Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ ನನ್ನ ತಾಯಿಯ ಜೀವ ಉಳಿಸಿ.. ಅಮ್ಮನನ್ನು ಕಾಪಾಡಲು ಪುತ್ರಿ ಅಕ್ರಂದನ

ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ.

ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ ನನ್ನ ತಾಯಿಯ ಜೀವ ಉಳಿಸಿ.. ಅಮ್ಮನನ್ನು ಕಾಪಾಡಲು ಪುತ್ರಿ ಅಕ್ರಂದನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 13, 2021 | 3:04 PM

ಬೆಂಗಳೂರು: ಕೊರೊನಾ, ಬ್ಲಾಕ್ ಫಂಗಸ್ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾದ ಜೊತೆ ಯುದ್ಧ ಮಾಡಿ ಇನ್ನೇನು ಜೀವನ ಶುರು ಮಾಡುವ ಸಂತೋಷದಲ್ಲಿರಬೇಕಾದ್ರೆ ಬ್ಲಾಕ್ ಫಂಗಸ್ ಮತ್ತೆ ಜೀವನವನ್ನು ನರಕಕ್ಕೆ ತಳುತ್ತಿದೆ. ಸದ್ಯ ಈಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಸೋಂಕಿತರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಇಲ್ಲೊಬ್ಬ ಪುತ್ರಿ ತನ್ನ ತಾಯಿಯ ಪ್ರಾಣ ಉಳಿಸಲು ಸರ್ಕಾರದ ಬಳಿ ಭಿಕ್ಷೆ ಬೇಡ್ತಿದ್ದಾರೆ.

ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ. ಒಂದು ತಿಂಗಳಿನಿಂದ ನಮ್ಮ ಅಮ್ಮ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಎಂಟು ಲಕ್ಷ ಖರ್ಚು ಮಾಡಿದ್ದೀವಿ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಶನಿವಾರದಿಂದ ಬ್ಲಾಕ್ ಫಂಗಸ್ ತಗುಲಿರುವುದು ಪತ್ತೆಯಾಗಿದೆ.

ಸರ್ಕಾರ ಹೇಳ್ತಿದೆ, ಎಲ್ಲ ಕಡೆ ಆಂಪೊಟೆರಿಸಿನ್ ಬಿ ಸಿಗ್ತಿದೆ ಅಂತ. ಆದರೆ ಎಲ್ಲೂ ಸರಿಯಾಗಿ ಸಿಗ್ತಿಲ್ಲ. ಹೀಗೆ ಮುಂದುವರಿದ್ರೆ ನಮ್ಮ ತಾಯಿಯ ಪ್ರಾಣಕ್ಕೆ ಕುತ್ತು ಬರುತ್ತದೆ. ದಿನ ದಿನ ಈ ಸಮಸ್ಯೆ ಮುಂದುವರಿದ್ರೆ ಬೇರೆ ಬೇರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆಂಪೊಟೆರಿಸಿನ್ ಬಿ ಒಂದು ವೈಯಲ್ಗೆ ಏಳು ಸಾವಿರ ಬೇಕು. ನಮ್ಮ ಅಮ್ಮನಿಗೆ ಒಂದು ದಿನಕ್ಕೆ ಆರು ವೈಯಲ್ ಕೊಡಬೇಕು. ಇದರಿಂದ ಒಂದು ದಿನಕ್ಕೆ 42 ಸಾವಿರ ರೂಪಾಯಿ ಬೇಕು. ಸರ್ಕಾರ ನಮಗೆ ಸಹಾಯ ಮಾಡಬೇಕು. ಆಂಪೊಟೆರಿಸಿನ್ ಬಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು. ನಮ್ಮ ಅಮ್ಮನಿಗೆ ಹದಿನಾಲ್ಕು ದಿನಗಳ ಆಂಪೊಟೆರಿಸಿನ್ ಬಿ ಕೊಡಲು ವೈದ್ಯರು ಹೇಳಿದ್ದಾರೆ. ಎಂದು ಬ್ಲಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ಆಸ್ಟಿನ್ ಟೌನ್ ನಿವಾಸಿ ಶಶಿಕಲಾ ಅವರ ಪುತ್ರಿ ಸುಶ್ಮಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ