AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆ; ಊರಿಗೆ ಬೇಲಿ ಹಾಕಿ ಊರು ತೊರೆದ ಗ್ರಾಮಸ್ಥರು

ರಾಜ್ಯದ ಬಹುತೇಕ ಕಡೆ ಭರ್ತಿ ಮಳೆ ಸುರಿದಿದೆ, ಕೆಲವೆಡೆ ಪ್ರವಾಹವೇ ಸಂಭವಿಸಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆಗಳು ನಡೆಯುತ್ತಿವೆ. ಜನ ಜಾನುವಾರು, ದೇವರ ಉತ್ಸವಮೂರ್ತಿಗಳ ಸಮೇತ ಊರು ತೊರೆದ ಜನ, ಊರಿಗೇ ಬೇಲಿ ಹಾಕುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆದಿದೆ. ಏನೀ ವಿಶಿಷ್ಟ ಆಚರಣೆ ಅಂತೀರಾ? ಈ ವರದಿ ಓದಿ.

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆ; ಊರಿಗೆ ಬೇಲಿ ಹಾಕಿ ಊರು ತೊರೆದ ಗ್ರಾಮಸ್ಥರು
ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Aug 10, 2024 | 10:10 PM

Share

ಚಿತ್ರದುರ್ಗ, ಆ.10: ಚಿತ್ರದುರ್ಗ(Chitradurga) ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದಲ್ಲಿ ಬರದ ಛಾಯೆ ಮೂಡಿದೆ. ನಿರಂತರ ಬರಗಾಲ ಎದುರಿಸುತ್ತಿರುವ ಜನರು ಪುರಾತನ ಆಚರಣೆಯ ಮೊರೆ ಹೋಗಿದ್ದಾರೆ. ಈ ಹಿಂದಿನಿಂದಲೂ ಈ ಭಾಗದ ಜನರು ಬರಗಾಲ ಆವರಿಸಿದ ಸಂದರ್ಭದಲ್ಲಿ ಹೊರಬೀಡು ಆಚರಣೆ ಆಚರಿಸುತ್ತಾರೆ. ಕಳೆದೆ ಒಂದೂವರೆ ದಶಕದ ಹಿಂದೆ ಈ ಆಚರಣೆ ಆಚರಿಸಲಾಗಿತ್ತು. ಇದೀಗ ಮತ್ತೆ ಅಂಥದ್ದೇ ಭೀಕರ ಬರಗಾಲದ ಛಾಯೆ ಮೂಡಿದ್ದು ಬಡ ಜನರು, ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಊರ ಹಿರಿಯರು ಹೊರಬೀಡು ಆಚರಣೆಗೆ ನಿರ್ಧರಿಸಿದ್ದಾರೆ.

ಏನೀ ಆಚರಣೆ?

ಅಂತೆಯೇ ಇಂದು ಬೆಳಗ್ಗೆ 6ಗಂಟೆಗೆ ಊರು ತೊರೆದ ಗ್ರಾಮಸ್ಥರು ಊರಿಗೇ ಬೇಲಿ ಹಾಕಿದ್ದರು. ಆರಾಧ್ಯ ದೇವರುಗಳಾದ ಜುಂಜಪ್ಪ, ರಂಗಪ್ಪ ಮತ್ತು ತಿಮ್ಮಪ್ಪ ಉತ್ಸವ ಮೂರ್ತಿಗಳನ್ನು ಊರು ಹೊರಗಿನ ಹನುಮಪ್ಪನ ದೇಗುಲಕ್ಕೆ ತರುತ್ತಾರೆ. ದಿನ ಬಳಕೆಯ ವಸ್ತುಗಳು, ಧವಸ ಧಾನ್ಯಗಳು, ಜಾನುವಾರುಗಳ ಸಮೇತ ಬಂದು ಹೊರವಲಯದ ತೋಟ, ಗದ್ದೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇಡೀ ದಿನ ಅಲ್ಲೆ ಇದ್ದೂ ಹೊಲ ಗದ್ದೆಗಳಲ್ಲೇ ತಿಂಡಿ, ಊಟೋಪಚಾರ ಮುಗಿಸುತ್ತಾರೆ. ಸಂಜೆ ವೇಳೆಗೆ ಹನುಮಪ್ಪನ ದೇಗುಲ ಬಳಿಯ ಮಜ್ಜನ ಬಾವಿಯಲ್ಲಿ ಆರಾಧ್ಯ ದೇವರುಗಳ ಗಂಗಾಪೂಜೆ ಪೂರೈಸಿ ಮಳೆ ಬೆಳೆ ಸಮೃದ್ಧಿಗೆ ಪ್ರಾರ್ಥಿಸುತ್ತಾರೆ. ಗೋಪೂಜೆ ಸಲ್ಲಿಸಿ ಹೊತ್ತು ಮುಳುಗುವ ವೇಳೆಗೆ ಸರಿಯಾಗಿ ಗ್ರಾಮಕ್ಕೆ ಬರುತ್ತಾರೆ. ಮೊದಲು ಗೋವನ್ನು ಗ್ರಾಮ ಪ್ರವೇಶಕ್ಕೆ ಬಿಟ್ಟು ಬಳಿಕ ದೇವರುಗಳೊಂದಿಗೆ ಗ್ರಾಮಸ್ಥರು ಗ್ರಾಮ ಪ್ರವೇಶಿಸುತ್ತಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ; ಕೆಲ ಹೊತ್ತಲ್ಲೇ ವರುಣನ ಆಗಮನ

ಇನ್ನು ಬುಡಕಟ್ಟು ಸಂಸ್ಕೃತಿಯ ಈ ಹೊರಬೀಡು ಆಚರಣೆ ಕೇವಲ ಕಾಡುಗೊಲ್ಲರಿಗೆ ಮಾತ್ರ ಸೀಮಿತ ಆಗಿಲ್ಲ. ಬದಲಾಗಿ ದೊಡ್ಡೇರಿ ಉಪ್ಪಾರಹಟ್ಟಿಯಲ್ಲಿ ವಾಸವಾಗಿರುವ ಎಲ್ಲಾ ಸಮುದಾಯದ ಜನರೂ ಭಾಗಿ ಆಗುತ್ತಾರೆ. ಯಾರೊಬ್ಬರೂ ಸಹ ಊರಲ್ಲಿ ಉಳಿಯೋದಿಲ್ಲ. ಇಡೀ ಒಂದು ದಿನ ಹಗಲು ಊರ ಹೊರಗೇ ಕಳೆದು ಸಂಜೆ ಹೊತ್ತಿಗೆ ಊರಿಗೆ ವಾಪಸ್ ಆಗುತ್ತಾರೆ. ಆ ಮೂಲಕ ಮಳೆ ಬೆಳೆ ಸಮೃದ್ಧಿ ಆಗಿರುತ್ತದೆ, ರೋಗ ರುಜನಿ ದೂರಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆಂಬ ನಂಬಿಕೆ ಜನರಲ್ಲಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದಲ್ಲಿ ಬರದ ಛಾಯ ಆವರಿಸಿದೆ. ಹೀಗಾಗಿ, ಬುಡಕಟ್ಟು ಸಮುದಾಯಗಳ ಜನರು ಮಳೆಗಾಗಿ ವಿಭಿನ್ನ ಆಚರಣೆಗಳಲ್ಲಿ ತೊಡಗಿದ್ದಾರೆ. ಕೃಷಿಕರು, ಕಾರ್ಮಿಕರು ಮಳೆ ಇಲ್ಲದೆ ಕಂಗಾಲಾಗಿದ್ದು ವರುಣ ದೇವ ಕೃಪೆ ತೋರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು