Dharwad: ಅನುಮಾನದ ಗಂಡ: ಬೇಸತ್ತ ಹೆಂಡತಿ ಮಕ್ಕಳು ಆತ್ಮಹತ್ಯೆ

ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿ ಗಂಡನ ಅನುಮಾನಕ್ಕೆ ಬೇಸತ್ತು ತಾಯಿ ಮಗಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಅನುಮಾನಕ್ಕೆ ಎರಡು ಜೀವಗಳು ಬಲಿಯಾಗಿವೆ.

Dharwad: ಅನುಮಾನದ ಗಂಡ: ಬೇಸತ್ತ ಹೆಂಡತಿ ಮಕ್ಕಳು ಆತ್ಮಹತ್ಯೆ
ಸಂಬಂಧಿಕರ ಆಕ್ರಂಧನ, ಗಂಡ ಮಾಬುಸಾಬ್
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2023 | 11:38 AM

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕೆರೆಯಲ್ಲಿ ತಾಯಿ ಮಕ್ತುಂಬಿ (38),ಮಗಳು ಸೈನಾಜ್ ( 16) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು(ಜ.6) ಕೆರೆಯಲ್ಲಿ ಶವ ಪತ್ತೆಯಾಗಿವೆ. ಶವ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ತಾಯಿ ಮಗಳನ್ನ ಕಳೆದುಕೊಂಡು‌ ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರ ಸಾವಿಗೆ ಮಕ್ತುಂಬಿ ಗಂಡನೇ ಕಾರಣ, ಯಾವಾಗಲೂ ಅನುಮಾನ ಪಡುತ್ತಿದ್ದ, ಅವನೇ ಕೊಲೆ ಮಾಡಿ ಕೆರೆಗೆ ಬೀಸಾಕಿದ್ದಾನೆ ಎಂದು ಮಕ್ತುಂಬಿ ಸಂಭಂದಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಬುಸಾಬ್ ಹಾಗೂ ಮಕ್ತುಂಬಿ ಕಳೆದ 20 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಮದುವೆ ಆದ ದಿನದಿಂದಲೇ ಮಾಬುಸಾಬ್ ತನ್ನ ಹೆಂಡತಿ ಮೇಲೆ ಅನುಮಾನ ಪಡುತಿದ್ದನಂತೆ. ಹೆಂಡತಿ ಅಷ್ಟೆ ಅಲ್ಲ ತನ್ನ ಮಕ್ಕಳ ಮೇಲೂ ಆತನಿಗೆ ಅನುಮಾನ.ಎಲ್ಲಾದರೂ ಹೋದರೆ ನಿತ್ಯ ಕಿರಿಕಿರಿ ನೀಡುತ್ತಿದ್ದ. ಹೊಲದಲ್ಲಿ ಕೆಲಸ‌ ಮಾಡಕೊಂಡಿದ್ದ ಮಾಬುಸಾಬ್ ತನ್ನ ಹೆಂಡತಿ ಮಕ್ಕಳು ಮನೆಯಿಂದ ಹೊರಹೋದರು ಅನುಮಾನದ ದೃಷ್ಟಿಯಿಂದ ನೋಡಿ ಒಂದಲ್ಲ ಒಂದು ಖ್ಯಾತೆ ತಗೆದು ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದನಂತೆ‌. ಇದು ವಿಕೋಪಕ್ಕೆ ಹೋಗಿ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ. ಇದರಿಂದ ಬೇಸತ್ತು ತಾಯಿ ಹಾಗೂ ಮಗಳು ಸೈನಾಜ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಒಂದೇ ಹಗ್ಗದಲ್ಲಿ ಕುತ್ತಿಗೆ ಕಟ್ಟಿಕೊಂಡು ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಇಂದು ಶವ ನೋಡಿದ ನಂತರವೇ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಕಳೆದ‌‌‌ ಮೂರು ದಿನಗಳಿಂದ ಗಂಡ ಮಾಬುಸಾಬ್ ಹೆಂಡತಿ‌‌ ಮಕ್ಕಳನ್ನ ಹುಡಕಾಡಿದ್ದಾನೆ. ಪೊಲೀಸರಿಗೂ ಮೌಖಿಕವಾಗಿ ತಿಳಿಸಿದ್ದಾನೆ. ಇಂದು‌ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಹೋಗಿ ಶವ ಹೊರ ತಗಿದಿದ್ದಾರೆ. ಬ್ಯಾಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಕ್ತುಂಬಿ ಸಂಬಂಧಿಕರು ಗಂಡ ಮಾಬುಸಾಬ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರಿಗೆ ಕೋರ್ಟ್ ಸೂಚನೆ

ಒಟ್ಟಾರೆ ಅನುಮಾನ ಎನ್ನುವ ಭೂತಕ್ಕೆ ಎರಡು ಜೀವಗಳು ಬಲಿಯಾಗಿವೆ. ಹೆಂಡತಿ ಅಲ್ಲದೆ ಮಗಳ‌‌ ಮೇಲೂ ಅನುಮಾನ ಪಡುತ್ತಿದ್ದವ, ಇದೀಗ ಎಲ್ಲರೂ ಸರಿ‌ ಇದ್ವಿ ಎನ್ನುವ ನಾಟಕ ಮಾಡುತ್ತಿದ್ದಾನೆ. ಮೃತ ಮಕ್ತುಂಬಿ ಸಂಭಂಧಿಕರು ಇದಕ್ಕೆಲ್ಲ ಗಂಡನೇ ಕಾರಣ ಎನ್ನುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವೇ ತಾಯಿ ಮಗಳ ಸಾವಿನ ಅಸಲಿ ಸತ್ಯ ಬಯಲಾಗಬೇಕಾಗಿದೆ.

ವರದಿ: ಶಿವಕುಮಾರ್ ಪತ್ತಾರ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ  ಮಾಡಿ

Loading...
Unable to load recommendations.
Follow Us