ಯಾದಗಿರಿ: ಸ್ವಾಮೀಜಿ ವೇಷ ತೊಟ್ಟು ಹಿರಿಯರ ಕಾಡಿಕೆ ಪರಿಹರಿಸುವುದಾಗಿ ವಂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2024 | 10:42 PM

ಸುರಪುರ ತಾಲೂಕಿನ ಮಂಜಲಾಪುರದಲ್ಲಿ ಹಿರಿಯರ ಕಾಡಿಕೆ ಪರಿಹರಿಸುವ ನೆಪದಲ್ಲಿ ಐದು ಜನರ ಗ್ಯಾಂಗ್ ಸ್ವಾಮೀಜಿ ವೇಷ ಧರಿಸಿ ಅಮಾಯಕರನ್ನು ವಂಚಿಸಿರುವಂತಹ ಘಟನೆ ನಡೆದಿದೆ. ಪ್ರತಿಯೊಬ್ಬರಿಂದ 10 ರಿಂದ 20 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಗ್ರಾಮಸ್ಥರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾದಗಿರಿ: ಸ್ವಾಮೀಜಿ ವೇಷ ತೊಟ್ಟು ಹಿರಿಯರ ಕಾಡಿಕೆ ಪರಿಹರಿಸುವುದಾಗಿ ವಂಚನೆ
ಯಾದಗಿರಿ: ಸ್ವಾಮೀಜಿ ವೇಷ ತೊಟ್ಟು ಹಿರಿಯರ ಕಾಡಿಕೆ ಪರಿಹರಿಸುವುದಾಗಿ ವಂಚನೆ
Follow us on

ಯಾದಗಿರಿ, ಅಕ್ಟೋಬರ್​​ 28: ಹಿರಿಯರ ಕಾಡಿಕೆ ಪರಿಹರಿಸುವ ಹೆಸರಿನಲ್ಲಿ ಸ್ವಾಮೀಜಿ (Fake Swamiji) ವೇಷ ತೊಟ್ಟು  ಐದು ಜನರ ಗ್ಯಾಂಗ್​ನಿಂದ ಅಮಾಯಕ ಜನರಿಂದ 10 ರಿಂದ 20 ಸಾವಿರ ರೂ. ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಂಜಲಾಪುರ ಗ್ರಾಮದಲ್ಲಿ ನಡೆದಿದೆ. ಸದ್ಯ ಸಾವಿರಾರು ರೂ. ಹಣ ವಂಚಿಸಿದವರನ್ನು ಗ್ರಾಮಸ್ಥರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಕೊಡೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಐದು ಜನರ ಗ್ಯಾಂಗ್ ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ. ನಿಮಗೆ ಹಿರಿಯರ ಕಾಡಿಕೆ ಇದೆ ಅದನ್ನು ನಾವು ಬಗೆಹರಿಸುತ್ತೇವೆ ಎಂದಿದ್ದಾರೆ. ಗ್ರಾಮದ ಮಹಿಳೆಯರಿಗೆ ಲಿಂಬೆಹಣ್ಣು, ದೇವರ ಆಧಾರ ಕೊಟ್ಟು ವಂಚನೆ ಮಾಡಿದ್ದಾರೆ. ಬಹಳ ವರ್ಷದಿಂದ ಕಾಡುತ್ತಿರುವ ಸಮಸ್ಯೆಯನ್ನು ಕ್ಷಣದಲ್ಲೇ ಮಾಟ ಮಂತ್ರ ಮಾಡಿ ಬಗೆಹರಿಸುತ್ತೇವೆ ಎಂದು ಹಣ ಪೀಕಿದ್ದಾರೆ. ಒಬ್ಬೊಬ್ಬ ಮಹಿಳೆಯರ ಬಳಿ 10 ರಿಂದ 20 ಸಾವಿರ ರೂ. ದಂತೆ ಸಾವಿರಾರು ರೂ. ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ದಂಪತಿ ಹತ್ಯೆ ಕೇಸ್ ಬೇಧಿಸಿದ ಪೊಲೀಸರು: ಅಳಿಯ ಮನೆ ತೊಳಿಯ ಲಾಕ್

ಅವರು ಕೇಳಿದಷ್ಟು ಹಣ ಕೊಟ್ಟು ಮಹಿಳೆಯರು ಕಂಗಾಲಾಗಿದ್ದಾರೆ. ನಂತರ ಸಂಶಯ ಬಂದು ಮೂರು ಜನರನ್ನು ಯುವಕರು ಹಿಡಿದಿದ್ದಾರೆ. ಇಬ್ಬರು ಎಸ್ಕೇಪ್ ಆಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಕೊಡೇಕಲ್ ಪೋಲಿಸರು ಮೂರು ಜನರು ಮತ್ತು ಅವರ ಬಳಿಯಿದ್ದ 23 ಸಾವಿರ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಹಣ ವಾಪಸ್ ಕೊಡುವಂತೆ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪೋಲಿಸರು ಹಣ ವಾಪಸ್ ಕೊಡಿಸಿದ್ದಾರೆ.

ಮಾದಕವಸ್ತು ಮಾರಾಟ: ವಿದೇಶಿ ಪ್ರಜೆ ಸೇರಿ ಆರು ಜನರ ಬಂಧನ

ಮಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದವರ ವಿದೇಶಿ ಪ್ರಜೆ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರ ಹೊರವಲಯದಲ್ಲಿರುವ ಪಣಂಬೂರು ಬೀಚ್ ರಸ್ತೆ ಬಳಿ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.

ಇದನ್ನೂ ಓದಿ: ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು: ವಾರ್ನ್​ ಮಾಡಿದ್ದಕ್ಕೆ ಹತ್ಯೆಗೈದ!

ಚಂದನ್, ಶರತ್, ಮಧುಸೂಧನ, ಧನುಷ್, ಮುಕೇಶ್, ನೈಜೀರಿಯಾ ಪ್ರಜೆ ಮೈಕಲ್ ಬಾಲಾಜಿ ಬಂಧಿತ ಆರೋಪಿಗಳು. ಸ್ಕೂಟರ್ ನಿಲ್ಲಿಸಿಕೊಂಡು ಮಾದಕವಸ್ತು ಮಾರಾಟಕ್ಕೆ ಯತ್ನಿಸಿದ್ದಾರೆ. 11 ಗ್ರಾಂ ಕೊಕೇನ್, 30 ಗ್ರಾಂ ಎಂಡಿಎಂಎ ಸೇರಿದಂತೆ ಒಟ್ಟು 91 ಸಾವಿರ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ. ದ್ವಿಚಕ್ರ ವಾಹನ, 9 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.