ಮಂಗಳೂರಿನ ಹಲವೆಡೆ ಅಂಗನವಾಡಿಗಳಲ್ಲಿ ಮತ್ತೆ ಕೊಳೆತ ಮೊಟ್ಟೆ ಪೂರೈಕೆ; ಗರ್ಭಿಣಿ, ಮಕ್ಕಳು ಅಸ್ವಸ್ಥ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2023 | 4:35 PM

ಕಳೆದ ತಿಂಗಳು ಮಂಗಳೂರಿನ ಹಲವೆಡೆ ಕೊಳೆತ ಮೊಟ್ಟೆಗಳು ಪೂರೈಕೆಯಾಗಿತ್ತು. ಈ ಬಾರಿಯೂ ಮೊಟ್ಟೆ ಪೂರೈಸುವ ಗುತ್ತಿಗೆದಾರರು ಅಂಗನವಾಡಿಗೆ ಮತ್ತೆ ಕೊಳೆತ ಮೊಟ್ಟೆ ಕೊಟ್ಟಿದ್ದಾರೆ. ಈ ಹಿನ್ನಲೆ ಇದೀಗ ಕೊಳೆತ ಮೊಟ್ಟೆ ಸೇವಿಸಿ ಗರ್ಭಿಣಿ ಮತ್ತು ಮಗು ಅಸ್ವಸ್ಥರಾದ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನ ಹಲವೆಡೆ ಅಂಗನವಾಡಿಗಳಲ್ಲಿ ಮತ್ತೆ ಕೊಳೆತ ಮೊಟ್ಟೆ ಪೂರೈಕೆ; ಗರ್ಭಿಣಿ, ಮಕ್ಕಳು ಅಸ್ವಸ್ಥ
ಮಂಗಳೂರಿನಲ್ಲಿ ಕೊಳೆತ ಮೊಟ್ಟೆ ಸೇವಿಸಿ ಗರ್ಭೀಣಿ ಅಸ್ವಸ್ಥ
Follow us on

ಮಂಗಳೂರು, ಆ.10: ಇತ್ತೀಚೆಗೆ ರಾಜ್ಯದ ಹಲವೆಡೆ ಕೊಳೆತ ಮೊಟ್ಟೆಗಳು(Rotten Eggs) ನೀಡಿದ ಆರೋಪ ಕೇಳಿಬಂದಿತ್ತು. ಅದರಂತೆ ಇದೀಗ ಮಂಗಳೂರು(Mangalore) ಹೊರವಲಯದ ಕಾಟಿಪಳ್ಳ ಆಸುಪಾಸಿನಲ್ಲಿನ ಅಂಗನವಾಡಿ (Anganwadi) ಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದ್ದು, ಆಕಾಶಭವನದಲ್ಲಿ ಗರ್ಭಿಣಿ ಮತ್ತು ಆಕೆಯ ಮಗು ಮೊಟ್ಟೆ ತಿಂದು ಅಸ್ವಸ್ಥರಾದ ಘಟನೆ ನಡೆದಿದೆ. ಕಳೆದ ತಿಂಗಳು ಮಂಗಳೂರಿನ ಹಲವೆಡೆ ಕೊಳೆತ ಮೊಟ್ಟೆಗಳು ಪೂರೈಕೆಯಾಗಿತ್ತು. ಈ ಬಾರಿಯೂ ಮೊಟ್ಟೆ ಪೂರೈಸುವ ಗುತ್ತಿಗೆದಾರರು ಅಂಗನವಾಡಿಗೆ ಮತ್ತೆ ಕೊಳೆತ ಮೊಟ್ಟೆ ಕೊಟ್ಟಿದ್ದಾರೆ.

ರಾಜ್ಯದ ಹಲವೆಡೆ ಪೂರೈಕೆಯಾಗುತ್ತಿರುವ ಕೊಳೆತ ಮೊಟ್ಟೆಗಳು

ಹೌದು, ಇಂತಹ ಪ್ರಕರಣಗಳು ಇದೆ ಮೊದಲಲ್ಲ. ಹಾಸನ, ಹಾವೇರಿ, ಕೊಡಗು, ಕೋಲಾರ ಸೇರಿದಂತೆ ಅನೇಕ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿದೆ. ಈ ಹಿನ್ನಲೆ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದರು. ಜುಲೈ 13 ರಂದು ಹಾಸನ‌ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿದ್ದ ಮೊಟ್ಟೆಗಳು ಕಳಪೆಯಾಗಿದ್ದು, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:Rotten Eggs: ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ಸರಬರಾಜು ಅಗಿರುವುದನ್ನು ಒಪ್ಪಿ ವಿಷಾದ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್

ಅದರಂತೆ ಜುಲೈ 6 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದ ಕಿಕ್ಕೀರಮ್ಮ ದೇವಾಲಯದ ಸಮೀಪವಿರುವ ಅಂಗನವಾಡಿಗೆ ವಿತರಣೆ ಮಾಡಿದ್ದ ಮೊಟ್ಟೆಗಳು ಕಳಪೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿತರಣೆ ಮಾಡಿರುವ ಮೊಟ್ಟೆಗಳು ಕಳಪೆಯಾಗಿದೆ. ಇನ್ನು ಘಟನೆಯಲ್ಲಿ ಮೊಟ್ಟೆ ವಿತರಣೆ ಮಾಡಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಮಹಿಳೆಯರು ಅಗ್ರಹಿಸಿದ್ದರು.

ಕೊಡಗು ಜಿಲ್ಲೆಯಲ್ಲೂ ಕೊಳೆತ ಮೊಟ್ಟೆ ವಿತರಣೆ

ಇನ್ನು ಇಂತಹ ಎಷ್ಟೇ ಘಟನೆಗಳು ನಡೆದರೂ, ಗುತ್ತಿಗೆದಾರರು ಮಾತ್ರ ಇದರ ಬಗ್ಗೆ ತಲೆಕೆಡಸಿಕೊಂಡಿಲ್ಲ. ಅದರಂತೆ ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಯಲ್ಲಿಯೂ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಲಾಗಿತ್ತು. ಹೀಗಾಗಿ ಸ್ಥಳೀಯರು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೀಗ ಮಂಗಳೂರಿನಲ್ಲಿ ಕೊಳೆತ ಮೊಟ್ಟೆ ತಿಂದು ಅಸ್ವಸ್ಥರಾದ ಘಟನೆ ಬೆಳಕಿಗೆ ಬಂದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Thu, 10 August 23