AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಸಾಕು ನಾಯಿಯನ್ನು ಕಳೆದುಕೊಂಡ ಮಾಲೀಕ ತನ್ನ ಮುದ್ದಿನ ನಾಯಿಗಾಗಿ ಸಮಾಧಿ ಕಟ್ಟಿಸಿ ತಿಥಿ ಮಾಡಿದ್ದಾರೆ. ಕಳೆದ ಮೇ 24 ರಂದು ಅನಾರೋಗ್ಯದ ಕಾರಣ ನಾಯಿ ಮೃತಪಟ್ಟಿತ್ತು. ಹೀಗಾಗಿ ಮನುಷ್ಯ ಸತ್ತಾಗ ಯಾವ ರೀತಿ ತಿಥಿ ಮಾಡುತ್ತಾರೋ ಅದೇ ರೀತಿ ತಮ್ಮ ಮುದ್ದಿನ ನಾಯಿ ಮೃತಪಟ್ಟ ಬಳಿಕ ಶಾಸ್ತ್ರಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಿ ನಾಯಿಯ ಸವಿ ನೆನಪಿನಲ್ಲಿ ಮಾಲೀಕ ತಿಥಿ ಮಾಡಿದ್ದಾರೆ.

ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ
ಸಾಕು ನಾಯಿ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿದ ಮಾಲೀಕ
TV9 Web
| Updated By: ಆಯೇಷಾ ಬಾನು|

Updated on: Jun 20, 2021 | 2:55 PM

Share

ತುಮಕೂರು: ಮನುಷ್ಯರ ಜೀವನದಲ್ಲಿ ಸಾಕು ಪ್ರಾಣಿಗಳಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಮನುಷ್ಯರು ಶ್ವಾನಕ್ಕೂ ಮನುಷ್ಯರಷ್ಟೇ ಸ್ಥಾನ ನೀಡಿ ಹೆಚ್ಚು ಆತ್ಮೀಯರಾಗುತ್ತಾರೆ, ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ಮನುಷ್ಯನ ಮೌನವನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣವಿರುತ್ತೆ. ತಮ್ಮವರೂ ತಿಳಿದುಕೊಳ್ಳಲಾಗದ ಅದೆಷ್ಟೂ ಸಂಗತಿಗಳನ್ನು ಶ್ವಾನಗಳು ಬೇಗ ಗುರುತಿಸಿ ಸ್ಪಂದಿಸುತ್ತವೆ. ತಮ್ಮವರ ಜಾಗವನ್ನು ತುಂಬುತ್ತವೆ. ಪ್ರೀತಿ, ನಂಬಿಕೆ-ವಿಶ್ವಾಸಕ್ಕೆ ನಾಯಿಗಳು ಬೆಸ್ಟ್ ಉದಾಹರಣೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಸಾಕು ನಾಯಿಯನ್ನು ಕಳೆದುಕೊಂಡ ಮಾಲೀಕ ತನ್ನ ಮುದ್ದಿನ ನಾಯಿಗಾಗಿ ಸಮಾಧಿ ಕಟ್ಟಿಸಿ ತಿಥಿ ಮಾಡಿದ್ದಾರೆ. ಕಳೆದ ಮೇ 24 ರಂದು ಅನಾರೋಗ್ಯದ ಕಾರಣ ನಾಯಿ ಮೃತಪಟ್ಟಿತ್ತು. ಹೀಗಾಗಿ ಮನುಷ್ಯ ಸತ್ತಾಗ ಯಾವ ರೀತಿ ತಿಥಿ ಮಾಡುತ್ತಾರೋ ಅದೇ ರೀತಿ ತಮ್ಮ ಮುದ್ದಿನ ನಾಯಿ ಮೃತಪಟ್ಟ ಬಳಿಕ ಶಾಸ್ತ್ರಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಿ ನಾಯಿಯ ಸವಿ ನೆನಪಿನಲ್ಲಿ ಮಾಲೀಕ ತಿಥಿ ಮಾಡಿದ್ದಾರೆ.

ಗ್ರಾಮದ ಕೊಟ್ಟೂರಯ್ಯ ಹಾಗೂ ಜಯಶೀಲ ದಂಪತಿ ತಮಗೆ ಮಕ್ಕಳಿಲ್ಲದ ಕಾರಣ ನಾಯಿಯನ್ನು ಸಾಕಿದ್ದರು. ಮಕ್ಕಳಿದ್ದರೆ ಯಾವ ರೀತಿ ಪ್ರೀತಿಯನ್ನು ಕೊಟ್ಟು ಬೆಳೆಸುತ್ತಿದ್ದರೂ ಅದೇ ರೀತಿ ನಾಯಿಗೆ ಮಕ್ಕಳ ಸ್ಥಾನ ನೀಡಿ ಸಾಕಿದ್ದರು. ಆದ್ರೆ ಅನಾರೋಗ್ಯದ ಕಾರಣ ಮೇ 24ರಂದು ಕೊನೆಯುಸಿರೆಳೆದಿದೆ. ಹೀಗಾಗಿ ಸಮಾಧಿ ಕಟ್ಟಿ ಜೂನ್ 19ರಂದು ತಿಥಿ ಮಾಡಿದ್ದಾರೆ. ಈ ವೇಳೆ ನಾಯಿಯ ಸವಿ ನೆನಪಿಗೆ ಊರಿನ ಗ್ರಾಮಸ್ಥರಿಗೆ ಊಟ ಹಾಕಿದ್ದಾರೆ.

ಇದನ್ನೂ ಓದಿ: ಹಾಸನ: ಸಾಕುನಾಯಿ ಹೊತ್ತೊಯ್ದ ಚಿರತೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ