AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಚರಣೆ: ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ

ಹುಬ್ಬಳ್ಳಿ ಮಾತೃ ಛಾಯಾ ಬಾಲ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗಾಗಿ ಕುಮಾರಿಕಾ ಪೂಜೆ ಹಮ್ಮಿಕೊಳ್ಳಲಾಯ್ತು. ಮಕ್ಕಳಿಗೆ ಪೂಜೆ ಮಾಡಿ‌ ಕುಮಾರಿಕಾ ಹಬ್ಬ ಆಚರಿಸಿ ಬಾಲ ಮಂದಿರ ಜೊತೆ ಅಕ್ಕ ಪಕ್ಕದ ನಿವಾಸಿಗಳು ನಿರ್ಗತಿಕ ಮಕ್ಕಳ ಮುಖದಲ್ಲಿ ಹಬ್ಬದ ಕಳೆ ತಂದಿದ್ದಾರೆ.

ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಚರಣೆ: ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ
ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 19, 2023 | 10:35 PM

Share

ಹುಬ್ಬಳ್ಳಿ, ಅಕ್ಟೋಬರ್​​ 19: ಅವರೆಲ್ಲ ನಿರ್ಗತಿಕ ಮಕ್ಕಳು. ಹಬ್ಬ ಹರಿದಿನಗಳಿಂದ ವಂಚಿತರಾದ ಮಕ್ಕಳು. ಹಬ್ಬಗಳಂದರೆ ಅವರಿಗೆ ಗೊತ್ತೆ ಇಲ್ಲ. ಇದೀಗ ಹೇಳಿ ಕೇಳಿ ದಸರಾ ಹಬ್ಬ. ಆ ನಿರ್ಗತಿಕ ಬಡ ಮಕ್ಕಳಿಗೆ ಹಬ್ಬ ಗೊತ್ತಾಗಲಿ, ಎಲ್ಲರಂತೆ ಅವರು ಹಬ್ಬ ಮಾಡಲಿ ಅನ್ನುವ ಕಾರಣಕ್ಕೆ ಇವತ್ತು ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ (Kumarika Puja) ಮಾಡಾಲಯ್ತು. ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಜೊತೆ ಅಕ್ಕ ಪಕ್ಕದ ನಿವಾಸಿಗಳೆಲ್ಲ ಸೇರಿ ಆ ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ ಮಾಡಿದರು.

ಹುಬ್ಬಳ್ಳಿ ಮಾತೃ ಛಾಯಾ ಬಾಲ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗಾಗಿ ಕುಮಾರಿಕಾ ಪೂಜೆ ಹಮ್ಮಿಕೊಳ್ಳಲಾಯ್ತು. ಇದೀಗ ಹೇಳಿ ಕೇಳಿ ದಸರಾ ಹಬ್ಬ ಇವತ್ತ ಲಲಿತ ಪಂಚಮಿ ಇಲ್ಲಿರೋ ನಿರ್ಗತಿಕ ಮಕ್ಕಳಿಗೆ ಹಬ್ಬ ಅನ್ನೋದು ಗಗನ ಕುಸುಮ. ಅಂತಹ ಮಕ್ಕಳಿಗಾಗಿ ಕುಂಕುಮಾರ್ಚನೆ ಮಾಡಿ, ಮಕ್ಕಳಿಗೆ ಪೂಜೆ ಮಾಡಿ‌ ಕುಮಾರಿಕಾ ಹಬ್ಬ ಆಚರಿಸಿ ಬಾಲ ಮಂದಿರ ಜೊತೆ ಅಕ್ಕ ಪಕ್ಕದ ನಿವಾಸಿಗಳು ನಿರ್ಗತಿಕ ಮಕ್ಕಳ ಮುಖದಲ್ಲಿ ಹಬ್ಬದ ಕಳೆ ತಂದಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲೊಂದು ಮಿನಿ ವಾರಾಣಸಿ: ಇಲ್ಲಿದೆ ಹಲವು ವಿಶೇಷ

ಬಾಲ‌ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗೆ ಮಾತೆಯರು ಪೂಜೆ ಮಾಡಿದ್ದು ವಿಶೇಷವಾಗಿತ್ತು. ಮನೆಯಲ್ಲಿ ಆದರೆ ತಂದೆ ತಾಯಿ ಹಬ್ಬ ಮಾಡೋದನ್ನ ಮಕ್ಕಳು ನೋಡ್ತಾರೆ, ಇವರೆಲ್ಲ ನಿರ್ಗತಿಕ ಮಕ್ಕಳು, ಇವರಿಗೆ ಹಬ್ಬ ಅನ್ನೋದು ಗೊತ್ತಿಲ್ಲ. ಅಂತಹ ಮಕ್ಕಳಿಗೆ ಪೂಜೆ ಮಾಡಿದ್ದು ಇವತ್ತು ವಿಶೇಷವಾಗಿತ್ತು.

ಹುಬ್ಬಳ್ಳಿಯ ಕೇಶ್ವಾಪೂರದಲ್ಲಿರೋ ಬಾಲ ಮಂದಿರದಲ್ಲಿ ಸುಮಾರು 32 ಜನ ನಿರ್ಗತಿಕ ಮಕ್ಕಳಿದಾರೆ. ಮಕ್ಕಳೆಲ್ಲ ಬೇರೆ ಬೇರೆ ಶಾಲೆಯಲ್ಲಿ ಓದುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಇದೀಗ ದಸರಾ ಹಬ್ಬದ ಸಂಭ್ರಮ. ಆದರೆ ಇಲ್ಲಿರುವ ಮಕ್ಕಳಿಗೆ ಹಬ್ಬದ ಖುಷಿ ಇರಲಿಲ್ಲ, ಮಿಗಿಲಾಗಿ ತಂದೆ ತಾಯಿ ಇಲ್ಲ ಅನ್ನೋ ನೋವು. ಆ ನೋವು ನಿವಾರಣೆ ಮಾಡಲು ಕೇಶ್ವಾಪೂರದಲ್ಲಿರೋ ಮಾತೆಯರು ಇಂದು ಮುಂದಾಗಿದ್ದರು.

ಇದನ್ನೂ ಓದಿ: ವಾಹನ ಚಾಲಕರು ನಿದ್ರೆಗೆ ಜಾರುವುದನ್ನು ತಡೆಯಲು ಬಂದಿದೆ ಕನ್ನಡಕ! ಈ ಸಂಶೋಧನೆಯ ಹಿಂದಿದೆ ಯುವತಿಯ ಕರುಣಾಜನಕ ಕತೆ

ನಿರ್ಗತಿಕ ಮಕ್ಕಳನ್ನ ಸಾಲಿಗೆ ಕೂರಿಸಿ ಅವರಿಗೆ ಕುಮಾರಿಕಾ ಪೂಜೆ ಮಾಡಿ ಮಾನವೀಯತೆ ಸಾರಿದ್ದಾರೆ‌. ಪೂಜೆ ನಂತರ ಎಲ್ಲರೊಂದಿಗೆ ಮಕ್ಕಳು ಬೆರೆತು ಕೋಲಾಟ ಆಡಿದರು. ನಿರ್ಗತಿಕ ಮಕ್ಕಳೊಂದಿಗೆ ಬಾಲ ಮಂದಿರದ ಪಕ್ಕದಲ್ಲಿರೋ ಕೆಲ ಮಕ್ಕಳು ಭಾಗಿಯಾಗಿದ್ದರು.

ನಿರ್ಗತಿಕ ಮಕ್ಕಳಲ್ಲೂ ಇಂದು ದಸರಾ ಹಬ್ಬದ ಸಡಗರ ಮನೆ ಮಾಡಿತ್ತು. ತಂದೆ ತಾಯಿ ಇಲ್ಲ ಅನ್ನೋ ನೋವು ಕಾಡಬಾರದು ಅನ್ನೋ ಕಾರಣಕ್ಕೆ ಬಾಲ ಮಂದಿರ ಇಂತಹ ಕಾರ್ಯಕ್ರಮ ಮಾಡಿದ್ದೂ ನಿಜಕ್ಕೂ ಒಳ್ಳೆಯ ಕೆಲಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?