ಕೊರೊನಾ ಮೂರನೇ ಅಲೆ ಆತಂಕ; ಶಾಲೆ ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ

| Updated By: sandhya thejappa

Updated on: Aug 18, 2021 | 9:32 AM

ಮೂರನೇ ಅಲೆ ಕಡಿಮೆಯಾದ ನಂತರ ಶಾಲೆ ತೆರೆಯುವುದು ಸೂಕ್ತ. ಅನಾಹುತಕ್ಕೆ ಅವಕಾಶ ಕೊಡದೇ ಇರುವುದು ಒಳ್ಳೆಯದು. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆಯಿದೆ. ಹಲವು ಅಧ್ಯಯನಗಳಲ್ಲಿ ಈ ಕುರಿತು ಪ್ರಸ್ತಾಪವಾಗಿದೆ.

ಕೊರೊನಾ ಮೂರನೇ ಅಲೆ ಆತಂಕ; ಶಾಲೆ ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23ರಿಂದ ಒಂಬತ್ತರಿಂದ ಹನ್ನೆರಡನೇ ತರಗತಿಗಳು ಆರಂಭವಾಗುತ್ತಿವೆ. ಕೊರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ಮೂರನೇ ಅಲೆ ಭೀತಿ ನಡುವೆ ಶಾಲೆ ಪುನಾರಂಭವಾಗುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ರಾಜ್ಯದಲ್ಲಿ ಈ ತಿಂಗಳು ಶಾಲೆ ತೆರೆಯದಂತೆ ಫನಾ (Fanaa) ಸಲಹೆ ನೀಡಿದೆ.

ಮೂರನೇ ಅಲೆ ಕಡಿಮೆಯಾದ ನಂತರ ಶಾಲೆ ತೆರೆಯುವುದು ಸೂಕ್ತ. ಅನಾಹುತಕ್ಕೆ ಅವಕಾಶ ಕೊಡದೇ ಇರುವುದು ಒಳ್ಳೆಯದು. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆಯಿದೆ. ಹಲವು ಅಧ್ಯಯನಗಳಲ್ಲಿ ಈ ಕುರಿತು ಪ್ರಸ್ತಾಪವಾಗಿದೆ. ಸದ್ಯ ರಾಜ್ಯದಲ್ಲಿ ಶೇ.14ರಷ್ಟು ಮಕ್ಕಳಿಗೆ ಕೊರೊನಾ ಬಂದಿದೆ. ಬೆಂಗಳೂರಲ್ಲಿ 10 ದಿನಗಳಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಲಸಿಕೆ ಪಡೆದವರಲ್ಲಿ ಬ್ರೇಕ್ ಥ್ರೂ ಕೇಸ್ ಹೆಚ್ಚಾಗುತ್ತಿದೆ. ಈ ವೇಳೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸೂಕ್ತವಲ್ಲ ಅಂತ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ ವರದಿಯಲ್ಲಿ ಫನಾ ಸಲಹೆ ನೀಡಿದೆ.

ಲಸಿಕೆ ಪಡೆದಿದ್ದರಿಂದ ಕಾಲೇಜು ತೆರೆಯಿರಿ. ಆದರೆ ಸದ್ಯಕ್ಕೆ ಶಾಲೆಗಳನ್ನು ಮಾತ್ರ ಆರಂಭಿಸುವುದು ಬೇಡ ಅಂತ ಫನಾ ಅಧ್ಯಕ್ಷ ಡಾ.ಪ್ರಸನ್ನ(Dr Prasanna) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಕ್ಕಳಲ್ಲಿ ಕೊರೊನಾ ಕೇಸ್ ಕಡಿಮೆಯಾಗಲು ಏನು ಮಾಡಬೇಕು?
* ಮಕ್ಕಳಿಗೆ ಆದಷ್ಟು ಬೇಗನೆ ಕೊರೊನಾ ಲಸಿಕೆಗೆ ಐಸಿಎಮ್ಆರ್ (ICMR) ಒಪ್ಪಿಗೆ ಕೊಡಬೇಕು.
* ಮಕ್ಕಳಿಗೂ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ತಿಳಿ ಹೇಳಬೇಕು.
* ಮಕ್ಕಳ ಜೊತೆ ಸಂಪರ್ಕಿತರು ಇನ್ನಷ್ಟು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು.
* ಹೊರಗಡೆಯಿಂದ ಬಂದ ಪೋಷಕರು ಮಕ್ಕಳ ಜೊತೆ ಬೆರೆಯದೆ ಕೊವಿಡ್ ಗೈಡ್ ಲೈನ್ ಪಾಲಿಸಬೇಕು.

ಇದನ್ನೂ ಓದಿ

ಸೆಪ್ಟೆಂಬರ್ 27ಕ್ಕೆ ದೆಹಲಿ ಶಾಲೆಗಳಲ್ಲಿ ಆರಂಭವಾಗಲಿದೆ ದೇಶಭಕ್ತಿ ಪಠ್ಯಕ್ರಮ: ಅರವಿಂದ ಕೇಜ್ರಿವಾಲ್

School Reopening: ಆಗಸ್ಟ್ 23ರಿಂದ ಶಾಲೆ ಶುರು! ಮಾರ್ಗಸೂಚಿ ಏನಿರುತ್ತೆ?

(fanaa has advised state government not to open the school in Karnataka)

Published On - 9:30 am, Wed, 18 August 21