AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ. ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ […]

ವಿದ್ಯಾಕಾಶಿಯ ಶತಮಾನದ ಕಾಲೇಜಿನ ದುರಸ್ತಿಗೆ ಮುಂದಾಗದ ಅಧಿಕಾರಿಗಳು
ಸಾಧು ಶ್ರೀನಾಥ್​
| Edited By: |

Updated on: Jun 07, 2020 | 6:21 PM

Share

ಧಾರವಾಡ: ವಿದ್ಯಾಕಾಶಿ ಧಾರವಾಡ ಅಂದ ಕೂಡಲೇ ಪ್ರಮುಖವಾಗಿ ಮನಸ್ಸಿಗೆ ಬರೋದು ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ! ಅಂಥವುಗಳ ಸಾಲಿಗೆ ಸೇರೋ ಮತ್ತೊಂದು ಅಂದರೆ ಅದು ಧಾರವಾಡ ತರಬೇತಿ ಕಾಲೇಜು. ಈ ಕಾಲೇಜು ಆರಂಭವಾಗಿ ಅದಾಗಲೇ ಒಂದು ಶತಮಾನ ದಾಟಿ ಹೋಗಿದೆ. 1913 ರಲ್ಲಿ ಆರಂಭವಾದ ಕಾಲೇಜು ಅದು. ಅದೀಗ ಶತಮಾನೋತ್ತರ ದಶಕದಲ್ಲಿ ಅಡಿ‌ ಇಟ್ಟಾಗಿದೆ.

ಆದರೆ ಇಂಥ ಸುಂದರವಾದ ಕಾಲೇಜಿನ ಇವತ್ತಿನ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ನೋವಾಗೋದು ಸಹಜ. ಏಕೆಂದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಯಿಂದ ಕಟ್ಟಡದ ಮೇಲೆ ತಾರಸಿ ಹಂಚಿಗೆ ಹೊದಿಸಲಾಗಿದ್ದ ಶೀಟ್​ಗಳು‌ ಮತ್ತು ಆಧಾರವಾಗಿದ್ದ ಟ್ಯೂಬ್ ಮೇಲ್ಛಾವಣಿ ಹಾರಿ ಬಿದ್ದುಹೋಗಿವೆ.

ಧಾರವಾಡದ ಪಾರಂಪರಿಕ ಕಟ್ಟಡ:  ಇದು ಧಾರವಾಡದ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಬಹುದಾದ ಕಟ್ಟಡವೂ ಹೌದು. ಧಾರವಾಡ ನಗರದ ಸುಂದರ ನಿರ್ಮಿತಿಗಳಲ್ಲಿ‌ ಇದೂ ಒಂದು. ಧಾರವಾಡದ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯನ್ನು ಕೂಡ ಈ ಕಟ್ಟಡ ಹೊಂದಿದೆ.‌ 107 ವರ್ಷ ಕಳೆದರೂ ಅಲುಗಾಡದ ಕಟ್ಟಡದ ಅಭಿಯಾಂತ್ರಿಕತೆ, ನಿರ್ಮಿತಿ ಕೌಶಲ, ಒಳಾವರಣ ವಿನ್ಯಾಸ ಅಧ್ಯಯನ ಯೋಗ್ಯ.

ಆದರೆ, ಇತ್ತೀಚೆಗೆ ಕೈಗೊಂಡ ಈ ಮೇಲ್ಛಾವಣಿ ದುರಸ್ತಿ ಕಾಮಗಾರಿಯ ಗುಣಮಟ್ಟ ನೋಡಿದರೆ ಇಲ್ಲಿ ಯಾವ ರೀತಿ ಕೆಲಸ ನಿರ್ವಹಿಸಲಾಗಿದೆ ಅನ್ನೋದು ತಿಳಿದು ಬರುತ್ತದೆ. ಘಟನೆ ನಡೆದು 2 ವಾರ ಕಳೆದರೂ ಅದರ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ. ಒಂದೆಡೆ ಇಲಾಖೆಯಲ್ಲಿ ಹಣದ ಕೊರತೆ ಇದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಹೀಗಾಗಿ ಅದರ ದುರಸ್ತಿ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ ಇದರ ಕೆಲಸ ಮಾಡಿದ್ದರೂ ಅಷ್ಟು ಬೇಗ ಹೇಗೆ ಈ ಸಮಸ್ಯೆ ಎದುರಾಯಿತು ಅನ್ನೋ ಮಾತು ಮತ್ತೊಂದು ಕಡೆ. ಇದೆಲ್ಲದರ ನಡುವೆ ಸದ್ಯಕ್ಕೆ ಸಮಾಧಾನದ ಸಂಗತಿ ಅಂದರೆ ಪ್ರಾಣ ಹಾನಿಯಾಗಿಲ್ಲ ಅನ್ನೋದು. ಒಟ್ಟಿನಲ್ಲಿ ಸುಂದರವಾದ ಕಟ್ಟಡವನ್ನು ಈ ರೀತಿಯಾಗಿ ನೋಡಬೇಕಾಗಿ ಬಂದಿದ್ದು ಧಾರವಾಡಿಗರ ದುರ್ದೈವೇ ಸರಿ.

ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್