AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಇದೆಲ್ಲ ನೋಡಿದರೆ; ಫುಡ್ ಆರ್ಟ್

Food Art : ಮಸಾಲೆದೋಸೆ, ಪಾವ್​ ಭಾಜಿ, ಉತ್ತಪ್ಪ, ಅಪ್ಪಂ ಏನೆಲ್ಲಾ ಇದೆ ಇಲ್ಲಿ. ನಿಮಗೇನು ಇಷ್ಟ? ಆದರೆ ಇದರಲ್ಲಿ ಎಲ್ಲವನ್ನೂ ತಿನ್ನಲಾಗದು. ಒಂದನ್ನು ಮಾತ್ರ ತಿನ್ನಬಹುದು. ಗುರುತಿಸಬಲ್ಲಿರಾ? ನೋಡಿ ವಿಡಿಯೋ.

ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಇದೆಲ್ಲ ನೋಡಿದರೆ; ಫುಡ್ ಆರ್ಟ್
ಕಲಾವಿದೆ ರುಚಾ
TV9 Web
| Edited By: |

Updated on:Oct 15, 2022 | 3:17 PM

Share

Viral Video : ಇದ್ದಲ್ಲಿಯೇ ಇದ್ದು ಈವತ್ತು ಗಮನ ಸೆಳೆಯಲು ಸಾಮಾಜಿಕ ಜಾಲತಾಣ ಒಳ್ಳೆಯ ವೇದಿಕೆ. ಕಲಾವಿದರಿಗಂತೂ ಇದು ದೊಡ್ಡ ವರದಾನ. ಈಗ ಇಲ್ಲಿರುವ ಈ ಫೋಟೋದಲ್ಲಿ ಪಾವ್ ಭಾಜೀ, ಮಸಾಲೆ ದೋಸೆ, ಅಪ್ಪಂ, ಉತ್ತಪ್ಪ  ನೋಡುತ್ತ, ಆಹಾ ಏನು ತಿನ್ನಲಿ ಏನು ಬಿಡಲಿ ಎಂದೆನ್ನಿಸುತ್ತಿರಬೇಕಲ್ಲ? ಇದೀಗ ವೈರಲ್ ಆಗಿರುವ ಈ ಪೋಸ್ಟ್ ಅನ್ನು ನೆಟ್ಟಿಗರು ಬಿಟ್ಟಕಣ್ಣಿನಿಂದ ನೋಡುತ್ತ ಕುಳಿತಿದ್ದಾರೆ. ಇಲ್ಲಿರುವ ಕಲಾವಿದೆ ಕುಕರಿ ಷೋ ಪ್ರಸ್ತುಪಡಿಸಿಲ್ಲ. ಹಾಗಿದ್ದರೆ ಏನಿರಬಹುದು ಇದು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Rucha & Chaitanya (@ruandchai)

ಇದು ಫುಡ್ ಆರ್ಟ್​. @ruandchai ಈ ಇನ್​ಸ್ಟಾಗ್ರಾಂ ಖಾತೆಯು ರುಚಾ ಮತ್ತು ಚೈತನ್ಯ ಎನ್ನುವವರು ತಮ್ಮ ಕಲಾಕೃತಿಯನ್ನು ಪೋಸ್ಟ್​ ಮಾಡಿದ್ದಾರೆ. ಕಲಾವಿದೆ ರುಚಾ ದೋಸೆ ಸಾಂಬಾರ್, ಅಪ್ಪಂ, ಪಾವ್​ ಭಾಜಿ, ಉತ್ತಪ್ಪ ಮುಂದಿಟ್ಟುಕೊಂಡಿದ್ದಾರೆ. ಈ ಎಲ್ಲ ತಿನಿಸುಗಳಲ್ಲಿ ಒಂದು ಮಾತ್ರ ನಿಜವಾದದ್ದು, ಉಳಿದುದೆಲ್ಲ ಪೇಂಟಿಂಗ್​. ಯಾವುದು ನಿಜವಾದದ್ದು ಗುರುತಿಸಿ ಎಂದಿದ್ಧಾರೆ. ನೆಟ್ಟಿಗರಿಗೆ ಊಹಿಸಲು ಕಷ್ಟಕರವಾದ ಸವಾಲು ಇದು. ಏಕೆಂದರೆ ಎಲ್ಲವೂ ತಿನ್ನಬಹುದಾದಷ್ಟು ನೈಜತೆಯಿಂದಲೇ ಕೂಡಿವೆ.

6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ ಈ ರೀಲ್​ ಅನ್ನು 16,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ‘ಇವೆಲ್ಲವೂ ನಿಜವೆಂದೇ ಭಾವಿಸಿದೆವು. ಬಹಳ ಚೆನ್ನಾಗಿ ಮಾಡಿದ್ದೀರಿ’ ಎಂದಿದ್ದಾರೆ ಒಬ್ಬರು. ‘ಓಹ್ ವಾವ್! ನಿಜವಾಗಲೂ ಇವು ಬಹಳ ರುಚಿಯಿಂದ ಕೂಡಿರಬೇಕು’ ಎಂದಿದ್ದಾರೆ ಮತ್ತೊಬ್ಬರು. ‘ಎಷ್ಟೊಂದು ಪ್ರೀತಿ, ಶ್ರದ್ಧೆಯಿಂದ ನೀವಿದನ್ನು ರೂಪಿಸಿದ್ದೀರಿ ಎನ್ನುವುದು ಗೊತ್ತಾಗುತ್ತಿದೆ’ ಎಂದಿದ್ದಾರೆ ಮಗದೊಬ್ಬರು.

ನಿಜಕ್ಕೂ ಇದು ಅದ್ಭುತವಾಗಿದೆಯಲ್ಲವಾ? ಹಾಗಿದ್ದರೆ ನಿಜವಾಗಿಯೂ ತಿನ್ನುವಂಥ ತಿನಿಸು ಯಾವುದು ಅಂತ ನೀವು ಊಹಿಸಿದಿರಾ? ಅದೇ ಉತ್ತಪ್ಪ.

ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:13 pm, Sat, 15 October 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ