AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಾತ್ರಿ ನಾಯಿ ಜಾಗಕ್ಕಾಗಿ ಹಾಲಿ-ಮಾಜಿ ಶಾಸಕರ ರಿಲೆಟೀವ್ಸ್ ಫೈಟ್​!

ಬಾಗಲಕೋಟೆ: ಇಳಕಲ್ ನಗರದ ಪ್ರವಾಸಿ ಮಂದಿರದಲ್ಲಿ ನಾಯಿ ಶೆಡ್ ಕಿತ್ತಾಕಿದ ವಿಚಾರಕ್ಕೆ ಹಾಲಿ ಶಾಸಕನ ಪುತ್ರ ಮತ್ತು ಮಾಜಿ ಶಾಸಕನ ಸಹೋದರರ ಮಧ್ಯೆ ತಡರಾತ್ರಿ ಜಗಳವಾಗಿದೆ. ಶಾಸಕ ದೊಡ್ಡನಗೌಡ ಪಾಟೀಲ ಪುತ್ರ ರಾಜುಗೌಡ ಪಾಟೀಲ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ್ ನಡುವೆ ತಡರಾತ್ರಿ ಗಲಾಟೆಯಾಗಿದೆ. ನಾಯಿ ಶೆಡ್​ ಸಂಬಂಧ ಮಾತಿಗೆ ಮಾತು ಬೆಳೆದು ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ವೇಳೆ ರಾತ್ರಿ ಬೀಟ್ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ಬಿಡಿಸಿದ್ದಾರೆ. ಘಟನಾ ಸ್ಥಳಕ್ಕೆ ಇಳಕಲ್ […]

ನಡುರಾತ್ರಿ ನಾಯಿ ಜಾಗಕ್ಕಾಗಿ ಹಾಲಿ-ಮಾಜಿ ಶಾಸಕರ ರಿಲೆಟೀವ್ಸ್ ಫೈಟ್​!
ಸಾಧು ಶ್ರೀನಾಥ್​
|

Updated on:Oct 21, 2019 | 3:12 PM

Share

ಬಾಗಲಕೋಟೆ: ಇಳಕಲ್ ನಗರದ ಪ್ರವಾಸಿ ಮಂದಿರದಲ್ಲಿ ನಾಯಿ ಶೆಡ್ ಕಿತ್ತಾಕಿದ ವಿಚಾರಕ್ಕೆ ಹಾಲಿ ಶಾಸಕನ ಪುತ್ರ ಮತ್ತು ಮಾಜಿ ಶಾಸಕನ ಸಹೋದರರ ಮಧ್ಯೆ ತಡರಾತ್ರಿ ಜಗಳವಾಗಿದೆ.

ಶಾಸಕ ದೊಡ್ಡನಗೌಡ ಪಾಟೀಲ ಪುತ್ರ ರಾಜುಗೌಡ ಪಾಟೀಲ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ್ ನಡುವೆ ತಡರಾತ್ರಿ ಗಲಾಟೆಯಾಗಿದೆ. ನಾಯಿ ಶೆಡ್​ ಸಂಬಂಧ ಮಾತಿಗೆ ಮಾತು ಬೆಳೆದು ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ವೇಳೆ ರಾತ್ರಿ ಬೀಟ್ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ಬಿಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಇಳಕಲ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದ್ರೆ ಇವರಿಬ್ಬರ ಗಲಾಟೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Published On - 3:03 pm, Mon, 21 October 19