AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ

ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್‌ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು.

ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Feb 09, 2022 | 9:53 AM

Share

ಮಂಗಳೂರು: ಬಣ್ಣದಲ್ಲಿ ಮಿಂದೇಳೋ ಹೋಳಿ ಹಬ್ಬ(Holi Celebration) ಇನ್ನೂ ದೂರ ಇದೆ. ಆದ್ರೆ ಮಂಗಳೂರಿನಲ್ಲಿ ಮಾತ್ರ ಈಗ್ಲೇ ಓಳಿಯ ಆಚರಣೆಯಾಗಿದೆ. ವೆಂಕಟರಮಣ ಜಾತ್ರೆಯಲ್ಲಿ( Venkataramana Jatre) ಭಕ್ತರು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಮಕ್ಕಳ, ಹಿರಿಯರು, ಯುವಕ-ಯುವತಿಯರು ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದಿದ್ದಾರೆ. ಕೈಯಲ್ಲಿ ಪಿಚಕಾರಿ ಹಿಡಿದು ಬಣ್ಣದೋಕುಳಿಯಾಡಿದ್ದಾರೆ. ಇದ್ರ ನಡುವೆ ಚಂಡೆ ಸದ್ದಿಗೆ ಹೆಜ್ಜೆ ಹಾಕುತ್ತ ಎಲ್ಲರೂ ಕುಣಿದು ಎಂಜಾಯ್‌ ಮಾಡಿದ್ದಾರೆ.

ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್‌ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು. ನಿನ್ನೆ ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿ ಸೇರಿತ್ತು. ಈ ವೇಳೆ ದೇವರ ಈ ಸ್ನಾನವನ್ನ ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ರು.

ಇನ್ನು ವೆಂಕಟ್ರಮಣ ದೇವರ ರಥೋತ್ಸವ ಅಂದ್ರೆ ಎಲ್ಲಾ ಬಂಧುಗಳು ಸೇರೋ ಹಬ್ಬ . ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನ ಭೇಟಿಯಾಗೋ ಒಂದು ಸದಾವಕಾಶವೂ ಸಿಕ್ಕಂತಾಗುತ್ತೆ. ಕೆಲಸದ ಮೇಲೆ ದೂರ ದೂರ ಆಗಿರೋರು ಈ ಹಬ್ಬದ ವೇಳೆ ಇಲ್ಲಿ ಸಂಗಮವಾಗ್ತಾರೆ. ಅದ್ರಲ್ಲೂ ರಥೋತ್ಸವ ಮಿಸ್ ಮಾಡಿಕೊಂಡ್ರೂ ಈ ಓಕುಳಿ ಹಬ್ಬವನ್ನ ಮಿಸ್ ಮಾಡಿಕೊಳ್ಳೋದಿಲ್ಲ. ಮುಂಜಾನೆಯಿಂದ ಸಂಜೆವರೆಗೂ ಬಣ್ಣದ ಎರಚಾಟ, ಹಾಡು , ಕುಣಿತ ನಿರಂತರವಾಗಿ ಸಾಗುತ್ತೆ. ಒಟ್ನಲ್ಲಿ ಕೊರೊನಾ ನಡುವೆ ಜಾತ್ರೆಗಳೆಲ್ಲಾ ಬಂದ್‌ ಆಗಿದ್ವು. ಆದ್ರೀಗ ಸೋಂಕು ಕಡಿಮೆಯಾಗ್ತಿದ್ದಂತೆ ಮತ್ತೆ ಉತ್ಸವಗಳು ಆರಂಭವಾಗಿವೆ. ಅದ್ರಲ್ಲೂ ಕರಾವಳಿಯ ಈ ಬಣ್ಣದೋಕುಳಿ ಕಲರವ ಸೃಷ್ಟಿಸಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

Devotees Holi celebration in venkataramana jatre

ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದ ಯುವಕ-ಯುವತಿಯರು

Devotees Holi celebration in venkataramana jatre

ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದ ಭಕ್ತರು

Devotees Holi celebration in venkataramana jatre

ಜಾತ್ರೆಯಲ್ಲಿ ಮಕ್ಕಳ ಹೋಳಿ ಸಂಭ್ರಮ

ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್​ ಸ್ಟಾರ್​’ ನೀಡಿದ ಸೂಪರ್​ ಅವಕಾಶ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?