AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ: ಗ್ರಾಮದಲ್ಲಿ ಸಂಭ್ರಮ‌, ಬಾಗಿನ ಅರ್ಪಣೆ

75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ. ಗ್ರಾಮದ ಪ್ರತಿಯೊಂದ ಮನೆಯಿಂದ ಒಬ್ಬರಂತೆ ಬಂದು ಬಾವಿಗೆ ಬಾಗಿನ ಅರ್ಪಿಸಿ ಗ್ರಾಮಸ್ಥರ ಸಂತಸ.

75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ: ಗ್ರಾಮದಲ್ಲಿ ಸಂಭ್ರಮ‌, ಬಾಗಿನ ಅರ್ಪಣೆ
75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ
TV9 Web
| Edited By: ಆಯೇಷಾ ಬಾನು|

Updated on: Oct 15, 2022 | 3:22 PM

Share

ದಾವಣಗೆರೆ: ಜಿಲ್ಲಾ ಕೇಂದ್ರದಿಂದ 16 ಕಿಲೋಮೀಟರ್ ದೂರದ ಆಲೂರು ಗ್ರಾಮ ಒಂದು ರೀತಿಯಲ್ಲಿ ಐತಿಹಾಸಿಕ ಗ್ರಾಮ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ. ಶೇಖಡಾ 67 ರಷ್ಟು ಸಾಕ್ಷರತೆ ಇದೆ. ವಾಣಿಜ್ಯ ಬೆಳೆಗೆ ಪ್ರಸಿದ್ಧಿ ಪಡೆದ ಗ್ರಾಮ ಇದು. ಇಲ್ಲಿ ಚೌಡಮ್ಮನ ಕೋಟೆ, ಆಂಜನೇಯನ ಪುಣ್ಯಕ್ಷೇತ್ರ ಅಂದ್ರೆ ಬಲು‌ ಪ್ರಸಿದ್ಧ. ಈ ಪುಣ್ಯ ಕ್ಷೇತ್ರಗಳಿಗೆ ಬೇರೆ ಬೇರೆ ಕಡೆಯಿಂದ ಭಕ್ತರು ದರ್ಶನ ಪಡೆಯುತ್ತಾರೆ. ಹೀಗೆ ಆಂಜನೇಯ ಸ್ವಾಮೀಗೆ ಬರುವ ಭಕ್ತರು ಇಲ್ಲಿನ ಐತಿಹಾಸಿಕ ಪುರಾತನ ಬಾವಿಯ ಪುಣ್ಯ ಜಲದ ಸ್ಪರ್ಶ ಮಾಡಿ ಪಾವನರಾಗುತ್ತಾರೆ. ಈ ಬಾವಿಗೆ ಹಿರೇಬಾವಿ ಅಂತಾ ಹೆಸರು.

ಈ ಹಿಂದೆ ಈ ಹಿರೇಬಾವಿಯೂ ಕುಡಿಯುವ ನೀರಿಗೆ ಆಸರೆ ಆಗಿತ್ತು. ಮತ್ತು ಕುಡಿಯಲು ಎಳೆನೀರು ಕುಡಿದಷ್ಟು ಸಿಹಿ ಕೊಡುತ್ತದೆ. ಕಾಲ ಕಳೆದಂತೆ ಆಧುನಿಕತೆ ಬೆಳೆದು ನೀರಾವರಿ ಸೌಲಭ್ಯಗಳು ಆಗಿ ನಂತರ ಈ ಬಾವಿ ಬಗ್ಗೆ ಅಷ್ಟಾಗಿ ಯಾರು ಗಮನ ಹರಿಸಿರಲಿಲ್ಲ. ಆದ್ರೆ ದೇವಸ್ಥಾನಕ್ಕೆ ಬರುವ ಭಕ್ತರು ಮಾತ್ರ ಬಾವಿಯ ಪವಿತ್ರ ಜಲದ ಸ್ಪರ್ಶ ಮಾಡಿಯೇ ಹೋಗುತ್ತಿದ್ದರು. ಇಂತಹ ಐತಿಹಾಸಿಕ ಬಾವಿ ಈಗ ಭರ್ತಿಯಾಗಿದೆ. ನಿರಂತರ ಮಳೆಗೆ ನೂರಾರು ಕೆರೆಗಳು ಭರ್ತಿಯಾಗಿವೆ‌. ಅದೇ ರೀತಿ ಹಿರೇಬಾವಿಯೂ ಭರ್ತಿಯಾಗಿದೆ. ಹೀಗೆ ಪುಣ್ಯಕ್ಷೇತ್ರ ಪಕ್ಕದ ಐತಿಹಾಸಿಕ ಬಾವಿ ಭರ್ತಿ ಆಗಿದ್ದು ನೋಡಿ ಇಡೀ ಗ್ರಾಮದ ಜನರು‌ ಸಂತಸ ಗೊಂಡಿದ್ದಾರೆ. ಇದನ್ನೂ ಓದಿ: ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಇದೆಲ್ಲ ನೋಡಿದರೆ; ಫುಡ್ ಆರ್ಟ್

ಆಂಜನೇಯ ದೇವಸ್ಥಾನದ ಧರ್ಮದರ್ಶಿ ಸಮಿತಿ ಪ್ರಮುಖ ಗುರುಲಿಂಗಪ್ಪ ಅವರು ಹೇಳುವಂತೆ ಈ ಬಾವಿ 75 ವರ್ಷದ ಬಳಿಕ. ಅಂದರೆ ಈ ಹಿಂದೆ ಭರ್ತಿ ಆದ ಬಗ್ಗೆ ಗ್ರಾಮದ ಹಿರಿಯರು ಹೇಳುತ್ತಿದ್ದರು. ಆ ಲೆಕ್ಕದ ಪ್ರಕಾರ ಬಾವಿಗೆ ನೀರು ಇಷ್ಟೊಂದು ಪ್ರಮಾಣದಲ್ಲಿ ಬಂದಿದ್ದು ಮಾತ್ರ ವಿಶೇಷ. ಇದೇ ಕಾರಣಕ್ಕೆ ಗ್ರಾಮದ ಪ್ರತಿಯೊಂದ ಮನೆಯಿಂದ ಒಬ್ಬರಂತೆ ಬಂದು ಬಾವಿಗೆ ಬಾಗಿನ ಅರ್ಪಿಸಲಾಗಿದೆ. ನಮ್ಮ ಜೀವನಲ್ಲಿ ಐತಿಹಾಸಿಕ ಬಾವಿ ಭರ್ತಿ ಆಗಿದ್ದು ನೋಡುವುದು ಒಂದು ರೀತಿಯ ಸೌಭಾಗ್ಯ ತಂದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ