AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್​​ನಲ್ಲೇ ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ

ಕೋರ್ಟ್ ಅಂದರೆ, ಕಾನೂನು ಸಂಘರ್ಷ, ವಾದ-ಪ್ರತಿವಾದ ಇತ್ಯಾದಿಗಳೇ ನೆನಪಿಗೆ ಬರುತ್ತವೆ. ಆದರೆ ಈಗ ಕಾಲ ಬದಲಾಗಿದೆ. ದಾವಣಗೆರೆಯಲ್ಲಿ ಮಾನವೀಯತೆ ತುಂಬಿಕೊಂಡಿರುವ ನ್ಯಾಯಮೂರ್ತಿಗಳ ಹಾಗೂ ವಕೀಲರ ವಿಶೇಷ ಪ್ರಯತ್ನದಿಂದ ಸಂಭ್ರಮ ಸೃಷ್ಟಿಯಾಗುತ್ತದೆ. ಹತ್ತಾರು ವರ್ಷ ಪ್ರತ್ಯೇಕವಾಗಿದ್ದ ಪತಿ ಪತ್ನಿಯರು ಒಂದಾಗುತ್ತಿದ್ದಾರೆ. ಎರಡು ವರ್ಷಗಳಲ್ಲಿ ಬರೋಬರಿ 180 ಜೋಡಿಗಳ ಒಡೆದು ಹೋದ ಸಂಸಾರ ಒಂದಾಗಿದೆ!

ಕೋರ್ಟ್​​ನಲ್ಲೇ  ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ
ಸಾಂದರ್ಭಿಕ ಚಿತ್ರ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma|

Updated on:Nov 14, 2025 | 11:37 AM

Share

ದಾವಣಗೆರೆ, ನವೆಂಬರ್ 14: ಕ್ಷುಲಕ ಕಾರಣಕ್ಕೆ ಜಗಳವಾಡಿ ಕೋರ್ಟ್​​ ಸುತ್ತಾಡಿ ಸುಸ್ತಾಗಿದ್ದವರು, ಪ್ರತ್ಯೇಕ ಆಗಬೇಕು ಎಂಬ ಸಂಕಲ್ಪ ಮಾಡಿಯೇ ನ್ಯಾಯವಾದಿಗಳ ಮೂಲಕ ಕೇಸ್ ನಡೆಸುತ್ತಿದ್ದವರು ಅಲ್ಲಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಬೇರೆಯಾಗಬೇಕು ಎಂದುಕೊಂಡಿದ್ದವರೆಲ್ಲಾ ವೈಮನಸ್ಸು ಬಿಟ್ಟು ಒಂದಾಗಿದ್ದಾರೆ. ದಾವಣಗೆರೆ (Davanagere) ನಗರದ ಕೌಟುಂಬಿಕ ನ್ಯಾಯಾಲಯದ (Family Court) ಆವರಣ ಒಂದು ರೀತಿಯಲ್ಲಿ ಸಾಮೂಹಿತ ವಿವಾಹದ ಕಲ್ಯಾಣ ಮಂಟಪವಾಗಿ ಕಾಣಿಸಿದೆ. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿಗಳೇ ಒಂದು ರೀತಿಯಲ್ಲಿ ಪ್ರಧಾನ ಪರೋಹಿತರು! ಇವರೇ ವಧು-ವರರಿಗೆ ಶುಭ ಹಾರೈಸುತ್ತಿದ್ದರು. ಮದುವೆ ನಡೆಸಿಕೊಡುತ್ತಿದ್ದರು. ಅಂದಹಾಗೆ, ಬೇರೆಯಾಗಬೇಕು ಎಂದುಕೊಂಡಿದ್ದ ಬರೋಬ್ಬರಿ 8 ಜೋಡಿಗಳು ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ತೀಚೆಗೆ ಮತ್ತೆ ಒಂದಾಗಿವೆ.

ಇದರೊಂದಿಗೆ, ಕಳೆದ ಎರಡು ವರ್ಷಗಳಲ್ಲಿ ಬರೋಬರಿ 180 ಜೋಡಿಗಳನ್ನು ಒಂದಾಗಿಸಿದ ಹೆಗ್ಗಳಿಕೆ ಈ ನ್ಯಾಯಾಲಯದ್ದಾಗಿದೆ. ನ್ಯಾಯಾಲಯದಲ್ಲಿ ವಕೀಲರು ಹಾಗೂ ನ್ಯಾಯಮೂರ್ತಿಗಳ ಮಾನವೀಯತೆಗೆ ಹಿಡಿದ ಕೈಗನ್ನಡಿ ಇದಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜೋಡಿಗಳ ಒಂದು ಮಾಡಿ ಸುಮ್ಮನಿರಲ್ಲ ಕೋರ್ಟ್!

ಬೇರೆಯಾಗಲು ಹೊರಟ ಜೋಡಿಗಳನ್ನು ಮತ್ತೆ ಒಂದುಮಾಡುವುದಷ್ಟೇ ಅಲ್ಲದೆ, ಪ್ರತಿ ತಿಂಗಳು ಆ ಜೋಡಿಗಳ ಬಗ್ಗೆ ಕೋರ್ಟ್ ಮೇಲಿ್ವಿಚಾರಣೆ ನಡೆಸುತ್ತದೆ. ಆ ಜೋಡಿ ಒಂದು ವರ್ಷದ ವರೆಗೆ ಒಂದಾಗಿ ಚೆನ್ನಾಗಿ ಸಹಬಾಳ್ವೆ ನಡೆಸಿದರೆ ಅಲ್ಲಿಗೆ ಪ್ರಕರಣವನ್ನು ಮುಕ್ತಾಯ ಮಾಡುತ್ತದೆ.

ಈ ನ್ಯಾಯಾಲಯದಲ್ಲಿ ವರ್ಷದಲ್ಲಿ ನಾಲ್ಕು ಸಲ ಲೋಕ ಅದಾಲತ್ ನಡೆಯುತ್ತದೆ. ಈ ವೇಳೆ, ವಕೀಲರು ಹಾಗೂ ನ್ಯಾಯಮೂರ್ತಿಗಳು ಪ್ರತ್ಯೇಕವಾದ ಪತಿ-ಪತ್ನಿಯರನ್ನು ಕರೆದು ಆತ್ಮೀಯವಾಗಿ ಮಾತಾಡುತ್ತಾರೆ. ಮನವರಿಕೆ ಮಾಡಿಕೊಡುತ್ತಾರೆ.

Davanagere Family Court

ಮಹಾವೀರ ಮ ಕರೆಣ್ಣವರ, ಹಿರಿಯ ಸಿವಿಲ್ ನ್ಯಾಯಧೀಶರು

ಇದಷ್ಟೆ ಅಲ್ಲದೆ, ದಾವಣಗೆರೆ ನಗರದ ರಾಮ್ ನಗರದಲ್ಲಿ ಇರುವ ರಾಜ್ಯ ಮಹಿಳಾನಿಯದಲ್ಲಿನ ಅನಾಥ ಹಾಗೂ ಹತ್ತಾರು ಕಾರಣಕ್ಕೆ ಮನೆ ಬಿಟ್ಟು ಬಂದ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಮದುವೆ ಮಾಡಿಸುತ್ತದೆ. ಇಂತಹ 40ಕ್ಕೂ ಹೆಚ್ಚು ಅನಾಥ ಹೆಣ್ಣು ಮಕ್ಕಳಿಗೆ ಗಂಡು ಹುಡುಕಿ ಮದುವೆ ಮಾಡಲಾಗಿದೆ. ಇದರಲ್ಲಿ ಸಹ ಕೋರ್ಟ್ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿಗೆ ಇಬ್ಬರು ವಿಶೇಷ ಚೇತನ ಯುವಕ ಯುವತಿಗೆ ಮದ್ವೆ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ – ದಾವಣಗರೆ ಮಧ್ಯೆ ಕೆಎಸ್​ಆರ್​ಟಿಸಿ ಫ್ಲೈಬಸ್​ ಸೇವೆಗೆ ಚಾಲನೆ

ಒಟ್ಟಿನಲ್ಲಿ, ನ್ಯಾಯಾಲಯದಿಂದಾಗಿ ಕಳೆದ 2 ವರ್ಷಗಳಲ್ಲಿ ಮತ್ತೆ ಒಂದಾದ 180 ಜೋಡಿಗಳ ಪೈಕಿ ಶೇ 99 ರಷ್ಟು ಜೋಡಿಗಳು ಮತ್ತೆ ನೆಮ್ಮದಿಯ ಬದುಕು ಸಾಗಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 14 November 25

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!