AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ವ ಗ್ರೂಪ್​ಗೆ ಸೇರಿದ 84.40 ಕೋಟಿ ರೂಪಾಯಿ ಸ್ಥಿರಾಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

Kanva Group: ಒಟ್ಟು ₹84.40 ಕೋಟಿ ಮೊತ್ತದ ಆಸ್ತಿ ಜಪ್ತಿ ಮಾಡಲಾಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನ್ನ ಅಧಿಕೃತ ಟ್ವಿಟರ್​ ಅಕೌಂಟ್​ನಲ್ಲಿ ಟ್ವೀಟ್​ ಮಾಡುವ ಮೂಲಕವೂ ಮಾಹಿತಿ ನೀಡಿದೆ.

ಕಣ್ವ ಗ್ರೂಪ್​ಗೆ ಸೇರಿದ 84.40 ಕೋಟಿ ರೂಪಾಯಿ ಸ್ಥಿರಾಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
ಸಂಗ್ರಹ ಚಿತ್ರ
Skanda
| Edited By: |

Updated on:Feb 28, 2021 | 8:26 AM

Share

ಬೆಂಗಳೂರು: ಕಣ್ವ ಗ್ರೂಪ್​ ಒಡೆತನಕ್ಕೆ ಸೇರಿದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿರುವ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಇದು ಕಣ್ವ ಸಮೂಹ, ಎನ್​. ನಂಜುಂಡಯ್ಯ ಅವರ ಕುಟುಂಬದ ಸದಸ್ಯರು ಹಾಗೂ ಹರೀಶ್​ ಎಂಬುವವರ ಹೆಸರಿನಲ್ಲಿತ್ತು ಎಂದು ED (Enforcement Directorate) ಮಾಹಿತಿ ನೀಡಿದೆ.

ಒಟ್ಟು ₹84.40 ಕೋಟಿ ಮೊತ್ತದ ಆಸ್ತಿ ಜಪ್ತಿ ಮಾಡಲಾಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನ್ನ ಅಧಿಕೃತ ಟ್ವಿಟರ್​ ಅಕೌಂಟ್​ನಲ್ಲಿ ಟ್ವೀಟ್​ ಮಾಡುವ ಮೂಲಕವೂ ಮಾಹಿತಿ ನೀಡಿದೆ. ಸದ್ಯ ಸ್ಥಿರಾಸ್ತಿ ಜಪ್ತಿಗೆ ಕಾರಣವಾದ ಮಾಹಿತಿಗಳು ನಿಖರವಾಗಿ ಲಭ್ಯವಾಗಿಲ್ಲ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಲ್ಲಿರುವ ಕಣ್ವ ಸಮೂಹ ಸಂಸ್ಥೆಗಳ $84.40 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಪಿಎಂಎಲ್ ಎ ಆ್ಯಕ್ಟ್ 2002ರ ಅಡಿಯಲ್ಲಿ ಆಸ್ತಿಗಳ ಮುಟ್ಟುಗೋಲು ಹಾಕಲಾಗುತ್ತಿದೆ. ಈ ಹಿಂದೆ 255.17ಕೋಟಿ ಮೌಲ್ಯದ ಚರ ಸ್ಥಿರ ಆಸ್ತಿ ಅಟ್ಯಾಚ್ ಮಾಡಿದ್ದ ಇಡಿ. ಈ ವರೆಗೆ ಒಟ್ಟು 339.57ಕೋಟಿ ಮೌಲ್ಯದ ಕಣ್ವ ಸಮೂಹ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿದೆ. ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿನ ಕಣ್ವ ಸೌಹಾರ್ದ ಕೋ-ಅಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿಮಿಟೆಡ್ ಹೆಸರಲ್ಲಿ ಹಣ ಸಂಗ್ರಹ ಮಾಡಲಾಗಿದೆ. ಸುಮಾರು 13 ಸಾವಿರ ಜನರಿಂದ 650 ಕೋಟಿ ಹಣ ಸಂಗ್ರಹ ಮಾಡಿರುವ ಬಗ್ಗೆ ದಾಖಲೆ ಪತ್ತೆಯಾಗಿದೆ.

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಏಜೆಂಟ್​ಗಳಿಂದ ಹಣ ಸಂಗ್ರಹಿಸಿ ವಂಚನೆ ಆರೋಪ ಕಣ್ವ ಸಮೂಹ ಸಂಸ್ಥೆಗಳ ನಿರ್ದೇಶಕ ಎನ್ ನಂಜುಂಡಯ್ಯ ವಿರುದ್ಧ ಇಡಿಗೆ ಸಹಕಾರಿ ಸಂಘಗಳ ನೋಂದಣಾಧಿಕಾರಿ ದೂರು ನೀಡಿದ್ದರು. ಅಲ್ಲದೆ ಕಣ್ವ ಸಮೂಹ ಸಂಸ್ಥೆಗಳ ವಿರುದ್ಧ ಇತರೆಡೆ ದಾಖಲಾಗಿದ್ದ FIR ಆಧಾರದ ಮೇಲೆ 2020 ಆಗಸ್ಟ್ 25ರಂದು ದಾಳಿ ನಡೆದಿತ್ತು. ದಾಳಿ ನಡೆಸಿ ಹಲವು ಮಹತ್ವದ ದಾಖಲೆಯನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ 2020 ಅಕ್ಟೋಬರ್​ನಲ್ಲಿ ಕೋರ್ಟ್‌ ಮುಂದೆ ಪ್ರಕರಣವನ್ನು ಇಡಿ ದಾಖಲಿಸಿತ್ತು.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಜಾರಿ ನಿರ್ದೇಶನಾಲಯ ಕೋರ್ಟ್ ಸಮನ್ಸ್

ಕಣ್ವ ಸಂಸ್ಥೆಯ ನೂರಾರು ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED

Published On - 3:51 pm, Sat, 27 February 21