AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!

ಬೆಂಗಳೂರಿನ RO ನೀರಿನ ಘಟಕಗಳಿಗೀಗ ಹೊಸ ರೂಪ ಸಿಕ್ಕಿದೆ. ಮೊದಲು 5 ರೂ. ನಾಣ್ಯ ಪಾವತಿಸಿ ನೀರು ಪಡೆಯಬೇಕಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ. ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!
ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ
ಭಾವನಾ ಹೆಗಡೆ
|

Updated on: Oct 03, 2025 | 2:29 PM

Share

ಬೆಂಗಳೂರು, ಅಕ್ಟೋಬರ್ 3: ಬೆಂಗಳೂರಿನ ಹಲವಾರು ಪ್ರದೇಶಗಳು ನೀರಿನ ಕೊರತೆಯಿಂದ ಬಳಲುತ್ತಿವೆ. ಅಲ್ಲಿ ವಾಸಿಸುವ ಜನರು ಜೀವಜಲಕ್ಕಾಗಿ RO ನೀರಿನ ಕಿಯೋಸ್ಕ್​ಗಳ ಮೇಲೆ ಅವಲಂಬಿತರಾಗಿದ್ದಾರೆ. ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾದಾಗ, ಬೋರ್​ವೆಲ್​ಗಳು ಹಾಳಾದಾಗ ಈ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಚ್ಛವಾದ ನೀರನ್ನು ಈ ಕಿಯೋಸ್ಕ್ಗಳು ಕಡಿಮೆ ದರದಲ್ಲಿ ಒದಗಿಸುತ್ತವೆ. ಈಗ ಈ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯೊಂದು ಆಗಿದೆ. ಮೊದಲು 20 ಲೀ. ನೀರಿಗಾಗಿ 5 ರೂ. ನಾಣ್ಯವನ್ನು ಕಿಯೋಸ್ಕ್ಗಳಲ್ಲಿ ಹಾಕಬೇಕಿತ್ತು. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ.

ನೀರಿನ ಕೀಯೋಸ್ಕ್​ಗಳಿಗೀಗ ಡಿಜಿಟಲ್ ರೂಪ

ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ RO ಕಿಯೋಸ್ಕ್ಗಳನ್ನು ಅಳವಡಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಅದರ ನಿರ್ವಹಣೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಹಲವು ಕಿಯೋಸ್ಕ್ಗಳು ಕಾರ್ಯ ರ್ನಿಹಿಸುತ್ತಲೇ ಇರಲಿಲ್ಲ.ನಂತರ ಓಟ್ಟೂ 1184 RO ಘಟಕ​ಗಳನ್ನು BWSSB ಸುಪರ್ದಿಗೆ ಒಪ್ಪಿಸಲಾಗಿತ್ತು. ಈಗ ಈ ಮಂಡಳಿ ಎಲ್ಲಾ ಕಿಯೋಸ್ಕ್ಗಳನ್ನು ಸ್ವಾವಲಂಬಿ ಘಟಕಗಳನ್ನಾಗಿಸಿದೆ. ಹೀಗೆ ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಇನ್ನು ನೀರು ಪಡೆಯುವುದಕ್ಕಾಗಿ 5 ರೂ. ನಾಣ್ಯವನ್ನು ಉಪಯೋಗಿಸುವ ಅವಶ್ಯಕತೆಯಿಲ್ಲ. ಅಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೀದಾ BWSSBಗೇ ಹಣ ಪಾವತಿಸಿ ಕ್ಯಾನ್​ಗಳಲ್ಲಿ ನೀರು ತುಂಬಿಸಿಕೊಳ್ಳಬಹುದು. ಹಾಗೊಂದು ವೇಳೆ ನೀಮ್ಮ ಬಳಿ ಸ್ಮಾರ್ಟ್​ ಫೋನ್​ ಇಲ್ಲದಿದ್ದಲ್ಲಿ ನೀವು BWSSB ಸರ್ವಿಸ್ ಸೆಂಟರ್​ಗಳಲ್ಲಿ ಮೊದಲಿಗೇ ಹಣ ಪಾವತಿಸಿ ಕಾರ್ಡ್​ಗಳನ್ನು ಪಡೆದುಕೊಳ್ಳಬಹುದು. ಆ ಕಾರ್ಡನ್ನು ಸ್ವೈಪ್ ಮಾಡಿ ನೀರು ತುಂಬಿಸಿಕೊಳ್ಳಹುದು.

ಗುತ್ತಿಗೆದಾರರಿಗೆ  ಆದಾಯದಲ್ಲಿ ಸಿಂಹ ಪಾಲು

ಸಧ್ಯಕ್ಕೆ ಡಿಜಿಟಲ್ ಘಟಕ​ಗಳನ್ನು ಸರ್ಕಾದಿಂದ ದೂರವಿಟ್ಟಿರುವ ಸರಬರಾಜು ಮಂಡಳಿ, ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದೆ. ಅಷ್ಟೇ ಅಲ್ಲದೇ ಬರುವ ಆದಾಯದ 60ರಷ್ಟು ಭಾಗವನ್ನು ಗುತ್ತಿಗೆದಾರರಿಗೆ ನೀಡುವುದಾಗಿ ಹೇಳಿದೆ. ಮೊದಲಿಗೆ BBMP ಘಟಕ​ಗಳು ನಿರ್ವಹಣೆ ಮಾಡುತ್ತಿದ್ದಾಗ ಹಣಕಾಸು ವ್ಯವಹಾರದ ಯಾವ ದಾಖಲೆಗಳೂ ಇರಲಿಲ್ಲ. ಅಷ್ಟೇ ಅಲ್ಲದೇ ಸರಬರಾಜು ಮಾಡುತ್ತಿದ್ದ ನೀರು ಸಹ ಕಳಪೆ ಗುಣಮಟ್ಟದ್ದಾಗಿತ್ತು. ಘಟಕಗಳ ಒಳಗಿದ್ದ ಫಿಲ್ಟರ್​ಗಳನ್ನು ಬದಲಾಯಿಸದೇ ತಿಂಗಳುಗಟ್ಟಲೆ ಇಡಲಾಗುತ್ತಿತ್ತು. ಇದನ್ನೆಲ್ಲ ಗಮನಿಸಿದ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!