ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ್ದ ಹೆಸ್ಕಾಂ – ಗ್ರಾಹಕರ ಆಯೋಗ ಹೇಳಿದ್ದೇನು?

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.

ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ್ದ ಹೆಸ್ಕಾಂ - ಗ್ರಾಹಕರ ಆಯೋಗ ಹೇಳಿದ್ದೇನು?
ಬಿಲ್​ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ ಹೆಸ್ಕಾಂ!
Edited By: ಸಾಧು ಶ್ರೀನಾಥ್​

Updated on: Feb 09, 2024 | 5:32 PM

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ (HESCOM) ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು. ಧಾರವಾಡದ ನಿವಾಸಿ ಆರ್.ಎಂ. ಉಷಾ ಎಂಬುವವರು (Woman) ಶಕ್ತಿ ನಗರದ ಮನೆ ನಂ. 97 ರಲ್ಲಿ ವಾಸವಿದ್ದು, ಅದರಲ್ಲಿ ಒಟ್ಟು ಆರು ಮನೆಗಳ ಭಾಗಗಳಿದ್ದವು. ಅವುಗಳ ಪೈಕಿ ಎರಡಲ್ಲಿ ದೂರುದಾರರು (Consumer) ಮತ್ತು ಅವರ ಮಗ ವಾಸಿಸುತ್ತಿದ್ದರು. ಉಳಿದ ನಾಲ್ಕು ಮನೆಗಳಲ್ಲಿ ಬಾಡಿಗೆದಾರರು ಇದ್ದರು. ಈ ಮನೆಗಳ ಕುರಿತು ವ್ಯಾಜ್ಯ ಇರುವುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು.

ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.

ಇದನ್ನೂ ಓದಿ:  ಹುಬ್ಬಳ್ಳಿ -ಡೆಪಾಸಿಟ್​ ಹಿಂದಿರುಗಿಸದ ಸರಸ್ವತಿ ಕೋ ಆಪ್​​ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್​​

ದೂರುದಾರಳು ಮತ್ತು ಅವರ ಗಂಡನಿಗೆ ಸಂಬಂಧಿಸಿದ ಒಟ್ಟು ಆರು ವಿದ್ಯುತ್ ಬಳಕೆಯ ಮೀಟರಗಳಿದ್ದು ಅವುಗಳ ವಿದ್ಯುತ್ ಬಿಲ್ಲನ್ನು ಕಟ್ಟಿರಲಿಲ್ಲ. ವಿದ್ಯುತ್ ಬಳಕೆಯ ಬಾಕಿ ಬಿಲ್ ಕಟ್ಟದೇ ದೂರುದಾರರಿಗೆ ಯಾವುದೇ ರೀತಿ ಸಹಾಯ ಮಾಡಲಾಗುವುದಿಲ್ಲ ಎಂದು ಹೆಸ್ಕಾಂ ಆಕ್ಷೇಪಣೆ ಎತ್ತಿತ್ತು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ದೂರುದಾರಳು ಬಾಕಿ ಇರುವ ವಿದ್ಯುತ್ ಬಳಕೆಯ ಶುಲ್ಕ ಕಟ್ಟಲು ತಯಾರು ಇರುವುದಾಗಿ ಮತ್ತು ತಾನು ಉಪಯೋಗಿಸುತ್ತಿರುವ ಎರಡು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ನಿಯಮಿತವಾಗಿ ಕಟ್ಟುವುದಾಗಿ ಹೇಳಿದರು.

Also Read: ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ, ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

ಬಾಕಿ ವಿದ್ಯುತ್ ಶುಲ್ಕ ಎದುರುದಾರ ಹೆಸ್ಕಾಂನವರಿಗೆ ದೂರುದಾರಳು ಕಟ್ಟಿ ಬಂದು ವರದಿ ಮಾಡಿದರು. ದೂರುದಾರಳೂ ಹೆಣ್ಣು ಮಗಳಾದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಅವರ ಹಾಗೂ ಮಗನ ಬಳಕೆಯ ಎರಡು ವಿದ್ಯುತ್ ಮೀಟರಗಳಿಗೆ ಸರಬರಾಜು ಬಂದ್ ಮಾಡದಂತೆ ಹೆಸ್ಕಾಂನವರಿಗೆ ಆಯೋಗ ಆದೇಶಿಸಿದೆ. ಜೊತೆಗೆ ಇನ್ನು ಮುಂದೆ ವಿದ್ಯುತ್ ಬಳಕೆಯ ಶುಲ್ಕ ತಪ್ಪದೇ ಕಟ್ಟಿಕೊಂಡು ಹೋಗುವಂತೆ ದೂರುದಾರರಿಗೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us