AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿ ಮಂತ್ರಿ ಪಟ್ಟದ ಷರತ್ತು ಹಾಕಿದ್ರಾ ಕಾಂಗ್ರೆಸ್ ಶಾಸಕ?

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅಕ್ರಮ ಆನ್​​ಲೈನ್ ಗೇಮ್ ಕೇಸ್ ಸಂಬಂಧ ಸದ್ಯ ಇಡಿ ಇಕ್ಕಳದಲ್ಲಿ ಸಿಲುಕಿ ಜೈಲಿನಲ್ಲಿ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ. ಸದ್ಯ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿಯ ಸಾಮ್ರಾಜ್ಯವನ್ನ ಜಾಲಾಡುತ್ತಿದ್ದು, ಚಿನ್ನದ ಖಜಾನೆಯೇ ಸಿಕ್ಕಿದೆ. ಹಾಗಾದ್ರೆ, ಪಪ್ಪಿ ಸಾಮ್ರಾಜ್ಯದಲ್ಲಿ ಇಡಿಗೆ ಸಿಕ್ಕಿದ್ದೇನು? ಅದಕ್ಕೂ ಮುನ್ನ ಕೋಟಿ ಕೋಟಿ ಸಾಮ್ರಾಜ್ಯ ಕಟ್ಟಿ ಕೊಂಡಿರೋ ವೀರೇಂದ್ರ ಪಪ್ಪಿಯ ಪ್ಲ್ಯಾನ್ ಏನಾಗಿತ್ತು? ಅದೆಂಥಾ ಷರತ್ತು ಹಾಕಿ ಹಣ ಹೂಡಿಕೆ ಮಾಡಲು ಪಪ್ಪಿ ರೆಡಿಯಾಗಿದ್ರು ಎನ್ನುವ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ.

ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿ ಮಂತ್ರಿ ಪಟ್ಟದ ಷರತ್ತು ಹಾಕಿದ್ರಾ ಕಾಂಗ್ರೆಸ್ ಶಾಸಕ?
Kc Veerendra Puppy
ಬಸವರಾಜ ಮುದನೂರ್, ಚಿತ್ರದುರ್ಗ
| Updated By: Digi Tech Desk|

Updated on:Oct 14, 2025 | 5:27 PM

Share

ಚಿತ್ರದುರ್ಗ, (ಅಕ್ಟೋಬರ್ 10): ಇಡಿ (ED) ಅಧಿಕಾರಿಗಳ ತನಿಖೆ ವೇಳೆ ಚಿತ್ರದುರ್ಗ (Chitradruga) ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯ (Congress MLA Veerenra Pappy) ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ರಾಜ್ಯ ಸಚಿವ ಸಂಪುಟ ಸೇರಿಸಿಕೊಳ್ಳುವಂತೆ ವೀರೇಂದ್ರ ಪಪ್ಪಿ ಷರತ್ತುವೊಂದನ್ನ ಹಾಕಿದ್ರಂತೆ. ಬಿಹಾರ ಚುನಾವಣೆಗೆ 300 ಕೋಟಿ ರೂಪಾಯಿ ಫಂಡ್ ಮಾಡಲು ಸಿದ್ಧವಾಗಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಫಂಡಿಂಗ್ ಮಾಡಿ, ತಾನು ಮಂತ್ರಿಯಾಗಲು ಪ್ಲ್ಯಾನ್ ಸಹ ಮಾಡಿಕೊಂಡಿದ್ದರು ಎನ್ನುವ ಸ್ಫೋಟಕ ಅಂಶ ತಿಳಿದುಬಂದಿದೆ. ಆದ್ರೆ, ಇಡಿ ದಾಳಿಯಿಂದ ವೀರೇಂದ್ರ ಪಪ್ಪಿಯ ಸಚಿವ ಸ್ಥಾನದ ಕನಸು ಭಗ್ನವಾಗಿದ್ದು, ರಾಜಕೀಯ ಭವಿಷ್ಯಕ್ಕೆ ಬ್ರೇಕ್ ಬಿದ್ದಿದೆ.

ಸದ್ಯ ವಿರೇಂದ್ರ ಪಪ್ಪಿ ನ್ಯಾಯಾಂಗ ಬಂಧನದ್ದರೆ, ಇತ್ತ ನಿನ್ನೆಯೂ(ಅ.09) ಚೆಳ್ಳಿಕೆರೆಯ ಫೆಡರಲ್ ಬ್ಯಾಂಕ್‌ನಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, 2 ಲಾಕರ್‌ನಲ್ಲಿ 50 ಕೋಟಿ ರೂಪಾಯಿ ಮೌಲ್ಯದ 44 ಕೆಜಿಯಷ್ಟು ಚಿನ್ನವನ್ನ ಸೀಜ್ ಮಾಡಲಾಗಿದೆ. ಈ ಮೂಲಕ ಇದುವರೆಗೂ ಬರೋಬ್ಬರಿ 150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಲಾಕರ್ ರಹಸ್ಯ ಬಯಲು: ಇಡಿಗೆ ಸಿಕ್ತು 44 ಕೆಜಿ ಚಿನ್ನ

103ಕೋಟಿ ಮೌಲ್ಯದ ವಾಹನಗಳು, 21ಕೆಜಿ ಚಿನ್ನ

ಈವರೆಗೂ ಪಪ್ಪಿಗೆ ಸೇರಿರುವ 103 ಕೋಟಿ ಮೌಲ್ಯದ ವಾಹನಗಳು ಮತ್ತು 21 ಕೆಜಿಯಷ್ಟು ಚಿನ್ನವನ್ನ ಇಡಿ ಸೀಜ್ ಮಾಡಿದೆ. ಅಲ್ಲದೇ 150 ಕೋಟಿ ಆನ್‌ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಆದಾಯ ಪತ್ತೆಯಾಗಿದ್ದು, ಬೆಟ್ಟಿಂಗ್ ಆ್ಯಪ್‌ಗಳ ಮೂಲಕವೇ ಸುಮಾರು 2 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿರೋ ಇಡಿ ತನಿಖೆಯಿಂದ ಗೊತ್ತಾಗಿದೆ. ಹಾಗೆಯೇ ಇಡಿ ಅಧಿಕಾರಿಗಳ ತನಿಖೆ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ.

ಅಕ್ರಮ ಬೆಟ್ಟಿಂಗ್ ಆ್ಯಪ್ ಮೂಲಕ ಹಣ ಸಂಪಾದಿಸಿ ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿ, ಮಂತ್ರಿಯಾಗಲು ವೀರೇಂದ್ರ ಪಪ್ಪಿ ಸಿದ್ಧರಾಗಿದ್ರು ಎನ್ನಲಾಗಿದೆ. ಆದ್ರೆ, ಇಡಿ ದಾಳಿಯಿಂದ ವೀರೇಂದ್ರ ಪಪ್ಪಿಯ ಲೆಕ್ಕಾಚಾರಗಳು ಉಲ್ಟಾ ಆಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್: ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂ. ಜಪ್ತಿ

ಒಟ್ಟಾರೆಯಾಗಿ, ಈ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ವೀರೇಂದ್ರ ಪಪ್ಪಿಯವರ ಒಡೆತನದ ಸಂಸ್ಥೆಗಳು ಒಂದೇ ಗೇಟ್‌ವೇ ಮೂಲಕ 2,000 ಕೋಟಿಗೂ ಹೆಚ್ಚು ಹಣವನ್ನ ಸಂಗ್ರಹಿಸಿರುವ ಬಗ್ಗೆ ಕೋರ್ಟ್​​ಗೆ ಇ.ಡಿ ಮಾಹಿತಿ ನೀಡಿದೆ.. ಇ.ಡಿ ದಾಳಿ ಮುಂದುವರೆದಿದ್ದು, ಪ್ರಕರಣದ ತನಿಖೆ ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆಯಿದೆ.

ಕ್ಯಾಸಿನೋ ಬ್ಯುಸಿನೆಸ್, ಆನ್​ಲೈನ್​, ಆಫ್​ಲೈನ್​ ಬೆಟ್ಟಿಂಗ್​​ ಪ್ರಕರಣದಲ್ಲಿ ಕಾಂಗ್ರೆಸ್​​ ಶಾಸಕ, ಉದ್ಯಮಿ ವೀರೇಂದ್ರ ಪಪ್ಪಿಯ ಸಾಮ್ರಾಜ್ಯ ಕಂಡ ಇಡಿ ಶಾಕ್​ ಆಗಿದೆ.

ರಾಹುಲ್ ಗಾಂಧಿ ಮಾಡೆಲ್ ಎಂದ ಬಿಜೆಪಿ

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ. ಕಾಂಗ್ರೆಸ್ ಭ್ರಷ್ಟ ಶಾಸಕ ವೀರೇಂದ್ರ ಪಪ್ಪಿ ಬಂಧನವಾಗದಿದ್ದರೆ ಬಿಹಾರ ಚುನಾವಣೆಗೆ ಕಾಂಗ್ರೆಸ್​ಗೆ ಫಂಡಿಂಗ್​ ದೊರೆಯುತ್ತಿತ್ತು. ಹೈಕಮಾಂಡ್​ ಗೆ 300 ಕೋಟಿ ಫಂಡಿಂಗ್ ದೊರೆಯುತ್ತಿತ್ತು. ಅಲ್ಲದೇ ಭ್ರಷ್ಟ ಶಾಸಕ ಸಚಿವರಾಗುವ ಅವಕಾಶ ಪಡೆಯುತ್ತಿದ್ರು. ಇದು ರಾಹುಲ್ ಗಾಂಧಿ ಮಾಡೆಲ್. ಕಾಂಗ್ರೆಸ್​ನಲ್ಲಿರುವ ಬಹುತೇಕ ನಾಯಕರ ಕಥೆ ಇದೇ ಆಗಿದೆ. ರಾಹುಲ್, ಕುಟುಂಬದ ಜೋಳಿಗೆ ತುಂಬಿದ್ರೆ CM ಆಗಬಹುದು. ಶಾಸಕ ಏನು ಮಂತ್ರಿ, ಮುಖ್ಯಮಂತ್ರಿಯೂ ಆಗಬಹುದು ಎಂದು ವ್ಯಂಗ್ಯವಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Fri, 10 October 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ