AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ ನನ್ನ ತಾಯಿಯ ಜೀವ ಉಳಿಸಿ.. ಅಮ್ಮನನ್ನು ಕಾಪಾಡಲು ಪುತ್ರಿ ಅಕ್ರಂದನ

ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ.

ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ ನನ್ನ ತಾಯಿಯ ಜೀವ ಉಳಿಸಿ.. ಅಮ್ಮನನ್ನು ಕಾಪಾಡಲು ಪುತ್ರಿ ಅಕ್ರಂದನ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jun 13, 2021 | 3:04 PM

Share

ಬೆಂಗಳೂರು: ಕೊರೊನಾ, ಬ್ಲಾಕ್ ಫಂಗಸ್ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾದ ಜೊತೆ ಯುದ್ಧ ಮಾಡಿ ಇನ್ನೇನು ಜೀವನ ಶುರು ಮಾಡುವ ಸಂತೋಷದಲ್ಲಿರಬೇಕಾದ್ರೆ ಬ್ಲಾಕ್ ಫಂಗಸ್ ಮತ್ತೆ ಜೀವನವನ್ನು ನರಕಕ್ಕೆ ತಳುತ್ತಿದೆ. ಸದ್ಯ ಈಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಸೋಂಕಿತರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಇಲ್ಲೊಬ್ಬ ಪುತ್ರಿ ತನ್ನ ತಾಯಿಯ ಪ್ರಾಣ ಉಳಿಸಲು ಸರ್ಕಾರದ ಬಳಿ ಭಿಕ್ಷೆ ಬೇಡ್ತಿದ್ದಾರೆ.

ನಮ್ಮ ಅಮ್ಮನ ಪ್ರಾಣ ಉಳಿಸಿ ಕೊಡಿ ಪ್ಲೀಸ್. ನಮ್ಮ ಅಮ್ಮನಿಗೆ ಆಂಪೊಟೆರಿಸಿನ್ ಬಿ ಸಿಗುವಂತೆ ಮಾಡಿ. ನಮ್ಮ ಅಮ್ಮನ ಚಿಕಿತ್ಸೆಗೆ ದಯಬಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕಿತರು ಪರದಾಡುತ್ತಿದ್ದಾರೆ. ಸುಶ್ಮಿತಾ ಎಂಬುವವರು ತಮ್ಮ ಅಮ್ಮನಿಗೆ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದ್ದಾರೆ. ಒಂದು ತಿಂಗಳಿನಿಂದ ನಮ್ಮ ಅಮ್ಮ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಎಂಟು ಲಕ್ಷ ಖರ್ಚು ಮಾಡಿದ್ದೀವಿ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಶನಿವಾರದಿಂದ ಬ್ಲಾಕ್ ಫಂಗಸ್ ತಗುಲಿರುವುದು ಪತ್ತೆಯಾಗಿದೆ.

ಸರ್ಕಾರ ಹೇಳ್ತಿದೆ, ಎಲ್ಲ ಕಡೆ ಆಂಪೊಟೆರಿಸಿನ್ ಬಿ ಸಿಗ್ತಿದೆ ಅಂತ. ಆದರೆ ಎಲ್ಲೂ ಸರಿಯಾಗಿ ಸಿಗ್ತಿಲ್ಲ. ಹೀಗೆ ಮುಂದುವರಿದ್ರೆ ನಮ್ಮ ತಾಯಿಯ ಪ್ರಾಣಕ್ಕೆ ಕುತ್ತು ಬರುತ್ತದೆ. ದಿನ ದಿನ ಈ ಸಮಸ್ಯೆ ಮುಂದುವರಿದ್ರೆ ಬೇರೆ ಬೇರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆಂಪೊಟೆರಿಸಿನ್ ಬಿ ಒಂದು ವೈಯಲ್ಗೆ ಏಳು ಸಾವಿರ ಬೇಕು. ನಮ್ಮ ಅಮ್ಮನಿಗೆ ಒಂದು ದಿನಕ್ಕೆ ಆರು ವೈಯಲ್ ಕೊಡಬೇಕು. ಇದರಿಂದ ಒಂದು ದಿನಕ್ಕೆ 42 ಸಾವಿರ ರೂಪಾಯಿ ಬೇಕು. ಸರ್ಕಾರ ನಮಗೆ ಸಹಾಯ ಮಾಡಬೇಕು. ಆಂಪೊಟೆರಿಸಿನ್ ಬಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು. ನಮ್ಮ ಅಮ್ಮನಿಗೆ ಹದಿನಾಲ್ಕು ದಿನಗಳ ಆಂಪೊಟೆರಿಸಿನ್ ಬಿ ಕೊಡಲು ವೈದ್ಯರು ಹೇಳಿದ್ದಾರೆ. ಎಂದು ಬ್ಲಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ಆಸ್ಟಿನ್ ಟೌನ್ ನಿವಾಸಿ ಶಶಿಕಲಾ ಅವರ ಪುತ್ರಿ ಸುಶ್ಮಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್