AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಲ್ ನೀಡದೆ ಗದಗ ಜಿಲ್ಲಾ ಪಂಚಾಯತಿ ಕಿರಿಕ್! ಸಿಇಓ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಗುತ್ತಿಗೆದಾರರು

ಜಿಲ್ಲಾ ಪಂಚಾಯತಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಕಾಮಗಾರಿ ಮಾಡಿ ಮೂರು ವರ್ಷಗಳು ಕಳೆದರೂ ಬಿಲ್ ಪಾವತಿ ಮಾಡಿಲ್ಲ ಅಂತ ರೊಚ್ಚಿಗೆದ್ದ ಗುತ್ತಿಗೆದಾರರು ನಿನ್ನೆ ಸಿಇಓ ಚೇಂಬರ್​ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರು.

ಬಿಲ್ ನೀಡದೆ ಗದಗ ಜಿಲ್ಲಾ ಪಂಚಾಯತಿ ಕಿರಿಕ್! ಸಿಇಓ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಗುತ್ತಿಗೆದಾರರು
ಗುತ್ತಿಗೆದಾರರು ಸಿಇಓ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು
TV9 Web
| Edited By: |

Updated on: Jun 21, 2022 | 11:34 AM

Share

ಗದಗ: ಕಾಮಗಾರಿ ಬಿಲ್ (Bill) ಪಾವತಿಯಾಗಿಲ್ಲ ಎಂದು ಬೆಳಗಾವಿ ಜಿಲ್ಲೆಯಲ್ಲಿ ಗುತ್ತಿಗೆದಾರ (Contractor) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇನ್ನೂ ಮಾಸಿಲ್ಲ. ಈ ನಡುವೆ ಅಭಿವೃದ್ಧಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್ ನೀಡದೆ ಜಿಲ್ಲಾ ಪಂಚಾಯತಿ ಸತಾಯಿಸುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು, ನಿನ್ನೆ (ಜೂನ್ 20) ಧರಣಿ ಮಾಡಿದ್ದಾರೆ. ವಿಷದ ಬಾಟಲಿ ಸಮೇತ ಬಂದ ಗುತ್ತಿಗೆದಾರರು ಜಿಲ್ಲಾ ಪಂಚಾಯತಿ ಸಿಇಓ ಕಚೇರಿಗೆ ನುಗ್ಗಿದ್ದರು. ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಹರಸಾಹಸಪಟ್ಟರು. ಈ ವೇಳೆ ಪೊಲೀಸರು ಹಾಗೂ ಗುತ್ತಿಗೆದಾರರ ನಡುವೆ ನೂಕಾಟ, ತಳ್ಳಾಟ ಉಂಟಾಗಿ ಹೈಡ್ರಾಮಾ ನಡೆಯಿತು.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಕಾಮಗಾರಿ ಮಾಡಿ ಮೂರು ವರ್ಷಗಳು ಕಳೆದರೂ ಬಿಲ್ ಪಾವತಿ ಮಾಡಿಲ್ಲ ಅಂತ ರೊಚ್ಚಿಗೆದ್ದ ಗುತ್ತಿಗೆದಾರರು ನಿನ್ನೆ ಸಿಇಓ ಚೇಂಬರ್​ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರು. ಚಿನ್ನ ಅಡವಿಟ್ಟು, ಸಾಲ ಮಾಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರು ಅಕ್ಷರಶಃ ತಾಳ್ಮೆ ಕಳೆದುಕೊಂಡಿದ್ದರು. ಸಿಇಓ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ಮಾಡಿ ಸಿಇಓಗೆ ಬಿಸಿ ಮುಟ್ಟಿಸಿದ್ರು.

ಜಿಲ್ಲೆಯ ಕಣಗಿನಾಳ, ಹುಯಿಲಗೋಳ, ನೀಲಗುಂದ ಹಾಗೂ ಹಿರೇವಡ್ಡಟ್ಟಿ ಸೇರಿದಂತೆ ಹಲವು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸೇರಿ ಗುತ್ತಿಗೆದಾರರು ಆಗಮಿಸಿದ್ದರು. ಮೂರು ವರ್ಷಗಳಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಕಾಮಗಾರಿಗಳಿಗೆ ಈವರೆಗೂ ಬಿಲ್ ನೀಡಿಲ್ಲ. ಸಾಮಾಗ್ರಿಗಳ ಖರೀದಿ, ರೈತರ ಕೃಷಿ ಹೊಂಡ, ಇಂಗು ಗುಂಡಿ, ಸೇರಿದಂತೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಬಿಲ್ ನೀಡಬೇಕಿತ್ತು. ಆದರೆ ಪಿಡಿಓಗಳನ್ನು ದಿಢೀರ್ ಆಗಿ ಸಿಇಓ ವರ್ಗಾವಣೆ ಮಾಡಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದರು.

ಇದನ್ನೂ ಓದಿ
Image
International Yoga Day: ಬೆಳಗಿನ ಉಪಹಾರಕ್ಕೆ ನಮ್ಮ ಅಹ್ವಾನವನ್ನು ಪ್ರಧಾನಿಯವರು ಒಪ್ಪಿಕೊಂಡಿದ್ದು ಸಂತೋಷವೆನಿಸುತ್ತಿದೆ: ಪ್ರಮೋದಾ ದೇವಿ
Image
ಕೋಲಾರ ಶತಶೃಂಗ ಪರ್ವತದ ಮೇಲೆ 15,000 ಯೋಗ ಪಟುಗಳಿಂದ ಯೋಗಾಭ್ಯಾಸ
Image
Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
Image
International Yoga Day 2022: ದೇಶದ ವಿವಿಧ ಪ್ರದೇಶಗಳಲ್ಲಿ ಯೋಗ ದಿನಾಚರಣೆಯ ಸಂಗ್ರಹ ಚಿತ್ರಗಳು ಇಲ್ಲಿದೆ

ಇದನ್ನೂ ಓದಿ: International Yoga Day: ಬೆಳಗಿನ ಉಪಹಾರಕ್ಕೆ ನಮ್ಮ ಅಹ್ವಾನವನ್ನು ಪ್ರಧಾನಿಯವರು ಒಪ್ಪಿಕೊಂಡಿದ್ದು ಸಂತೋಷವೆನಿಸುತ್ತಿದೆ: ಪ್ರಮೋದಾ ದೇವಿ

ನಮಗೆ ಬಿಲ್ ಬರದಿದ್ದರೆ ಗುತ್ತಿಗೆದಾರ ಸಂತೋಷ್ನ ರೀತಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಿಇಓ ಮೇಡಂ ಡಾ. ಸುಶೀಲಾ ಅದರೆ ಹೊಣೆ ಅಂತಾ ಗುತ್ತಿಗೆದಾರ ಗುರುರಾಜ್ ಹಾಗೂ ಸದಸ್ಯ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಬಿಲ್ ಕೇಳಲು ಬಂದರೆ ಸಿಇಓ ಮೇಡಂ ಕಚೇರಿ ಬಾಗಿಲು ಹಾಕಿಕೊಂಡು ಕುಳಿತ್ತಿದ್ದರು. ಎರಡ್ಮೂರು ಗಂಟೆ ಕಾಯಿಸಿದ್ದಾರೆ. ಒಳಗಡೆ ಕರೆದು ಮಾತನಾಡಿದರೆ ಸಾಕಿತ್ತು. ಆದರೆ ಸಿಇಓ ಅವರ ನಿರ್ಲಕ್ಷ್ಯಕ್ಕೆ ದೊಡ್ಡ ಗಲಾಟೆ ನಡೆಯಿತು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ