
ಗದಗ, (ಜುಲೈ 16): ಪ್ರೀತಿಗೆ (Love) ಕಣ್ಣಿಲ್ಲ. ಪ್ರೀತಿ ಮಾಯೆ, ಪ್ರೀತಿಗೆ ಜಾತಿ ಇಲ್ಲಾ ಅಂತಾರೆ. ಆದ್ರೆ, ಇಲ್ಲೊಂದು ಜೋಡಿ ಜಾತಿ, ಮತ, ಪಂತ ಬಿಟ್ಟು ಪ್ರೀತಿ ಮಾಡಿ ರಿಜಿಸ್ಟರ್ ಮದುವೆ (register marriage) ಸಹ ಆಗಿದ್ದಾರೆ. ಆದ್ರೆ, ಮದುವೆ ಬಳಿಕ ಮತಾಂತರ ಆಗಬೇಕೆಂದು ಯುವತಿ ಬೇಡಿಕೆ ಇಟ್ಟ ವಿಚಿತ್ರ ಪ್ರಕರಣ ಗದಗ (Gadag) ನಗರದಲ್ಲಿ ನಡೆದಿದೆ. ಹೌದು.. ಗದಗ-ಬೆಟಗೇರಿಯ ಸೆಟಲ್ಮೆಂಟ್ ಏರಿಯಾದ ವಿಶಾಲಕುಮಾರ್ ವಿಚಿತ್ರ ಲವ್ ಜಿಹಾದ್ (Love Jihad) ಆರೋಪ ಮಾಡಿದ್ದಾನೆ. ನಗರದ ಕುರಟ್ಟಿಪೇಟೆಯ ತಹಸೀನ್ ಹೊಸಮನಿ ಕುಟುಂಬ ವಿರುದ್ಧ ವಿಶಾಲ್ ತನನ್ನು ಬಲವಂತವಾಗಿ ಮತಾಂತರ ಮಾಡಿರುವ ಆರೋಪ ಮಾಡಿದ್ದಾನೆ. ಅಲ್ಲದೇ ಮುಸ್ಲಿಂ ಸಂಪ್ರದಾಯ ಫಾಲೋ ಮಾಡದಿದ್ದಕ್ಕೆ ವಿಚ್ಛೇದನ ನೀಡಲು ತಹಸೀನ್ ಮುಂದಾಗಿದ್ದಾಳೆ ಎಂದು ದೂರಿದ್ದಾರೆ.
ವಿಶಾಲ್, ತಹಸೀನ್ ಕಳೆದು ಮೂರು ವರ್ಷದಿಂದ ಪರಸ್ಪರ ಪ್ರೀತಿಸ್ತಿದ್ರು. ಪ್ರೀತಿ ಪ್ರೇಮಮದ ವಿಷಯವನ್ನ ಮನೆಯವರಿಂದ ಮುಚ್ಚಿಟ್ಟಿದ್ದ ಜೋಡಿ, 2024ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇಬ್ಬರ ಮದ್ವೆ ವಿಚಾರ ತಹಸೀನ್ ಕುಟುಂಬಕ್ಕೆ ಗೊತ್ತಾಗಿದೆ. ಬಳಿಕ ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ ಗೆ ತಹಸೀನ್ ಕುಟುಂಬ ದುಂಬಾಲು ಬಿದ್ದಿದಿದೆ. ತಹಸೀನ್, ಆಕೆಯ ತಾಯಿ ಬೇಗಂ ಬಾನು, ತಹಸೀನ್ ಸೋದರ ಮಾವ ಇಬ್ರಾಹಿಂ ಖಾನ್ ದಾವಲ್ ಸಾಬ್ ಮುಸ್ಲಿಂ ನಿಖಾಗೆ ಒತ್ತಾಯ ಮಾಡಿದ್ರು. ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್, 2025ರ ಏಪ್ರಿಲ್ 25ರಂದು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಂಡಿದ್ದ. ನಗರದ ಮುಳಗುಂದ ನಾಕಾ ಬಳಿ ಇರುವ ಉಮರಬೀನ್ ಕತ್ತಾಬ್ ಮಸೀದಿಯಲ್ಲಿ ನಿಖಾ ನಡೆದಿತ್ತು. ಆದ್ರೆ, ವಿಶಾಲ್ ಗೆ ಅರಿವಿಲ್ಲದೇ ನಿಖಾ ನಾಮಾದಲ್ಲಿ ಆತನ ಹೆಸರನ್ನ ವಿರಾಜ್ ಸಾಬ್ ಅಂತಾ ದಾಖಲಿಸಲಾಗಿದ್ಯಂತೆ. ನಿಖಾ ದಫ್ತರ್ ನಲ್ಲಿ ಅಂದ್ರೆ ಮದುವೆಯ ರಿಜಿಸ್ಟರ್ ನಲ್ಲಿ ಬದಲಾದ ಹೆಸರನ್ನ ಉರ್ದುವಿನಲ್ಲಿ ಬರೆಯಲಾಗಿದೆ.
ಮದುವೆಗೂ ಮುಂಚೆಯಿಂದಲೂ ಐದು ಬಾರಿ ನಮಾಜ್ ಮಾಡ್ಬೇಕು ಜೊತೆಗೆ ಸಮಾಜದ ಜಮಾತ್ ಗೆ ಹೋಗಲು ತಹಸೀನ್ ಕುಟುಂಬ ಪೀಡಿಸ್ತಿತ್ತಂತೆ. ಈ ಮಧ್ಯೆ ಮದುವೆಯ ವೀಡಿಯೋ ಸಮಾಜಿಕ ತಾಲತಾಣದಲ್ಲಿ ವೈರಲ್ ಆಗಿ ವಿಶಾಲ್ ಮನೆಯವರಿಗೆ ಮದುವೆ ಬಗ್ಗೆ ಮಾಹಿತಿ ಸಿಕ್ಕಿದೆ. ವಿಶಾಲ್ ನನ್ನ ಕರೆದು ವಿಚಾರಿಸಿದಾಗ ಮದ್ವೆಯಾಗಿರೋ ವಿಷಯ ಗೊತ್ತಾಗಿದೆ. ವಿಶಾಲ್ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದು, ಅದರಂತೆ ತಹಸೀನ್ ಕುಟುಂಬವರಿಗೆ ತಿಳಿಸಿ ಜೂನ್ 05ರಂದು ಮದ್ವೆ ನಿಗದಿ ಮಾಡಿದ್ದರು. ಆದ್ರೆ, ಆರಂಭದಲ್ಲಿ ಒಪ್ಪಿಗೆ ಸೂಚಿಸಿದ್ದ ತಹಸೀನ್ ಕುಟುಂಬ ಹಿಂದೂ ಸಂಪ್ರದಾಯದ ಮದುವೆಗೆ ನಂತರ ಒಪ್ಪಲಿಲ್ಲವಂತೆ. ಅಲ್ಲದೇ ವಿಶಾಲ್ ಗೆ ಮುಸ್ಲಿಂ ಧರ್ಮವನ್ನೇ ಫಾಲೋ ಮಾಡ್ಕೊಂಡು ಇರುವಂತೆ ಒತ್ತಡ ಹೇರಲಾಗ್ತಿದ್ಯಂತೆ. ಮುಸ್ಲಿಂ ಮತಾಂತರಕ್ಕೆ ಒಪ್ಪಿದಿದ್ದಕ್ಕೆ ತಹಸೀನ್ ದೂರವಾಗುವಂತೆ ಕುಟುಂಬ ಮಾಡಿದೆ ಎಂದು ವಿಶಾಲ್ ಆರೋಪಿಸಿದ್ದಾನೆ.
ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಬಲವಂತದ ಮತಾಂತರ ಮಾಡಿ, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ವಿಶಾಲ್ ಮನವಿ ಮಾಡಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಎಂಟ್ರಿಯಾಗಿದ್ದು, ಪ್ರೇಮದ ಹೆಸರಿನಲ್ಲಿ ಯುವಕನಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿವೆ. ಇನ್ನು ಬಲವಂತದ ಮತಾಂತರ ನಡೆದಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದ್ದು, ಮುಂದೆ ಈ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎಂದು ಕಾದು ನೋಡಬೇಕಿದೆ.
Published On - 8:12 pm, Wed, 16 July 25