AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ವರ್ಷಗಳಿಂದ ಗೃಹ ಬಂಧನ; ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬಸ್ಥರಿಂದ ಮನವಿ

ಆದರೆ ಪಿಯುಸಿ ಓದುತ್ತಿದ್ದಾಗ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದ ನಾಗರಾಜ್, ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದ. ಇದೇ ಕಾರಣಕ್ಕಾಗಿ ಮನೆಯವರು 25 ವರ್ಷದಿಂದ ಗೃಹ ಬಂಧನದಲ್ಲಿಟ್ಟಿದ್ದಾರೆ.

25 ವರ್ಷಗಳಿಂದ ಗೃಹ ಬಂಧನ; ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬಸ್ಥರಿಂದ ಮನವಿ
ನಾಗರಾಜ್ ನಾಯ್ಕ
TV9 Web
| Updated By: preethi shettigar|

Updated on:Nov 24, 2021 | 12:50 PM

Share

ದಾವಣಗೆರೆ: ಒಂದು ಎರಡು ದಿನ ಮನೆ ಒಳಗೆ ಕುಳಿತರೆ ಮೂರನೇ ದಿನಕ್ಕೆ ಮನೆಯಿಂದ ಹೊರ ಹೋಗಬೇಕು ಎನಿಸುವುದು ಎಲ್ಲರ ಮನಸ್ಥಿತಿ. ಆದರೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಿಗನಾಳು ತಾಂಡ ನಿವಾಸಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 25 ವರ್ಷಗಳಿಂದ ಗೃಹ ಬಂಧನದಲ್ಲಿದ್ದಾರೆ. ಮನೆ ಕಿಂಡಿಯಿಂದ ನೋಡಿದಾಗ ಮಾತ್ರ ಸೂರ್ಯನ ದರ್ಶನವಾಗುತ್ತದೆ. ಅದು ಕೂಡ ಅಪರೂಪ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಆರಂಭಿಸಿದ ವ್ಯಕ್ತಿಯ ವಿಚಿತ್ರವಾದ ವರ್ತನೆಗೆ ಬೇಸತ ಬಡ ಕುಟುಂಬ ತೆಗೆದುಕೊಂಡ ನಿರ್ಧಾರವಿದು. ಆಸ್ಪತ್ರೆಗೆಂದು ಸುತ್ತಾಡಿ ದುಡ್ಡಿಲ್ಲದ ಮಗನನ್ನೆ ಮನೆಯಲ್ಲಿ ಬೀಗ ಹಾಕಿ ಕೂಡಿಟ್ಟಿದ್ದಾರೆ. ಹೀಗೆ ಮನೆಯಿಂದ ಹೊರ ಬಾರದ ವ್ಯಕ್ತಿಯ ಈಗಿನ ಸ್ಥಿತಿ ಹೇಗಿದೆ ಗೊತ್ತಾ? ಈ ವರದಿ ನೋಡಿ.

ಯುವಕನಾಗಿದ್ದಾಗ ಮನೆ ಕೊಠಡಿ ಸೇರಿದ್ದ ನಾಗರಾಜ್ ನಾಯ್ಕ ಅವರಿಗೆ ಈಗ 44 ವರ್ಷ. 1993ರಲ್ಲಿ ಉತ್ತಮ ದರ್ಜೆಯಲ್ಲಿ ಎಸ್​ಎಸ್​ಎಲ್​ಸಿ ಪಾಸ್ ಆಗಿ ಪಿಯುಸಿ ಸೇರಿದ್ದರು. ಪಿಯುಸಿಯಲ್ಲಿದ್ದಾಗ ಮನೆ ಸೇರಿದಾತ ಇನ್ನೂ ಹೊರಗೆ ಬಂದಿಲ್ಲ. ಕಳೆದ 25 ವರ್ಷದಿಂದ ಮಾನಸಿಕ ಅಸ್ವಸ್ಥತೆ ಹಿನ್ನೆಲೆ ನಾಗರಾಜ್ ಗೃಹ ಬಂಧನದಲ್ಲಿದ್ದಾರೆ. ನಾಗರಾಜ್​ಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗದೇ ಕುಟುಂಬ ಸದಸ್ಯರು ಪರದಾಡುತ್ತಿದ್ದಾರೆ.

ಕಂಚಿಗನಾಳು ತಾಂಡದ‌ ನಿವಾಸಿ ಹೇಮ್ಲಾ ನಾಯ್ಕ-ಅಲಿಬಾಯಿ‌ ದಂಪತಿ ಹಿರಿಯ ಮಗ ನಾಗರಾಜ್. ದಂಪತಿಗೆ ಇಬ್ಬರು ಪುತ್ರರು, ಒಂದು ಪುತ್ರಿ. ಪ್ರತಿಭಾವಂತ ನಾಗರಾಜ 1993 ಎಸ್​​ಎಸ್​ಎಲ್​ಸಿ ಪೂರ್ಣಗೊಳಿಸಿದ್ದರು. ಆದರೆ ಪಿಯುಸಿ ಓದುತ್ತಿದ್ದಾಗ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದ ನಾಗರಾಜ್, ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದ. ಇದೇ ಕಾರಣಕ್ಕಾಗಿ ಮನೆಯವರು ಗೃಹ ಬಂಧನದಲ್ಲಿಟ್ಟಿದ್ದಾರೆ.

ಆರ್ಥಿಕ ಸಮಸ್ಯೆ ಹಿನ್ನೆಲೆ ಗೃಹ ಬಂಧನದಲ್ಲಿ ಇರುವುದು ಅನಿವಾರ್ಯವಾಗಿತ್ತು. ಆತನ ಆರೈಕೆ ಮಾಡುತ್ತಿರುವ ತಾಯಿ ಅಲಿಬಾಯಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಇಂತಹ ಮಗನ ಸ್ಥಿತಿಗೆ ನಾನೇ ಕಾರಣ ಎಂಬ ಚಿಂತೆ ಶುರುವಾಗಿದೆ. ಹೀಗಾಗಿ ನಾಗರಾಜನ‌ ಆರೈಕೆ ಹಾಗೂ ಚಿಕಿತ್ಸೆಗಾಗಿ ಸಹಾಯ ಮಾಡಿ ಎಂದು ನಾಗರಾಜ್ ನಾಯ್ಕ ಹೇಮ್ಲಾ ಮನವಿ ಮಾಡಿದ್ದಾರೆ.

ಕತ್ತಲಲ್ಲಿಯೇ ಕಳೆದ ನಾಗರಾಜನ ಮುಂದಿನ ಬದುಕು ಹೇಗೆ. ತಾಯಿ ಆರೋಗ್ಯ ಹಾಳಾಗಿದೆ. ಆತನಿಗೆ ಅನ್ನ ನೀರು ಕೊಡುವವರು ಯಾರು. ಇಂತಹ ವ್ಯಕ್ತಿಗೆ ಯಾರಾದರೂ ಸಹಾಯ ಮಾಡಿ. ಯಾವುದಾದರು ಸಂಘ -ಸಂಸ್ಥೆಗಳು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿ ಎಂದು ನಾಗರಾಜ್ ನಾಯ್ಕ ಹೇಮ್ಲಾ ಮನವಿ ಮಾಡಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು ಈ ನಂಬರ್​ಗೆ ಕರೆ ಮಾಡಿ ಚಂದ್ರ ಹಂಚಗಾನಹಳ್ಳಿ, ಗ್ರಾಮಸ್ಥ: 9481192224 ತಿಪ್ಪಣ್ಣ, ರೈತ ಮುಖಂಡ : 9148943580

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !

Pakistan: ಪಾಳುಬಿದ್ದ ಮನೆಯಲ್ಲಿ ಸಿಕ್ಕ 11 ವರ್ಷದ ಹಿಂದು ಬಾಲಕನ ಶವ; ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

Published On - 12:02 pm, Wed, 24 November 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ