AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿ ಬೆಂಗಳೂರಿನಲ್ಲಿ ಗಣತಂತ್ರ ದಿನವೇ ಹಸಿರು ಕ್ರಾಂತಿ.. 10 ಸಾವಿರಕ್ಕೂ ಅಧಿಕ ವಾಹನಗಳಿಂದ ರ‍್ಯಾಲಿ

ಚಳಿಗೂ ಬಗ್ಗಲಿಲ್ಲ.. ಬಿಸಿಲಿಗೂ ಜಗ್ಗುತ್ತಿಲ್ಲ.. ಕಾಯ್ದೆ ಹಿಂಪಡೆಯೋವರೆಗೂ ಕದಲೋದಿಲ್ಲ ಅಂತಾ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟನೆಗಿಳಿದಿದ್ದಾರೆ. ಅದ್ರಲ್ಲೂ ಇಂದು ಟ್ರ್ಯಾಕ್ಟರ್ ಪರೇಡ್‌ ನಡೆಸುತ್ತಿದ್ದಾರೆ. ಆ ಹೋರಾಟ ಬೆಂಬಲಿಸಿರೋ ರಾಜ್ಯದ ಅನ್ನದಾತರು ಇಂದು ಟ್ರ್ಯಾಕ್ಟರ್‌ನೊಂದಿಗೆ ಬೆಂಗಳೂರಿಗೆ ಲಗ್ಗೆ ಹಾಕ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಗಣತಂತ್ರ ದಿನವೇ ಹಸಿರು ಕ್ರಾಂತಿ.. 10 ಸಾವಿರಕ್ಕೂ ಅಧಿಕ ವಾಹನಗಳಿಂದ ರ‍್ಯಾಲಿ
ಸಂಗ್ರಹ ಚಿತ್ರ
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 26, 2021 | 10:50 AM

Share

ರಾಜಧಾನಿಯಲ್ಲಿ ಪ್ರತಿಭಟಿಸಿದ್ದು ಆಯ್ತು.. ಜಿಲ್ಲೆ ಜಿಲ್ಲೆಗಳಲ್ಲೂ ಹೋರಾಟ ಮಾಡಿದ್ದು ಆಯ್ತು. ಆದ್ರೆ ಸರ್ಕಾರ ಕ್ಯಾರೇ ಅಂತಿಲ್ಲ. ಪ್ರತಿಭಟನೆಗೆ ಜಗ್ಗುತ್ತಿಲ್ಲ. ಕಾಯ್ದೆಯನ್ನ ಹಿಂಪಡೆಯುತ್ತಿಲ್ಲ. ಇದೇ ಈಗ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರನ್ನ ಕೆರಳುವಂತೆ ಮಾಡಿದೆ. ಮಣ್ಣು ನಂಬಿದ ಜನರ ಬಾಯಿಗೆ ಮಣ್ಣು ಹಾಕ್ಬೇಡಿ ಅಂತಾ ಬೃಹತ್‌ ಹೋರಾಟವನ್ನೇ ಕೈಗೊಂಡಿದ್ದಾರೆ.

ದಂಡೆತ್ತಿ ಬರ್ತಿದ್ದಾರೆ 20 ಸಾವಿರಕ್ಕೂ ಅಧಿಕ ಅನ್ನದಾತರು ದೆಹಲಿಯಲ್ಲಿ ನಡೀತಿರೋ ಈ ಪ್ರತಿಭಟನೆಗೆ ರಾಜ್ಯದಲ್ಲೂ ದೊಡ್ಡ ಬೆಂಬಲ ವ್ಯಕ್ತವಾಗಿದೆ. ಇಂದು ರಾಜಧಾನಿ ಬೆಂಗಳೂರು ಕಂಪ್ಲೀಟ್ ಲಾಕ್ ಆಗೋ ಸಾಧ್ಯತೆ ಇದೆ. ಯಾಕಂದ್ರೆ ರೈತ ಮುಖಂಡರೇ ಘೋಷಣೆ ಮಾಡಿರುವಂತೆ 20 ಸಾವಿರಕ್ಕೂ ಅಧಿಕ ಅನ್ನದಾತರು ರಾಜಧಾನಿಗೆ ದಂಡೆತ್ತಿ ಬರ್ತಿದ್ದಾರೆ. ಅಷ್ಟೇ ಅಲ್ಲ ಟ್ರ್ಯಾಕ್ಟರ್ ಸೇರಿದಂತೆ 10 ಸಾವಿರಕ್ಕೂ ಅಧಿಕ ವಾಹನಗಳು ರಾಜಧಾನಿಯ ರಸ್ತೆಗಳಿಗೆ ಇಳಿಯಲಿವೆ.

ಹೌದು, ಸೈನಿಕರೆಲ್ಲಾ ಮುತ್ತಿಗೆಹಾಕಿದ್ರೂ ಬಿತ್ತು ಉಳುವುದನ್ನ ಬಿಡೋದಿಲ್ಲ ಅಂತಾ ಹೊಲದಲ್ಲೇ ಇರ್ತಿದ್ದ ಬೆವರಿನ ಮಕ್ಕಳು, ಇಂದು ಟ್ರ್ಯಾಕ್ಟರ್ ಮೂಲಕವೇ ರಾಜಧಾನಿಗೆ ನುಗ್ಗಲು ಮುಂದಾಗಿದ್ರು. ಅದಕ್ಕಾಗಿ ರಾತ್ರಿಯೇ ಬೆಂಗಳೂರಿನತ್ತ ಹೆಜ್ಜೆ ಇಟ್ಟಿದ್ದ ರೈತರನ್ನ ಪೊಲೀಸರು ಮಾರ್ಗ ಮಧ್ಯೆಯೇ ತಡೆಹಿಡಿದಿದ್ದಾರೆ.

ಬೆಂಗಳೂರಿನತ್ತ ದಂಡೆತ್ತಿ ಬರುತ್ತಿದೆ ಅನ್ನದಾತರ ಸೈನ್ಯ ರೈತ ವಿರೋಧಿ ಕೃಷಿ ಕಾಯ್ದೆಗಳನ್ನ ಹಿಂಪಡೆಯಲು ಆಗ್ರಹಿಸಿ ಮೈಸೂರು ಜಿಲ್ಲೆಯ ರೈತರು ಬೆಂಗಳೂರಿನತ್ತ ಟ್ರ್ಯಾಕ್ಟರ್ ಱಲಿ ಮೂಲಕ ರಾತ್ರಿಯೇ ಹೊರಟಿದ್ರು. ಆದ್ರೆ ಪೊಲೀಸರು ಮಾರ್ಗ ಮಧ್ಯೆಯೇ ರೈತರನ್ನ ತಡೆದು ಟ್ರಾಕ್ಟರ್ ಬದಲು ಮನವೊಲಿಸಿ ಬಸ್‌ನಲ್ಲಿ ಕಳಿಸಿಕೊಟ್ರು. ಎಸ್ಕಾರ್ಟ್ ಮೂಲಕ 3 ಬಸ್‌ಗಳಲ್ಲಿ ರೈತರನ್ನ ಬೆಂಗಳೂರಿಗೆ ಕಳಿಸಿದ್ರು.

ಮಂಡ್ಯ ಜಿಲ್ಲೆಯಲ್ಲಿ 4 ಟ್ರ್ಯಾಕ್ಟರ್ ವಶಕ್ಕೆ ರಾಜಧಾನಿ ಬೆಂಗಳೂರಿನತ್ತ 4 ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸುತ್ತಿದ್ದ ಮಂಡ್ಯ ಜಿಲ್ಲೆ ರೈತರನ್ನ ಪೊಲೀಸರು ಮಾರ್ಗ ಮಧ್ಯೆ ತಡೆಹಿಡಿದಿದ್ದಾರೆ. ಪಾಂಡವಪುರದಲ್ಲಿ 1, ಕೆಆರ್ ಎಸ್ ನಲ್ಲಿ 3 ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಟ್ರ್ಯಾಕ್ಟರ್ ಗಳಲ್ಲಿ ರೈತರು ಬೆಂಗಳೂರಿಗೆ ಹೋಗುವಂತಿಲ್ಲ, ಬೈಕ್, ಕಾರು, ಬಸ್ ಗಳಲ್ಲಿ ಹೋಗಲು ಮಾತ್ರ ಅವಕಾಶವಿದೆ ಎಂದು ಪೊಲೀಸರು ಸೂಚಿಸಿದ್ರು.

ಹೊಸಕೋಟೆ ಬಳಿ ಟ್ರ್ಯಾಕ್ಟರ್‌ಗಳಿಗೆ ತಡೆ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಗಳಿಗೆ ಹೊಸಕೋಟೆ ಹೊರವಲಯದ ಟೋಲ್ ಬಳಿ ಪೊಲೀಸರಿಂದ ತಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಪೊಲೀಸರು ಟ್ರ್ಯಾಕ್ಟರ್ ತಡೆದು ಎಲ್ಲರನ್ನೂ ವಶಕ್ಕೆ ಪಡೆದ್ರು.

ಬೆಳಗಾವಿಯಿಂದ ರೈಲಿನಲ್ಲಿ ಬರ್ತಿದೆ ರೈತರ ದಂಡು ಇನ್ನು ಬೆಳಗಾವಿ ಜಿಲ್ಲೆಯ ರೈತರು ಱಲಿಯಲ್ಲಿ ಭಾಗಿಯಾಗಲು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್​ ರೈಲಿನಲ್ಲಿ ಆಗಮಿಸಿದ್ರು. ಗೋಕಾಕ್, ಘಟಪ್ರಭಾ, ಕೊಣ್ಣೂರು ಭಾಗದ ರೈತರು ರಾತ್ರಿಯೇ ಬೆಳಗಾವಿಯಿಂದ ಹೊರಟು ಬೆಂಗಳೂರು ಸೇರಿದ್ದಾರೆ. ಇಂದು ನಡೆಯುವ ಱಲಿಯಲ್ಲಿ ಭಾಗವಹಿಸಲಿದ್ದಾರೆ.

ಹೀಗೆ ಜಿಲ್ಲೆ ಜಿಲ್ಲೆಗಳಿಂದಲೂ ಆಗಮಿಸಿರುವ ಹಸಿರು ಸೇನಾನಿಗಳು ರಾಜ್ಯ ರಾಜಧಾನಿಗೆ ಮುತ್ತಿಗೆ ಹಾಕಲು ಕೌಂಟ್‌ಡೌನ್ ಶುರುವಾಗಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಿಂದ ರೈತರು ಈಗಾಗಲೇ ರಾಜಧಾನಿ ತಲುಪಿದ್ದಾರೆ. ಒಟ್ನಲ್ಲಿ ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದಿರೋ ಅನ್ನದಾತರ ಎಂಟ್ರಿಗೆ ಕ್ಷಣಗಣನೆ ಆರಂಭವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ದಂಗಲ್.. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗೀತಿದ್ದಂತೆ ರ್ಯಾಲಿ ಶುರು

Published On - 7:14 am, Tue, 26 January 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ