್ತಾಪ ಆಗಿತ್ತಂತೆ, ಇದ್ರಿಂದ ಮುಕ್ತಾರ್​ ಅಹ್ಮದ್, ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿ ಇಟ್ಟಿದ್ದನಂತೆ, ಕಳೆದ 8 ತಿಂಗಳಿನಿಂದ ಪತ್ನಿ ಇರುವ ಕಡೆ ಹೋಗದೆ ತಾಯಿ ಜೊತೆಯೇ ಇದ್ದಾನಂತೆ, ಇದ್ರಿಂದ ಗಂಡನನ್ನ ಹುಡುಕಿಕೊಂಡು ಬಂದು ಅತ್ತೆ ಮನೆ ಮುಂದೆ ಜಬೀನ್ ತಾಜ್ ಧರಣಿ ನಡೆಸಿದ್ದಾಳೆ..

ಆರೋಪ ಅಲ್ಲಗಳೆದ ಮಹಿಳೆ ಪತಿ

ಸೊಸೆ ಮನೆ ಮುಂದು ಬಂದು ಧರಣಿ ಮಾಡುತ್ತಿದ್ದಂತೆ, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಆಕೆಯ ಅತ್ತೆ, ಇಂದು ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ಆಗಮಿಸಿ ಸೊಸೆಯ ವಿರುದ್ದ ದೂರು ನೀಡಿದ್ದಾರೆ, ಆದ್ರೆ ಸೊಸೆ ಚಿಕ್ಕಬಳ್ಳಾಪುರ ಎಸ್ಪಿ ಸೇರಿದಂತೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿ ಧರಣಿ ನಡೆಸಿದ್ದಾಳೆ, ಇದಕ್ಕೆ ಪ್ರತಿಕ್ರಿಯಿಸಿದ ಆಕೆಯ ಗಂಡ ಮುಕ್ತಾರ್​ ಅಹ್ಮದ್ ಪತ್ನಿಯ ಆರೋಪ ಅಲ್ಲಗೆಳೆದಿದ್ದಾನೆ.

ಶ್ರೀಮಂತ ಸುಶಿಕ್ಷಿತ ವಿದ್ಯಾವಂತ ಕುಟುಂಬದಲ್ಲೇ ಸೊಸೆಗೆ ಮಕ್ಕಳಾಗಿಲ್ಲ ಅಂತ, ಮನೆಯಿಂದ ದೂರ ಇಟ್ಟು ಈಗ ಆಕೆಯಿಂದ ಗಂಡನನ್ನ ದೂರ ಮಾಡಿದ್ದಕ್ಕೆ ನೊಂದ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿ ಒಬ್ಬಂಟಿಯಾಗಿ ಅತ್ತೆ ಮನೆ ಮುಂದೆ ಧರಣಿ ನಡೆಸಿದ್ದಾಳೆ, ಪೊಲೀಸರು ಒಂಟಿ ಮಹಿಳೆಯ ಧರಣಿಗೆ ಯಾವುದೇ ರಕ್ಷಣೆ ನೀಡಿಲ್ಲ, ಇದ್ರಿಂದ ಮಹಿಳೆ ಪೊಲೀಸರ ವಿರುದ್ದವೂ ಅಸಮದಾನ ವ್ಯಕ್ತಪಡಿಸಿದ್ದಾಳೆ.. ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Mon, 18 September 23

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ