AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಹೊಸ ವರ್ಷಕ್ಕೆ ಕೇಕ್ ಶೋ, ಕೇಕ್​ನಲ್ಲಿ ಮೂಡಿಬಂದ ದೆಹಲಿ ಸಂಸತ್ ಭವನ

250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಇಲ್ಲಿ ಕೇಕ್ ತಯಾರಿಸಲಾಗಿದೆ. ಈ ಕೇಕ್ ಮಾದರಿ ತಯಾರು ಮಾಡಲು 30 ದಿನ ತೆಗೆದುಕೊಂಡಿದ್ದು, ನೂತನ ಸಂಸತ್ ಭವನ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ದಾವಣಗೆರೆ: ಹೊಸ ವರ್ಷಕ್ಕೆ ಕೇಕ್ ಶೋ, ಕೇಕ್​ನಲ್ಲಿ ಮೂಡಿಬಂದ ದೆಹಲಿ ಸಂಸತ್ ಭವನ
ಕೇಕ್​ನಲ್ಲಿ ಮೂಡಿಬಂದ ದೆಹಲಿ ಸಂಸತ್ ಭವನ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Digi Tech Desk

Updated on:Jan 22, 2024 | 11:39 AM

ದಾವಣಗೆರೆ, ಡಿ.31: ಹೊಸ ವರ್ಷಾಚರಣೆಗೆ (New Year) ಬೆಣ್ಣೆ ನಗರಿ ದಾವಣಗೆರೆ (Davanagere) ಸಜ್ಜಾಗಿದೆ. ಹೊಸ ವರ್ಷವನ್ನು ವಿನೂತನವಾಗಿ ಬರಮಾಡಿಕೊಳ್ಳಬೇಕೆಂದು ಕೇಕ್ ಪ್ಯಾಲೇಸ್​ವೊಂದು ಕೇಕ್ ಶೋ (Cake Show) ಆಯೋಜಿಸಿದೆ. ಈ ಕೇಕ್ ಶೂನಲ್ಲಿ​ ಐತಿಹಾಸಿಕ ಸಂಸತ್ ಭವನದ ಕೇಕ್ ಮಾದರಿಯನ್ನು ನಿರ್ಮಿಸಲಾಗಿದ್ದು ಜನರು ಫುಲ್ ಖುಷ್ ಆಗಿದ್ದಾರೆ. ಸಂಸತ್ ಭವನ ವೀಕ್ಷಣೆಗೆ ಜನ ಮುಗಿಬಿದ್ದಿದ್ದಾರೆ.

ದಾವಣಗೆರೆಯ ಗಾಂಧಿ ಸರ್ಕಲ್ ಬಳಿ ಇರುವ ಕೇಕ್ ಪ್ಯಾಲೇಸ್​ನಲ್ಲಿ ಕೇಕ್ ವೇಳ ಆಯೋಜಿಸಲಾಗಿದ್ದು ಹೊಸ ವರ್ಷ ಸಂಭ್ರಮದಲ್ಲಿರುವ ಜನರಿಗೆ ಹೊಸತನವನ್ನ ಕೇಕಿನಲ್ಲೆ ನೀಡಬೇಕು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕ ಮತ್ತು ಹತ್ತು ಜನ ಬಾಣಸಿಗರು ಸೇರಿ ಒಂದು ತಿಂಗಳ ಕಾಲ ನೂತನ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ. ಸಕ್ಕರೆಜೊತೆಗೆ ಸಕ್ಕರೆ ಜಡ್ಡುನಲ್ಲಿ ಭಾರೀ ಗಾತ್ರದ ಕೇಕ್ ಮಾಡಿದ್ದಾರೆ. ವಿಶೇಷವಾಗಿ 250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಇಲ್ಲಿ ಕೇಕ್ ತಯಾರಿಸಲಾಗಿದೆ. ಈ ಕೇಕ್ ಮಾದರಿ ತಯಾರು ಮಾಡಲು 30 ದಿನ ತೆಗೆದುಕೊಂಡಿದ್ದು, ನೂತನ ಸಂಸತ್ ಭವನ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.

New Year cake show organised in Davangere and Delhi Parliament House made in cake

ಕೇಕ್​ನಲ್ಲಿ ಮೂಡಿಬಂದ ದೆಹಲಿ ಸಂಸತ್ ಭವನ

ಇದನ್ನೂ ಓದಿ: ಕ್ರಿಸ್ಮಸ್​ಗೆ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ: ವಿಭಿನ್ನ ಶೈಲಿಯ ಕೇಕ್ ಸವಿದು ಎಂಜಾಯ್ ಮಾಡಿ

ನೂತನ ಸಂಸತ್ ಭವನದ ಜೊತೆಗೆ ವೆಡ್ಡಿಂಗ್ ಕೇಕ್, ಬೇಬಿ ಡಾಲ್, ಗಿಟಾರ್, ವಿವಿಧ ಹಣ್ಣಿನ ಮಾದರಿಯ ಸಾವಿರಾರು ಕೇಕ್ ಗಳನ್ನು ತಯಾರು ಮಾಡಲಾಗಿದ್ದು ಜನರು ಕೇಕ್​ಗಳ ಮಾದರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಐದು ದಿನಗಳ ಕಾಲ ಕೇಕ್ ಪ್ರದರ್ಶನಕ್ಕೆ ಇಡಲಾಗಿದ್ದು, ಇದನ್ನು ನೋಡಲು ಮಹಿಳೆಯರು ಮಕ್ಕಳು ಎನ್ನದೆ ಎಲ್ಲಾ ವರ್ಗದ ಜನರು ಆಗಮಿಸಿ ಸಂತೇಬೆನ್ನೂರು ಪುಷ್ಕರಣಿಯ ಜೊತೆಯ ವಿವಿಧ ಕೇಕ್ ಮಾದರಿಗಳನ್ನು ನೋಡಿ ಖುಷಿ ಪಡ್ತಿದ್ದಾರೆ.

2023 ಹೊಸ ವರ್ಷವನ್ನು ವಿನೂತನವಾಗಿ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಆಯೋಜಿಸಿರುವ ಕೇಕ್ ಕಲಾ ಕೃತಿಗಳು ಜನರನ್ನು ಆಕರ್ಷಿಸುತ್ತಿದ್ದು ಜನರು ಕೇಕ್ ಮಾದರಿಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡ್ತಾಯಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:45 am, Sun, 31 December 23

ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ