AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dredgers Wanted: ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳು ಎತ್ತುವವರು ತಕ್ಷಣ ಬೇಕಾಗಿದ್ದಾರೆ!

ಸಾಗರಮಾಲ ಕೋಸ್ಟಲ್ ಬರ್ತ್ ಯೋಜನೆಯಡಿ ಕ್ಯಾಪಿಟಲ್ ಡ್ರೆಜ್ಜಿಂಗ್ ಮಾಡಲು ಕರೆದಿರುವ ಟೆಂಡರ್‌ ಸಹ ಆಗದಿರುವ ಕಾರಣ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹೂಳೆತ್ತಲು ಎಂಟು ಬಾರಿ ಟೆಂಡರ್ ಕರೆದರು ದೇಶದಲ್ಲಿ ಹೂಳೆತ್ತುವ ಟೆಂಡರ್ ಷರತ್ತು ಪಾಲಿಸುವ ಕಂಪೆನಿಗಳ ಕೊರತೆಯಿಂದ ಅದು ರದ್ದಾಗುತ್ತಿದೆ!

Dredgers Wanted: ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳು ಎತ್ತುವವರು ತಕ್ಷಣ ಬೇಕಾಗಿದ್ದಾರೆ!
ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಹೂಳೆತ್ತುವವರು ತಕ್ಷಣ ಬೇಕಾಗಿದ್ದಾರೆ!
ಅಶೋಕ್​ ಪೂಜಾರಿ, ಮಂಗಳೂರು
| Updated By: ಸಾಧು ಶ್ರೀನಾಥ್​

Updated on: Jan 20, 2024 | 1:46 PM

Share

ಮಂಗಳೂರಿನ ಹಳೆ ಬಂದರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುವ ಪ್ರಮುಖ ಪೋರ್ಟ್. ಆದ್ರೆ ಇಲ್ಲಿ ಹಲವು ವರ್ಷಗಳಿಂದ ಹೂಳನ್ನು ಎತ್ತದಿರುವ ಕಾರಣ ದೋಣಿ, ಹಡಗುಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದೀಗ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಪ್ರಾರಂಭಕ್ಕೂ ಇದು ಹಿನ್ನಡೆಯಾಗುತ್ತಿದೆ.

ಹೌದು..ದೃಶ್ಯದಲ್ಲಿ ಕಾಣ್ತಿರೋದು ಮಂಗಳೂರಿನ ಹಳೆ ಬಂದರು. ಈ ಹಳೆ ಬಂದರಿನ ಮೂಲಕ ಪ್ರಮುಖವಾಗಿ ಲಕ್ಷದ್ವೀಪಕ್ಕೆ ಪ್ರತಿನಿತ್ಯ ಕೋಟ್ಯಾಂತರ ಮೌಲ್ಯದ ಸರಕುಗಳ ರಫ್ತಾಗುತ್ತಿದೆ. ಆದ್ರೆ ಇಲ್ಲಿ ಸಮುದ್ರದಿಂದ ಫಲ್ಗುಣಿ ನದಿ ಮೂಲಕ ಈ ಬಂದರಿಗೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಹೂಳು ತುಂಬಿಕೊಂಡಿದೆ. ಹಲವು ಸಮಯದಿಂದ ಡ್ರೆಜ್ಜಿಂಗ್ ಮಾಡಿ ತುಂಬಿರುವ ಹೂಳು ತೆಗೆಯದಿರುವ ಕಾರಣ ಬಂದರಿನಲ್ಲಿ ದೋಣಿ, ಹಡಗುಗಳ ಸುಗಮ ಸಂಚಾರಕ್ಕೆ ಸಂಚಕಾರವಾಗುತ್ತಿದೆ.

ಸಾಗರಮಾಲ ಕೋಸ್ಟಲ್ ಬರ್ತ್ ಯೋಜನೆಯಡಿ ಕ್ಯಾಪಿಟಲ್ ಡ್ರೆಜ್ಜಿಂಗ್ ಮಾಡಲು ಕರೆದಿರುವ ಟೆಂಡರ್‌ ಸಹ ಆಗದಿರುವ ಕಾರಣ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹೂಳೆತ್ತಲು ಎಂಟು ಬಾರಿ ಟೆಂಡರ್ ಕರೆದರು ದೇಶದಲ್ಲಿ ಹೂಳೆತ್ತುವ ಟೆಂಡರ್ ಷರತ್ತು ಪಾಲಿಸುವ ಕಂಪೆನಿಗಳ ಕೊರತೆಯಿಂದ ಅದು ರದ್ದಾಗುತ್ತಿದೆ ಎನ್ನುತ್ತಾರೆ ಇಮ್ರಾನ್, ಉಪಾಧ್ಯಕ್ಷ-ಹಳೆ ಬಂದರು ಅಸೋಸಿಯೇಶನ್.

ಮಂಗಳೂರಿನ ಹಳೆಬಂದರಿನಲ್ಲಿ ಬರೀ ಹೂಳು! ಬೋಟ್‌ ಸಂಚಾರಕ್ಕೆ ಇದೇ ಸಂಚಕಾರ!

ಸದ್ಯ ಸಮುದ್ರದಿಂದ ಫಲ್ಗುಣಿ ನದಿ ಮೂಲಕ ಈ ಹಳೆ ಬಂದರಿಗೆ 300ರಿಂದ 500 ಟನ್ ಸಾಮರ್ಥ್ಯದ ಸಣ್ಣ ಹಡಗು ಅಂದ್ರೆ ಮಂಜಿ ಮಾತ್ರ ಬರ್ತಿದೆ. ಆದ್ರೆ ಏಳು ಮೀಟರ್ ಆಳಕ್ಕೆ ಹೂಳೆತ್ತಿದ್ರೆ ಕನಿಷ್ಟ ಐದು ಸಾವಿರ ಟನ್ ಸಾಮರ್ಥ್ಯದ ಹಡಗು ಬರಲು ಸಾಧ್ಯವಾಗಲಿದ್ದು ಹತ್ತು ಪಟ್ಟು ಸಾಮರ್ಥ್ಯ ಹೆಚ್ಚಾಗಲಿದೆ.

ಈ ಮೂಲಕ ದೇಶದ ಎಲ್ಲ ಪ್ರಮುಖ ಬಂದರುಗಳಿಂದಲೂ ಹಡಗು ಬರಲಿದ್ದು ಬಂದರಿನ ವಾಣಿಜ್ಯ, ಆರ್ಥಿಕ ಚಟುವಟಿಕೆ ಹೆಚ್ಚಲಿದೆ. ಇದೀಗ ಲಕ್ಷದ್ವೀಪಕ್ಕೆ ತೆರಳುವ ಮಂಜಿಗಳು ಲೋಡ್ ಆಗಿ ಹೊರಗಡೆ ಹೋಗಬೇಕೆನ್ನುವಷ್ಟರಲ್ಲಿ ಹೂಳಿನಿಂದ ಅವಘಡ ಸಂಭವಿಸಿದ್ರೆ ಮತ್ತೆ ವಾಪಾಸು ಬಂದರಿಗೆ ಬಂದು ಸರಕುಗಳನ್ನು ಅನ್‌ಲೋಡ್ ಮಾಡಿ ಮಂಜಿಯನ್ನು ರಿಪೇರಿ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಪ್ರಾರಂಭಿಸುವ ದೃಷ್ಟಿಯಿಂದಲು ಶೀಘ್ರ ಹೂಳೆತ್ತುವ ಒತ್ತಾಯ ಕೇಳಿಬಂದಿದೆ.

ಮುಂದೆ ಯಾವುದೇ ದೊಡ್ಡ ಹಡಗು ಬರಬೇಕಾದರೂ ಹೂಳೆತ್ತುವುದು ಅನಿವಾರ್ಯವಾಗಲಿದೆ. ಇದೇ ರೀತಿ ಹೂಳು ಹೆಚ್ಚಾದ್ರೆ ಮೀನುಗಾರಿಕಾ ಬೋಟ್ ಸಂಚಾರಕ್ಕೂ ತೊಂದರೆಯಾಗಲಿದೆ. ಹೀಗಾಗಿ ಶೀಘ್ರ ಹೂಳೆತ್ತುವ ಕೆಲಸಕ್ಕೆ ಬಂದರು ಇಲಾಖೆ ಕ್ರಮವಹಿಸಬೇಕಾಗಿದೆ.

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!