AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ

ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್‌ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು.

ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 09, 2022 | 9:53 AM

Share

ಮಂಗಳೂರು: ಬಣ್ಣದಲ್ಲಿ ಮಿಂದೇಳೋ ಹೋಳಿ ಹಬ್ಬ(Holi Celebration) ಇನ್ನೂ ದೂರ ಇದೆ. ಆದ್ರೆ ಮಂಗಳೂರಿನಲ್ಲಿ ಮಾತ್ರ ಈಗ್ಲೇ ಓಳಿಯ ಆಚರಣೆಯಾಗಿದೆ. ವೆಂಕಟರಮಣ ಜಾತ್ರೆಯಲ್ಲಿ( Venkataramana Jatre) ಭಕ್ತರು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಮಕ್ಕಳ, ಹಿರಿಯರು, ಯುವಕ-ಯುವತಿಯರು ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದಿದ್ದಾರೆ. ಕೈಯಲ್ಲಿ ಪಿಚಕಾರಿ ಹಿಡಿದು ಬಣ್ಣದೋಕುಳಿಯಾಡಿದ್ದಾರೆ. ಇದ್ರ ನಡುವೆ ಚಂಡೆ ಸದ್ದಿಗೆ ಹೆಜ್ಜೆ ಹಾಕುತ್ತ ಎಲ್ಲರೂ ಕುಣಿದು ಎಂಜಾಯ್‌ ಮಾಡಿದ್ದಾರೆ.

ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್‌ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು. ನಿನ್ನೆ ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿ ಸೇರಿತ್ತು. ಈ ವೇಳೆ ದೇವರ ಈ ಸ್ನಾನವನ್ನ ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ರು.

ಇನ್ನು ವೆಂಕಟ್ರಮಣ ದೇವರ ರಥೋತ್ಸವ ಅಂದ್ರೆ ಎಲ್ಲಾ ಬಂಧುಗಳು ಸೇರೋ ಹಬ್ಬ . ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನ ಭೇಟಿಯಾಗೋ ಒಂದು ಸದಾವಕಾಶವೂ ಸಿಕ್ಕಂತಾಗುತ್ತೆ. ಕೆಲಸದ ಮೇಲೆ ದೂರ ದೂರ ಆಗಿರೋರು ಈ ಹಬ್ಬದ ವೇಳೆ ಇಲ್ಲಿ ಸಂಗಮವಾಗ್ತಾರೆ. ಅದ್ರಲ್ಲೂ ರಥೋತ್ಸವ ಮಿಸ್ ಮಾಡಿಕೊಂಡ್ರೂ ಈ ಓಕುಳಿ ಹಬ್ಬವನ್ನ ಮಿಸ್ ಮಾಡಿಕೊಳ್ಳೋದಿಲ್ಲ. ಮುಂಜಾನೆಯಿಂದ ಸಂಜೆವರೆಗೂ ಬಣ್ಣದ ಎರಚಾಟ, ಹಾಡು , ಕುಣಿತ ನಿರಂತರವಾಗಿ ಸಾಗುತ್ತೆ. ಒಟ್ನಲ್ಲಿ ಕೊರೊನಾ ನಡುವೆ ಜಾತ್ರೆಗಳೆಲ್ಲಾ ಬಂದ್‌ ಆಗಿದ್ವು. ಆದ್ರೀಗ ಸೋಂಕು ಕಡಿಮೆಯಾಗ್ತಿದ್ದಂತೆ ಮತ್ತೆ ಉತ್ಸವಗಳು ಆರಂಭವಾಗಿವೆ. ಅದ್ರಲ್ಲೂ ಕರಾವಳಿಯ ಈ ಬಣ್ಣದೋಕುಳಿ ಕಲರವ ಸೃಷ್ಟಿಸಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

Devotees Holi celebration in venkataramana jatre

ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದ ಯುವಕ-ಯುವತಿಯರು

Devotees Holi celebration in venkataramana jatre

ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದ ಭಕ್ತರು

Devotees Holi celebration in venkataramana jatre

ಜಾತ್ರೆಯಲ್ಲಿ ಮಕ್ಕಳ ಹೋಳಿ ಸಂಭ್ರಮ

ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್​ ಸ್ಟಾರ್​’ ನೀಡಿದ ಸೂಪರ್​ ಅವಕಾಶ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!