AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜೃಂಭಣೆಯಿಂದ ನಡೆದ ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ

ಸಾಮಾನ್ಯವಾಗಿ ರಥೋತ್ಸವ ಎಳೆಯುವವರು ಪುರುಷರು ಆಗಿರುತ್ತಾರೆ. ಆದ್ರೆ, ದಾವಣಗೆರೆಯ ಯರಗುಂಟೆ ಗ್ರಾಮದಲ್ಲಿ ರಥೋತ್ಸವವನ್ನ ಮಹಿಳೆಯರು ಎಳೆಯುವುದರ ಜೊತೆಗೆ ಮುಸ್ಲಿಂ ಬಾಂಧವರು ಕೂಡ ರಥೋತ್ಸವದಲ್ಲಿ ಭಾಗವಹಿಸಿ ಏಕತೆ ಮೆರೆದಿದ್ದಾರೆ.

ವಿಜೃಂಭಣೆಯಿಂದ ನಡೆದ ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ದಾವಣಗೆರೆ ಕರಿಬಸವೇಶ್ವರ ಜಾತ್ರೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 10, 2023 | 5:37 PM

ದಾವಣಗೆರೆ, ಡಿ.10: ಶ್ರದ್ಧ ಭಕ್ತಿಯಿಂದ ರಥ ಎಳೆಯುತ್ತಿರುವ ಮಹಿಳೆಯರು, ದೇವರಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತೆಯರು. ಇಂತದೊಂದು ದೃಶ್ಯ ಕಂಡು ಬಂದದ್ದು ದಾವಣಗೆರೆ(Davanagere)ಯ ಯರಗುಂಟೆ ಗ್ರಾಮದಲ್ಲಿ. ರಾಜ್ಯದ ಯಾವುದೇ ಮೂಲೆಯಲ್ಲಿ ಮಾಡದಂತ ವಿಶೇಷ ಆಚರಣೆ ಸಂಪ್ರದಾಯವನ್ನ ಈ ಗ್ರಾಮದ ಜನರು ಆಚರಿಸಿಕೊಂಡು ಬಂದಿದ್ದಾರೆ. ಅದುವೇ ಹೆಣ್ಣು ಮಕ್ಕಳು ರಥ ಎಳೆಯುವುದು. ಈ ಗ್ರಾಮದ ಕರಿಬಸವೇಶ್ವರ ರಥೋತ್ಸವವನ್ನ ವಿಜೃಂಭಣೆಯಿಂದ ಮಾಡಿಕೊಂಡು ಬರಲಾಗಿದೆ.

ಇನ್ನು ಈ ರಥೋತ್ಸವಕ್ಕೆ ಕೇವಲ ಯರಗುಂಟೆ ಗ್ರಾಮದ ಜನತೆ ಮಾತ್ರವಲ್ಲದೇ ದಾವಣಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಮಹಿಳೆರಯರು ಶ್ರದ್ಧ ಭಕ್ತಿಯಿಂದ ಈ ದೇವರಿಗೆ ನಡೆದುಕೊಂಡು ರಥವನ್ನ ಎಳೆಯುತ್ತಾರೆ. ಇಷ್ಟೇ ಮಾತ್ರವಲ್ಲದೆ ಇಲ್ಲಿಗೆ ಮುಸ್ಲಿಂ ಧರ್ಮಿಯರು ಬಂದು ಕರಿಬಸವೇಶ್ವರನ ರಥಕ್ಕೆ ಹೂ ಮಾಲೆ ಸಮರ್ಪಣೆ ಮಾಡಿ, ಆ ದೇವರಿಗೆ ನಡೆದುಕೊಳ್ಳುತ್ತಾರೆ. ಜೊತೆಗೆ ಇಲ್ಲಿ, ಅಲ್ಲಾ, ದೇವರು ಎಲ್ಲಾ ಒಂದೇ ದೇವರು ಒಂದು ನಾಮ ಹಲವು ಎಂಬ ನಂಬಿಕೆಯನ್ನ ಇಟ್ಟುಕೊಂಡು ಜೀವನ ಮಾಡುತ್ತೇವೆ. ಯರಗುಂಟೆಯಲ್ಲಿ ರಥೋತ್ಸವ ನಡೆಯುತ್ತ ಎಂದು ಗೊತ್ತಾದ ಕೂಡಲೇ ಎರಡು ದಿನದ ಮುಂಚಿತವಾಗಿ ಆಗಮಿಸಿ ಸಂಪ್ರದಾಯದಂತೆ ಎಲ್ಲಾ ಪೂಜಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ಜಾತ್ರೆ ವೈಭವ, ಹೇಗಿದ್ದಾನೆ ಗೊತ್ತ ಕಡಲೆಕಾಯಿ ಬಸವ

ಅಲ್ಲದೆ ಇಲ್ಲಿ ಮಹಿಳೆಯರು ಚಿಕ್ಕವರು ದೊಡ್ಡವರು ಎನ್ನದೆ ರಥದ ಅಗ್ಗ ಹಿಡಿದು ಎಳೆದುಕೊಂಡು ಹೋಗಿ ಬನ್ನಿ ಮುಡಿದು ವಾಪಸ್ ಬರುತ್ತಾರೆ. ಹೀಗೆ ರಥ ಎಳೆಯುವುದು ಹಾಗೂ ಕರಿಬಸವೇಶ್ವರನ ಪೂಜೆ ಹಾಗೂ ತೊಟ್ಟಿಲು ತೂಗುವುದರಿಂದ ತಾವು ಬೇಡಿಕೊಂಡು ಇಷ್ಟರ್ಥಗಳು ಈಡೇರುತ್ತವೆ. ಜೊತೆಗೆ ನಮ್ಮನ್ನ ಕರಿಬಸವೇಶ್ವರ ಕಾಪಾಡುತ್ತಾನೆ ಎಂಬ ನಂಬಿಕೆ ಇಲ್ಲಿನ ಮಹಿಳೆಯರದ್ದು. ಒಟ್ಟಾರೆಯಾಗಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ನಡೆಯದಂತ ವಿಶಿಷ್ಟ ಆಚರಣೆ ಮಹಿಳಾ ರಥೋತ್ಸವ ಈ ಗ್ರಾಮದಲ್ಲಿ ನಡೆಯುತ್ತೆ, ಜೊತೆಗೆ ಹಿಂದು ಮುಸ್ಲಿಂ ನಡುವೆ ಧಾರ್ಮಿಕ ಭಾವನೆ ಕದಡುವ ಇಂದಿನ ದಿನಮಾನದಲ್ಲಿ ಹಿಂದು ಮುಸ್ಲಿಂ ಒಂದೇ ರಥೋತ್ಸವದಲ್ಲಿ ಕೂಡಿ ಹಬ್ಬ ಆಚರಣೆ ಮಾಡಿರುವುದು ನಿಜಕ್ಕು ಒಳ್ಳೆಯ ಬೆಳವಣಿಗೆಯೇ ಸರಿ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Sun, 10 December 23

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!