AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಬೆಲೆ ಹೆಚ್ಚಳ; ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆ; ಎಲ್ಲಿ ಗೊತ್ತಾ?

ರಾಜ್ಯದಲ್ಲಿ ಒಂದು ಕಡೆ ಜನ ಗ್ಯಾರಂಟಿ ಯೋಜನೆ ಲಾಭ ಪಡೆದ್ರೆ, ಮತ್ತೊಂದು ಕಡೆ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಮದ್ಯೆ ಇಲ್ಲೊಂದು ಕಡೆ ಸಬ್ಸಿಡಿಯಲ್ಲಿ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಹೌದು, ಹುಬ್ಬಳ್ಳಿಯಲ್ಲಿ ಈ ಕಾರ್ಯ ನಡೆಯುತ್ತಿದ್ದು, ಈರುಳ್ಳಿ ಬಂದ ತಕ್ಷಣ ಜನರು ಮುಗಿಬೀಳುತ್ತಿದ್ದಾರೆ. ಏನಿದು ಈರುಳ್ಳಿ ಸಬ್ಸಡಿ ಕಥೆ ಅಂತೀರಾ? ಇಲ್ಲಿದೆ ನೋಡಿ.

ಈರುಳ್ಳಿ ಬೆಲೆ ಹೆಚ್ಚಳ; ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆ; ಎಲ್ಲಿ ಗೊತ್ತಾ?
ಹುಬ್ಬಳ್ಳಿಯಲ್ಲಿ ಅರ್ಧಬೆಲೆಗೆ ಈರುಳ್ಳಿ ವಿತರಿಸಿದ ಕೇಂದ್ರ ಸರ್ಕಾರ
ಶಿವಕುಮಾರ್ ಪತ್ತಾರ್
| Edited By: |

Updated on: Nov 10, 2023 | 3:50 PM

Share

ಹುಬ್ಬಳ್ಳಿ, ನ.10: ಕಳೆದ ಕೆಲ ತಿಂಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಶತಕ ಬಾರಿಸಿದ್ರೆ,ಇದೀಗ ಈರುಳ್ಳಿ ಶತಕದತ್ತ ದಾಪುಗಾಲು ಹಾಕಿದೆ. ಈ ಹಿನ್ನಲೆ ವಾಣಿಜ್ಯ ನಗರಿ ಹುಬ್ಬಳ್ಳಿ(Hubballi)ಯಲ್ಲಿ ಸಬ್ಸಿಡಿ ಮೂಲಕ ಈರುಳ್ಳಿ(Onion) ವಿತರಣೆ ಮಾಡಲಾಗುತ್ತಿದೆ. ಹೌದು, ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾದ ಹಿನ್ನಲೆ ಕೇಂದ್ರ ಸರ್ಕಾರವು ಎರಡು ಸಂಸ್ಥೆಗಳಾದ NCCF ಹಾಗೂ NAAFD ಜೊತೆಗೆ ಸೇರಿ ಜನರಿಗೆ ಅನಕೂಲ ಆಗಲಿ ಎನ್ನುವ ಕಾರಣಕ್ಕೆ ಈರುಳ್ಳಿಯನ್ನು ಸಬ್ಸಿಡಿ ಮೂಲಕ ವಿತರಣೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ 70 ರಿಂದ 80 ರೂಪಾಯಿ ಈರುಳ್ಳಿ ಬೆಲೆ ಇದೆ. ಆದ್ರೆ, ಕೇಂದ್ರ ಸರ್ಕಾರ 50 ರೂಪಾಯಿಗೆ ಎರಡು ಕೆಜಿ ಈರುಳ್ಳಿಯನ್ನು ಕೊಡುತ್ತಿದೆ.

ವಿವಿಧ ಪ್ರದೇಶಕ್ಕೆ ತೆರಳಿ ಈರುಳ್ಳಿ ಮಾರಾಟ

ವಾಹನದ ಮೂಲಕ  ನಗರದ ವಿವಿಧ ಪ್ರದೇಶಕ್ಕೆ ತೆರಳಿ, ಸಬ್ಸಿಡಿ ಆಧಾರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇಂದು ಹುಬ್ಬಳ್ಳಿಯ ನವನಗರದಲ್ಲಿ ಈರುಳ್ಳಿ ಮಾರಾಟ ಮಾಡಲು‌ ಸೂಚನೆ ನೀಡಲಾಗಿತ್ತು. ಅದರಂತೆ ಈರುಳ್ಳಿ ವಾಹನ ಬರುತ್ತಲೇ ಜನ‌ರು ಈರುಳ್ಳಿಗೆ ಮುಗಿಬಿದ್ದಿದ್ದು, ಸರತಿ ಸಾಲಿನಲ್ಲಿ ನಿಂತು ಜನ 50 ರೂಪಾಯಿ ಕೊಟ್ಟು ಎರಡು ಕೆಜಿ ಈರುಳ್ಳಿ ಪಡೆದುಕೊಂಡರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವ ತಗ್ಗಿಸಲು ಕೇಂದ್ರ ಸರ್ಕಾರ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆಗೆ ಮುಂದಾಗಿದೆ. ಲೋಕಸಭೆ ಚುನಾವಣೆ ಹೊತ್ತಿಗೆ ಬೆಲೆ ಏರಿಕೆ ಬಿಸಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.

ಇದನ್ನೂ ಓದಿ:ಗಗನಕ್ಕೇರಿದ ಈರುಳ್ಳಿ ಬೆಲೆ, ರೈತರಿಗೆ ದೊರೆಯುತ್ತಿಲ್ಲ ಪ್ರಯೋಜನ: ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ

5 ವಾಹನಗಳ ಮೂಲಕ ಈರುಳ್ಳಿ ವಿತರಣೆ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಐದು ವಾಹನಗಳ ಮೂಲಕ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಇನ್ನುಇದರ ಟೆಂಡರ್​​ ಹುಬ್ಬಳ್ಳಿಯ ಎಮ್ ಎಮ್ ಬ್ಯಾಹಟ್ಟಿ ಅವರಿಗೆ ಆಗಿದ್ದು, ಅವರಿಗೆ ಔಟ್ ಲೆಟ್ ಹಾಗೂ ವಾಹನದಲ್ಲಿ ಈರುಳ್ಳಿ ಮಾರಾಟ ಮಾಡಲು ಸೂಚಿಸಿದೆ. ವಾಹನದಲ್ಲಿ ಕೇಂದ್ರ ಸರ್ಕಾರದ ಬ್ಯಾನರ್ ಕೂಡಾ ಹಾಕಲಾಗಿದೆ. ಡಿಪಾರ್ಟಮೆಂಟ್ ಆಪ್ ಕಂಜ್ಯೂಮರ್ ಅಫೇರ್ಸ್, Govt of India concessional Rate by the onion sale ಎಂದು ಬರೆಯಲಾಗಿದೆ.

ಎರಡು ಕೆಜಿ ಈರುಳ್ಳಿಗೆ 50 ರೂ

ಸಂಸ್ಥೆಗಳು ತಿಳಿಸಿದ ಜಾಗದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದು, ದಿನವೊಂದಕ್ಕೆ ಹೆಚ್ಚು ಕಡಿಮೆ ಐದು ಟನ್ ಈರುಳ್ಳಿ ಮಾರಾಟವಾಗುತ್ತಿದ್ದು, ಒಂದು ಕೆಜಿಗೆ 25 ರೂಪಾಯಿಯಂತೆ ಎರಡು ಕೆಜಿ ಪಾಕೆಟ್​ಗೆ 50 ರೂಪಾಯಿ ಪಡೆದು ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ವಾಹನ ಬರುತ್ತಲೇ ಗ್ರಾಹಕರು‌ ಮುಗಿಬೀಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 80 ರೂಪಾಯಿ ಇರುವ ಈರುಳ್ಳಿ ಕೇವಲ 25 ರೂಪಾಯಿಗೆ ಸಿಗುತ್ತಿರುವುದರಿಂದ ಜನ ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರ ಸಬ್ಸಡಿ ಮೂಲಕ ಈರುಳ್ಳಿ ವಿತರಣೆ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆಗೆ ಕಂಗೆಟ್ಟಿದ ಜನರಿಗೆ, ಈರುಳ್ಳಿ ಕಣ್ಣೀರು ತರಸಿತ್ತು. ಆದ್ರೆ, ಇದೀಗ ಮನೆ ಬಾಗಿಲಲ್ಲಿ ಕಡಿಮೆ ಹಣಕ್ಕೆ ಕೇಂದ್ರ ಸರ್ಕಾರ ಈರುಳ್ಳಿ ವಿತರಣೆ ಮಾಡುತ್ತಿರುವುದು ಜನರಿಗೆ ತುಸು ನೆಮ್ಮದಿ ತರಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ