AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ಬಿಗ್ ಶಾಕ್: ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಇತರೆ ಪ್ಯಾಸೆಂಜರ್ ರೈಲು ಟಿಕೆಟ್​ ದರ ಏರಿಕೆ

ನೈರುತ್ಯ ರೈಲ್ವೆ ವಲಯ 2022ರಲ್ಲಿ ಪ್ಯಾಸೆಂಜರ್​ ಮತ್ತು ಪ್ಯಾಸೆಂಜರ್​ ಸ್ಪೆಷಲ್​ ರೈಲುಗಳನ್ನು ಸೂಪರ್​​ಪಾಸ್ಟ್​ ರೈಲುಗಳು ಎಂದು ಮರು ನಾಮಕರಣ ಮಾಡಿ, ಟಿಕೆಟ್​ ದರವನ್ನು ಮೊದಲಿನ ದರಕ್ಕಿಂತ ಎರಡುಪಟ್ಟು ಏರಿಸಿತು. ಆದರೆ ರೆಲ್ವೆ ಇಲಾಖೆಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಯಾಣಿಕರಿಗೆ ಬಿಗ್ ಶಾಕ್:  ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಇತರೆ ಪ್ಯಾಸೆಂಜರ್ ರೈಲು ಟಿಕೆಟ್​ ದರ ಏರಿಕೆ
ಹುಬ್ಬಳ್ಳಿ ಜಂಕ್ಷನ್​
ವಿವೇಕ ಬಿರಾದಾರ
|

Updated on:Mar 13, 2023 | 11:39 AM

Share

ಹುಬ್ಬಳ್ಳಿ: ರೈಲು ಆರಮದಾಯಕ ಮತ್ತು ಅಗ್ಗದಾಯಕವಾದ ಪ್ರಯಾಣಕ್ಕೆ ಹೆಸರುವಾಸಿ. ಭಾರತೀಯ ರೈಲ್ವೆ ಅತಿ ದೊಡ್ಡ ಸಂಪರ್ಕ ಜಾಲವಾಗಿದೆ. ಆದರೆ ನೈರುತ್ಯ ರೈಲ್ವೆ ವಲಯ (South Western Railway) 2022ರಲ್ಲಿ ಪ್ಯಾಸೆಂಜರ್​ ಮತ್ತು ಪ್ಯಾಸೆಂಜರ್​ ಸ್ಪೆಷಲ್​ ರೈಲುಗಳನ್ನು ಸೂಪರ್​​ಪಾಸ್ಟ್​ ರೈಲುಗಳು ಎಂದು ಮರು ನಾಮಕರಣ ಮಾಡಿ, ಟಿಕೆಟ್​ ದರವನ್ನು ಮೊದಲಿನ ದರಕ್ಕಿಂತ ಎರಡುಪಟ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ ಈ ಸೂಪರ್​​ಪಾಸ್ಟ್​ ರೈಲುಗಳ ವೇಗದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.

ನೈರುತ್ಯ ರೈಲ್ವೆ ವಲಯ 2014ರಿಂದ ಟಿಕೆಟ್​ ದರವನ್ನು ಏರಿಕೆ ಮಾಡಿರಲಿಲ್ಲ. ಆದರೆ 2019 ರಲ್ಲಿ ಕೊರೊನಾ ಮಹಾಮಾರಿ ಸೊಂಕು ದೇಶಕ್ಕೆ ಅಂಟಿಕೊಂಡ ನಂತರ, ಲಾಕ್​ಡೌನ ಮತ್ತು ಇನ್ನಿತರೆ ಕಾರಣದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಈ ಹಿನ್ನೆಲೆ ರೈಲುಗಳಿಗೆ ಸೂಪರ್​ಫಾಸ್ಟ್​ ಎಂದು ಮರು ನಾಮಕರಣ ಮಾಡಿ ರೈಲಿನ ಟಿಕೆಟ್​ ದರವನ್ನು ಏರಿಸಲಾಯಿತು.

ಕೊರೊನಾಕ್ಕಿಂತ ಮುಂಚೆ ಹುಬ್ಬಳ್ಳಿ-ಬೆಂಗಳೂರು ಸಿಟಿ-ಹುಬ್ಬಳ್ಳಿ ಫಾಸ್ಟ್​ ಪ್ಯಾಸೆಂಜರ್​ ರೈಲು ಉತ್ತರ ಕರ್ನಾಟಕದ ಬಡಜನರು ಅಗ್ಗವಾಗಿ ಪ್ರಯಾಣಿಸಲು ಅನುಕೂಲಕರವಾಗಿತ್ತು. ಆದರೆ ನೈರುತ್ಯ ರೈಲ್ವೆ ಇಲಾಖೆ ಇದನ್ನು ಸೂಪರ್​ ಫಾಸ್ಟ್ (ಗಾಡಿ ಸಂಖ್ಯೆ 17391 ಮತ್ತು 17392)​ ಎಂದು ಬದಲಾಯಿಸಿದ ನಂತರ ಟಿಕೆಟ್​​ ದರವನ್ನು ದುಪ್ಪಟ್ಟು ಮಾಡಲಾಗಿದೆ. ಅಲ್ಲದೆ ಯಥಾ ಪ್ರಕಾರ ಮೊದಲಿನಂತೆ, ಆ ಮಾರ್ಗದಲ್ಲಿನ 31 ರೈಲು ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಹೀಗಿದ್ದರೆ ಇದು ಹೇಗೆ ಸೂಪರ್​ ಫಾಸ್ಟ್​ ರೈಲಾಗುತ್ತದೆ. ಇದಲ್ಲದೆ ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಅರಸಿಕೆರೆ-ಹುಬ್ಬಳ್ಳಿ ಎಕ್ಸಪ್ರೆಸ್​ ರೈಲುಗಳು ಪ್ಯಾಸೆಂಜರ್​ ರೈಲಿನ ಹಾಗೆ ಸಂಚರಿಸುತ್ತಿವೆ ಎಂದು ನೈಋತ್ಯ ರೈಲ್ವೆ (SWR) ಪ್ರಯಾಣಿಕರ ಸಮಿತಿಯ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ ಅನುಕೂಲಗಳೇನು?

ಮೊದಲಿಗಿಂತ ಶೇ ಒಂದೂವರೆಯಷ್ಟು ಹೆಚ್ಚಿನ ಹಣವನ್ನು ಸಂಗ್ರಹಿಸಲು ವಿಜಯಪುರ-ಮಂಗಳೂರು-ವಿಜಯಪುರ ರೈಲು “ವಿಶೇಷ” ಟ್ಯಾಗ್‌ನೊಂದಿಗೆ 3 ವರ್ಷಗಳಿಂದ ಓಡುತ್ತಿದೆ. ನಿಯಮಗಳ ಪ್ರಕಾರ, ‘ವಿಶೇಷ’ ರೈಲುಗಳನ್ನು 6 ತಿಂಗಳಿಂದ 1 ವರ್ಷದವರೆಗೆ ಮಾತ್ರ ಓಡಿಸಬೇಕು. ಇತ್ತೀಚಿನ ದಿನಗಳಲ್ಲಿ ನೈರುತ್ಯ ರೈಲ್ವೆ ಇಲಾಖೆ ಹೆಚ್ಚಿನ ದರದೊಂದಿಗೆ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳ ದರ ಬಸ್​ ಪ್ರಯಾಣದ ದರಕ್ಕೆ ಸಮಾನಾಗಿದೆ. ಅಲ್ಲದೆ ನಕಲಿ ಎಕ್ಸ್‌ಪ್ರೆಸ್‌ಗಳ ನಿಲುಗಡೆಯನ್ನು ಕಡಿಮೆ ಮಾಡಿಲ್ಲ, ಸೌಲಭ್ಯಗಳನ್ನು ಹೆಚ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಇಂತಹ ರೈಲುಗಳು ಹೆಚ್ಚಾಗಿದ್ದು, ಬಡ ಪ್ರಯಾಣಿಕರಿಗೆ ಬಹಿರಂಗವಾಗಿ ವಂಚನೆ ಮಾಡಲಾಗುತ್ತಿದೆ. ಹುಬ್ಬಳ್ಳಿ-ತಿರುಪತಿ-ಹುಬ್ಬಳ್ಳಿ ರೈಲು ಕೊರೊನಾಕ್ಕಿಂತ ಮೊದಲು ಫಾಸ್ಟ್ ಪ್ಯಾಸೆಂಜರ್ ಆಗಿತ್ತು. ಈಗ ಹೆಚ್ಚಿನ ದರವನ್ನು ಸಂಗ್ರಹಿಸಲು ಸೂಪರ್‌ಫಾಸ್ಟ್ (ಗಾಡಿ ಸಂಖ್ಯೆ 07657 ಮತ್ತು 07658) ಆಗಿ ಬದಲಾಯಿಸಲಾಗಿದೆ. ಸೊಲ್ಲಾಪುರ-ಗದಗ-ಸೊಲ್ಲಾಪುರ ಪ್ಯಾಸೆಂಜರ್​ ರೈಲು ಈಗ ಎಕ್ಸ್‌ಪ್ರೆಸ್ ಆಗಿದೆ. ಮೊದಲಿನಂತೆ ಈಗಲೂ ಎಲ್ಲ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ನಿತ್ಯ ಪ್ರಯಾಣಿಸುವ ಪ್ರೊ.ಭಾರ್ಗವ್ ಹೆಚ್.ಕೆ. ಎಂಬುವರು ದೂರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Mon, 13 March 23

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ