AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಶಸ್ವಿ’ ಆನೆ ಅಸ್ವಸ್ಥ; ವಿಷಾಹಾರ ಸೇವಿಸಿರುವ ಶಂಕೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ‘ಯಶಸ್ವಿ’ ಕಳೆದೊಂದು ತಿಂಗಳಿಂದ ಅಸ್ವಸ್ಥವಾಗಿದ್ದು, ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಯಶಸ್ವಿ ಆನೆಯು ಮಾವುತರಿಬ್ಬರ ಜಗಳದಿಂದ ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಮಾವುತರ ಬೇಜವಾಬ್ದಾರಿ ಬಗ್ಗೆ ಉಲ್ಲೇಖಿಸಲಾಗಿದೆ. ಯಶಸ್ವಿ ಆನೆಗೆ ಸದ್ಯ ಸ್ಥಳೀಯ ವೈದ್ಯರು ಹಾಗೂ ದುಬಾರೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಜರಾಣಿ ವಿಷ ಆಹಾರ ತಿಂದು ಹಲವು ಅಂಗಗಳಿಗೆ ಡ್ಯಾಮೇಜ್ ಆಗಿದೆ ಎಂದು ವೈದ್ಯರು […]

‘ಯಶಸ್ವಿ’ ಆನೆ ಅಸ್ವಸ್ಥ; ವಿಷಾಹಾರ ಸೇವಿಸಿರುವ ಶಂಕೆ
ಸಾಧು ಶ್ರೀನಾಥ್​
|

Updated on: Sep 10, 2019 | 3:13 PM

Share

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ‘ಯಶಸ್ವಿ’ ಕಳೆದೊಂದು ತಿಂಗಳಿಂದ ಅಸ್ವಸ್ಥವಾಗಿದ್ದು, ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಯಶಸ್ವಿ ಆನೆಯು ಮಾವುತರಿಬ್ಬರ ಜಗಳದಿಂದ ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಮಾವುತರ ಬೇಜವಾಬ್ದಾರಿ ಬಗ್ಗೆ ಉಲ್ಲೇಖಿಸಲಾಗಿದೆ. ಯಶಸ್ವಿ ಆನೆಗೆ ಸದ್ಯ ಸ್ಥಳೀಯ ವೈದ್ಯರು ಹಾಗೂ ದುಬಾರೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗಜರಾಣಿ ವಿಷ ಆಹಾರ ತಿಂದು ಹಲವು ಅಂಗಗಳಿಗೆ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ‘ಯಶಸ್ವಿ’ ಆನೆಯನ್ನು ಮಾಜಿ ಸಚಿವ ಆನಂದ್ ಸಿಂಗ್ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದರು.