AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!

ಬೆಂಗಳೂರಿನ RO ನೀರಿನ ಘಟಕಗಳಿಗೀಗ ಹೊಸ ರೂಪ ಸಿಕ್ಕಿದೆ. ಮೊದಲು 5 ರೂ. ನಾಣ್ಯ ಪಾವತಿಸಿ ನೀರು ಪಡೆಯಬೇಕಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ. ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!
ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ
ಭಾವನಾ ಹೆಗಡೆ
|

Updated on: Oct 03, 2025 | 2:29 PM

Share

ಬೆಂಗಳೂರು, ಅಕ್ಟೋಬರ್ 3: ಬೆಂಗಳೂರಿನ ಹಲವಾರು ಪ್ರದೇಶಗಳು ನೀರಿನ ಕೊರತೆಯಿಂದ ಬಳಲುತ್ತಿವೆ. ಅಲ್ಲಿ ವಾಸಿಸುವ ಜನರು ಜೀವಜಲಕ್ಕಾಗಿ RO ನೀರಿನ ಕಿಯೋಸ್ಕ್​ಗಳ ಮೇಲೆ ಅವಲಂಬಿತರಾಗಿದ್ದಾರೆ. ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾದಾಗ, ಬೋರ್​ವೆಲ್​ಗಳು ಹಾಳಾದಾಗ ಈ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಚ್ಛವಾದ ನೀರನ್ನು ಈ ಕಿಯೋಸ್ಕ್ಗಳು ಕಡಿಮೆ ದರದಲ್ಲಿ ಒದಗಿಸುತ್ತವೆ. ಈಗ ಈ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯೊಂದು ಆಗಿದೆ. ಮೊದಲು 20 ಲೀ. ನೀರಿಗಾಗಿ 5 ರೂ. ನಾಣ್ಯವನ್ನು ಕಿಯೋಸ್ಕ್ಗಳಲ್ಲಿ ಹಾಕಬೇಕಿತ್ತು. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ.

ನೀರಿನ ಕೀಯೋಸ್ಕ್​ಗಳಿಗೀಗ ಡಿಜಿಟಲ್ ರೂಪ

ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ RO ಕಿಯೋಸ್ಕ್ಗಳನ್ನು ಅಳವಡಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಅದರ ನಿರ್ವಹಣೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಹಲವು ಕಿಯೋಸ್ಕ್ಗಳು ಕಾರ್ಯ ರ್ನಿಹಿಸುತ್ತಲೇ ಇರಲಿಲ್ಲ.ನಂತರ ಓಟ್ಟೂ 1184 RO ಘಟಕ​ಗಳನ್ನು BWSSB ಸುಪರ್ದಿಗೆ ಒಪ್ಪಿಸಲಾಗಿತ್ತು. ಈಗ ಈ ಮಂಡಳಿ ಎಲ್ಲಾ ಕಿಯೋಸ್ಕ್ಗಳನ್ನು ಸ್ವಾವಲಂಬಿ ಘಟಕಗಳನ್ನಾಗಿಸಿದೆ. ಹೀಗೆ ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಇನ್ನು ನೀರು ಪಡೆಯುವುದಕ್ಕಾಗಿ 5 ರೂ. ನಾಣ್ಯವನ್ನು ಉಪಯೋಗಿಸುವ ಅವಶ್ಯಕತೆಯಿಲ್ಲ. ಅಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೀದಾ BWSSBಗೇ ಹಣ ಪಾವತಿಸಿ ಕ್ಯಾನ್​ಗಳಲ್ಲಿ ನೀರು ತುಂಬಿಸಿಕೊಳ್ಳಬಹುದು. ಹಾಗೊಂದು ವೇಳೆ ನೀಮ್ಮ ಬಳಿ ಸ್ಮಾರ್ಟ್​ ಫೋನ್​ ಇಲ್ಲದಿದ್ದಲ್ಲಿ ನೀವು BWSSB ಸರ್ವಿಸ್ ಸೆಂಟರ್​ಗಳಲ್ಲಿ ಮೊದಲಿಗೇ ಹಣ ಪಾವತಿಸಿ ಕಾರ್ಡ್​ಗಳನ್ನು ಪಡೆದುಕೊಳ್ಳಬಹುದು. ಆ ಕಾರ್ಡನ್ನು ಸ್ವೈಪ್ ಮಾಡಿ ನೀರು ತುಂಬಿಸಿಕೊಳ್ಳಹುದು.

ಗುತ್ತಿಗೆದಾರರಿಗೆ  ಆದಾಯದಲ್ಲಿ ಸಿಂಹ ಪಾಲು

ಸಧ್ಯಕ್ಕೆ ಡಿಜಿಟಲ್ ಘಟಕ​ಗಳನ್ನು ಸರ್ಕಾದಿಂದ ದೂರವಿಟ್ಟಿರುವ ಸರಬರಾಜು ಮಂಡಳಿ, ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದೆ. ಅಷ್ಟೇ ಅಲ್ಲದೇ ಬರುವ ಆದಾಯದ 60ರಷ್ಟು ಭಾಗವನ್ನು ಗುತ್ತಿಗೆದಾರರಿಗೆ ನೀಡುವುದಾಗಿ ಹೇಳಿದೆ. ಮೊದಲಿಗೆ BBMP ಘಟಕ​ಗಳು ನಿರ್ವಹಣೆ ಮಾಡುತ್ತಿದ್ದಾಗ ಹಣಕಾಸು ವ್ಯವಹಾರದ ಯಾವ ದಾಖಲೆಗಳೂ ಇರಲಿಲ್ಲ. ಅಷ್ಟೇ ಅಲ್ಲದೇ ಸರಬರಾಜು ಮಾಡುತ್ತಿದ್ದ ನೀರು ಸಹ ಕಳಪೆ ಗುಣಮಟ್ಟದ್ದಾಗಿತ್ತು. ಘಟಕಗಳ ಒಳಗಿದ್ದ ಫಿಲ್ಟರ್​ಗಳನ್ನು ಬದಲಾಯಿಸದೇ ತಿಂಗಳುಗಟ್ಟಲೆ ಇಡಲಾಗುತ್ತಿತ್ತು. ಇದನ್ನೆಲ್ಲ ಗಮನಿಸಿದ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು