ಹರಿಹರದ ಭಾನುವಳ್ಳಿ ಗ್ರಾಮದ ಮದಕರಿ ನಾಯಕ‌ನ ದ್ವಾರ ತೆರವುಗೊಳಿಸಿದ ದಾವಣಗೆರೆ ಜಿಲ್ಲಾಡಳಿತ

ಕುರುಬ ಸಮಾಜ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ದಾವಣಗೆರೆ ಜಿಲ್ಲಾಡಳಿತ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮದಕರಿ ನಾಯಕ‌ನ ದ್ವಾರ (ಕಮಾನು) ಅನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ನಾಯಕ ಸಮಾಜದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹರಿಹರದ ಭಾನುವಳ್ಳಿ ಗ್ರಾಮದ ಮದಕರಿ ನಾಯಕ‌ನ ದ್ವಾರ ತೆರವುಗೊಳಿಸಿದ ದಾವಣಗೆರೆ ಜಿಲ್ಲಾಡಳಿತ
ಮದಕರಿ ನಾಯಕ ದ್ವಾರ ತೆರವು
Edited By:

Updated on: Mar 11, 2024 | 10:23 AM

ದಾವಣಗೆರೆ, ಮಾರ್ಚಾ 11: ನಾಯಕ ಸಮಾಜದ ತೀವ್ರ ವಿರೋಧದ ನಡುವೆಯೂ ಹರಿಹರ (Harihar) ತಾಲೂಕಿನ ಭಾನುವಳ್ಳಿ ಗ್ರಾಮದ ಮದಕರಿ ನಾಯಕ‌ನ (Madakari Nayak) ದ್ವಾರ (ಕಮಾನು) ಅನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ನಾಯಕ ಸಮಾಜದ ಕೆಲವರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಮದಕರ ನಾಯಕ ದ್ವಾರ ತೆರವು ಗೊಳಿಸಿರುವುದನ್ನು ವಿರೋಧಿಸಿ ಖಂಡಿಸಿ ಮಲೆಬೆನ್ನೂರು ಪೊಲೀಸ್ ಠಾಣೆಯ ಎದುರು ನಾಯಕ ಸಮಾಜದವರು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದ್ವಾರ ತೆರವುಗೊಳಿಸುವಂತೆ ಕುರುಬ ಸಮಾಜ ಪ್ರತಿಭಟನೆ

ಮದಕರಿ ನಾಯಕ ದ್ವಾರ ತೆರವು ಗೊಳಿಸುವಂತೆ ಕಳೆದ ಕೆಲ ದಿನಗಳಿಂದ ಕುರುಬ ಸಮಾಜ ಪ್ರತಿಭಟನೆ ಮಾಡುತ್ತಿದೆ. ಕುರುಬ ಸಮಾಜದವರ ಪ್ರತಿಭಟನೆಗೆ ಕಾಗಿನೆಲೆ ಕ‌ನಕ ಗುರುಪೀಠದ ನಿರಂಜನನಾಂದ‌ಪುರಿ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ