AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!

ಮಂಜೂರಾದ ಪೂರ್ತಿ ಸಾಲದ ಹಣ ನೀಡದ ರೆಪ್ಕೋ ಹಣಕಾಸು ಸಂಸ್ಥೆಗೆ ರು.1 ಲಕ್ಷ ದಂಡ ವಿಧಿಸಿ ದೂರದಾರರಿಗೆ ಪರಿಹಾರ ನೀಡಲು ಧಾರವಾಡ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!
ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Nov 09, 2023 | 6:20 PM

Share

ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಎಂಬುವರು ನಿವೇಶನ ಖರೀದಿಸಿ ಮನೆ ಕಟ್ಟುವ ಉದ್ದೇಶದಿಂದ 2022ರ ಸಪ್ಟೆಂಬರ್‌ 9ರಂದು ಹುಬ್ಬಳ್ಳಿ ವಿದ್ಯಾನಗರದ (Hubballi) ರೆಪ್ಕೋ ಹೋಮ್ ಫೈನಾನ್ಸ್‌ (Housing loan finance company Repco Home Finance) ಅವರಿಂದ ರೂ. 12 ಲಕ್ಷ ಸಾಲ (Housing loan) ಪಡೆದಿದ್ದರು. ಮಂಜೂರಾದ ಒಟ್ಟು ಸಾಲವನ್ನು ಆಯಾ ಆಯಾ ಹಂತಗಳಲ್ಲಿ ಒಟ್ಟು ಐದು ಕಂತುಗಳಾಗಿ ಫೈನಾನ್ಸ್ ನವರು ದೂರುದಾರನಿಗೆ ಸಂದಾಯ ಮಾಡಲು ಒಪ್ಪಂದವಾಗಿತ್ತು.

ಮೊದಲಿನ ಮೂರು ಕಂತುಗಳ ಹಣ ರೂ. 9.50ಗಳನ್ನು ಎದುರುದಾರ ಫೈನಾನ್ಸ್ ನವರು ದೂರುದಾರನಿಗೆ ಕೊಟ್ಟಿದ್ದರು. ಆ ಹಣದಲ್ಲಿ ದೂರುದಾರ ಸೈಟ್ ಖರೀದಿಸಿ ಅದರಲ್ಲಿ ಮನೆ ಕಟ್ಟಿಸುವ ಕೆಲಸ ಪ್ರಾರಂಭಿಸಿದ್ದರು. 4 ಮತ್ತು 5ನೇ ಕಂತಿನ ಸಾಲದ ಹಣವನ್ನು ಎದುರುದಾರರು ಪ್ಲಾಸ್ಟರ್ ಮತ್ತು ಫ್ಲೋರಿಂಗ್‌ಗಾಗಿ ಕೊಡಬೇಕಾಗಿತ್ತು. ಆದರೆ, ಪ್ಲಾಸ್ಟರ್ ಮತ್ತು ಫ್ಲೋರಿಂಗ್ ಮಾಡಿಸಿ, ಆ ಬಗ್ಗೆ ಫೋಟೋ ಸಮೇತ ಸಾಕ್ಷಾಧಾರ ಕೊಟ್ಟಲ್ಲಿ ಮಾತ್ರ 4 ಮತ್ತು 5ನೇ ಕಂತಿನ ಹಣ ನೀಡುವುದಾಗಿ ರೆಪ್ಕೋ ಫೈನಾನ್ಸ್ ನವರು ಆಕ್ಷೇಪಣೆ ಎತ್ತಿದ್ದರು.

ಇದನ್ನು ಪ್ರಶ್ನಿಸಿ 2023ರ ಮೇ 19ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ (Dharwad Consumer Court) ಮಹಾಂತೇಶ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಸಾಲದ ಒಪ್ಪಂದಂತೆ ಪ್ಲಾಸ್ಟರ್ ಮತ್ತು ಫ್ಲೋರಿಂಗ್ ಮಾಡಲು 4ನೇ ಕಂತಿನ ಸಾಲದ ಹಣ ನೀಡುವುದು ಎಂಬ ಕರಾರು ಇದೆ. ಆದರೆ ಆ ಕರಾರನ್ನು ಎದುರುದಾರ ಫೈನಾನ್ಸ್ ನವರು ತಿರುಚಿ ವಿನಾಕಾರಣ 4ನೇ ಕಂತಿನ ಹಣ ತಡೆ ಹಿಡಿದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

ಎದುರುದಾರ ಫೈನಾನ್ಸ್ ನವರು ವರ್ಷಗಟ್ಟಲೇ ಕಾನೂನು ಬಾಹಿರವಾಗಿ 4 ಮತ್ತು 5ನೇ ಕಂತಿನ ಹಣ ಬಿಡುಗಡೆ ಮಾಡಲು ತಡೆಹಿಡಿದಿರುವುದರಿಂದ ದೂರುದಾರನ ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಎದುರುದಾರರ ವರ್ತನೆಯಿಂದ ದೂರುದಾರನಿಗೆ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಣಕಾಸಿನ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟು ಬಾಕಿ ಉಳಿದಿರುವ 4ನೇ ಕಂತಿನ ಹಣವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ದೂರುದಾರನಿಗೆ ಮಾಡಿದ ಪ್ರಮಾದಕ್ಕಾಗಿ ರೂ.1 ಲಕ್ಷ ಪರಿಹಾರ ಮತ್ತು ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಲು ರೆಪ್ಕೋ ಫೈನಾನ್ಸ್ ನವರಿಗೆ ಆಯೋಗ ನಿರ್ದೇಶಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ