AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ವಿರುದ್ಧ ಮಾತನಾಡಿದರು! ಇದರ ಸಂದೇಶ ಏನು?

s sureshkumar: ಖಾಸಗಿ ಶಾಲೆಗಳ ಮುಂದೆ ಪದೇಪದೆ ಪ್ರತಿಭಟನೆ ಸರಿಯಲ್ಲ ಎಂದು ಪಾಲಕರಿಗೆ ಬುದ್ಧಿಮಾತು ಹೇಳಿದ್ದಾರೆ. ಇನ್ನು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ಬಗ್ಗೆಯಂತೂ ಸಚಿವರು ತುಟಿಬಿಚ್ಚಿಲ್ಲ. ಇದುವರೆಗೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ಪಡೆಯುವುದು ತರವಲ್ಲ ಅನ್ನುತ್ತಿದ್ದ ಸುರೇಶ್ ಕುಮಾರ್ ಅವರು ಈಗ ಶುಲ್ಕ ವಿಚಾರದಲ್ಲಿ ಉಲ್ಟಾ ಹೊಡದ್ರಾ ಅನ್ನಿಸುತ್ತಿದೆ.

ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ವಿರುದ್ಧ ಮಾತನಾಡಿದರು! ಇದರ ಸಂದೇಶ ಏನು?
ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಅಂದುಬಿಟ್ರು!
TV9 Web
| Updated By: ಸಾಧು ಶ್ರೀನಾಥ್​|

Updated on:Jun 25, 2021 | 3:54 PM

Share

ಬೆಂಗಳೂರು: ಕೊರೊನಾ ಮಹಾಮಾರಿ ಕಾಲಿಟ್ಟಿದ್ದೇ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ರಂಗದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಕ್ಕಳಿಗೆ ಶಿಕ್ಷಣ/ವ್ಯಾಸಂಗ ದುರ್ಲಭವಾಗಿದೆ. ಅಷ್ಟೋ ಇಷ್ಟೋ ಆನ್​ಲೈನ್​ ಮೂಲಕ ವಿದ್ಯೆ ಕಲಿಯುತ್ತಿದ್ದಾರೆ ಮಕ್ಕಳು. ಆದರೆ ಅದಕ್ಕೆ ದುಬಾರಿ ಶುಲ್ಕ ಕೀಳುತ್ತಿವೆ ಖಾಸಗಿ ಶಾಲೆಗಳು ಎಂಬುದು ಪೋಷಕರ ಅಳಲು, ಅಹವಾಲು. ಆದರೆ ಈ ಅಹವಾಲನ್ನು ಕೇಳಿ, ಸಂತೈಸಬೇಕಿದ್ದ ಶಿಕ್ಷಣ ಮಂತ್ರಿ ಸುರೇಶ್​​ ಕುಮಾರ್​ ಅವರು ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡುವ ಹುಮ್ಮಸ್ಸಿನಲ್ಲಿ ಖಾಸಗಿ ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಎಂದು ಷರಾ ಬರೆದಿದ್ದಾರೆ.

ಇತ್ತೀಚೆಗೆ ಬೆಂಗಳೂರು ಸೇರದಂತೆ ಅನೇಕ ಕಡೆ ಆನ್​ಲೈನ್ ಶಿಕ್ಷಣ ನೀಡುತ್ತಿದ್ದೇವೆ ಎಂದು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿಯಾಗಿ ಶುಲ್ಕ ಪಡೆಯುತ್ತಿವೆ ಎಂದು ಪೋಷಕರು ಶಾಲೆಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆಯಂತೂ ರಾಜಧಾನಿಯ ಲಗ್ಗೆರೆಯಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಯ ಎದುರು ಪಾಲಕರು ಭಾರೀ ಪ್ರತಿಭಟನೆ ನಡೆಸುತ್ತಾ… ಶಿಕ್ಷಣ ಸಚಿವರನ್ನೂ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.

ಪೋಷಕರ ರೋಷಾಗ್ನಿ: ನೀವೇನು ಗೆಣಸು ತೆರೆಯೋಕೆ ಇದ್ದೀರಾ..? ಶಿಕ್ಷಣ ಸಚಿವ ಸುರೇಶ್​​ ಕುಮಾರ್​ಗೆ ಪೋಷಕರ ನೇರ ಪ್ರಶ್ನೆ

ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಅಂದುಬಿಟ್ರು:  ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಇಂದು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಆದರೆ ಆ ಮಾತುಗಳು ಖಾಸಗಿ ಶಾಲೆಗಳ ಪರ ಇದ್ದು, ಪೋಷಕರನ್ನೇ ತರಾಟೆಗೆ ತೆಗೆದುಕೊಂಡಂತಿದೆ. ಪೋಷಕರು ಪ್ರತಿಭಟನೆಯಲ್ಲಿ ತೊಡಗಿದರೆ ಅದರಿಂದ ವಿದ್ಯಾರ್ಥಿಗಳಿಗೇ ತೊಂದರೆಯಾಗುತ್ತದೆ. ಕೊನೆಗೆ ಇದರಿಂದ ಸಂಕಷ್ಟಕ್ಕೆ ಈಡಾಗೋದು ಮಕ್ಕಳು. ಹಾಗಾಗಿ ಖಾಸಗಿ ಶಾಲೆಗಳ ಮುಂದೆ ಪದೇಪದೆ ಪ್ರತಿಭಟನೆ ಸರಿಯಲ್ಲ ಎಂದು ಪಾಲಕರಿಗೆ ಬುದ್ಧಿಮಾತು ಹೇಳಿದ್ದಾರೆ. ಇನ್ನು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ಬಗ್ಗೆಯಂತೂ ಸಚಿವರು ತುಟಿಬಿಚ್ಚಿಲ್ಲ. ಇದುವರೆಗೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ಪಡೆಯುವುದು ತರವಲ್ಲ ಅನ್ನುತ್ತಿದ್ದ ಸುರೇಶ್ ಕುಮಾರ್ ಅವರು ಈಗ ಶುಲ್ಕ ವಿಚಾರದಲ್ಲಿ ಉಲ್ಟಾ ಹೊಡದ್ರಾ ಅನ್ನಿಸುತ್ತಿದೆ.

ಖಾಸಗಿ ಶಾಲೆಗಳ ಫೀಸ್ ಹೈಕ್ ಬಗ್ಗೆ ತುಟಿ ಬಿಚ್ಚದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ಬಗ್ಗೆ ಯಾಕೆ ಮಾತನಾಡಿದರು? ಇದರಿಂದ ಅವರು ನೀಡಿರುವ ಸಂದೇಶ ಏನು ಎಂಬುದು ತಿಳಿಯದಾಗಿದೆ.

(Education minister s sureshkumar advises parents not to indulge in protest against private schools)

Published On - 3:51 pm, Fri, 25 June 21

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು