ಗದಗ: ನಡುರಸ್ತೆಯಲ್ಲೇ ಕೆಟ್ಟುನಿಂತ ಕೆಎಸ್​ಆರ್​ಟಿಸಿ ಬಸ್​; ಪ್ರಯಾಣಿಕರು, ಪೊಲೀಸರೇ ತಳ್ಳಿ ಸ್ಟಾರ್ಟ್​

ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಿಂದ ಮುಳಗುಂದ ಪಟ್ಟಣಕ್ಕೆ ಬಸ್ ಪ್ರಯಾಣಿಕರನ್ನು ಕರೆದ್ಯೊಯುತ್ತಿತ್ತು. ಪುಟ್ಟರಾಜ್ ಗವಾಯಿಗಳ ಸರ್ಕಲ್​ನಲ್ಲಿ ಬಸ್ ಏಕಾಏಕಿ ಬಂದ್ ಆಗಿದೆ. ಬಳಿಕ ಚಾಲಕ ಬಸ್ ಸ್ಟಾರ್ಟ್ ಮಾಡಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಪೊಲೀಸ್ ಸಿಬ್ಬಂದಿ, ಪ್ರಯಾಣಿಕರು ಸೇರಿ ಬಸ್ ತಳ್ಳಿ ಸ್ಟಾರ್ಟ್​ ಮಾಡಿದ ಘಟನೆ ನಡೆದಿದೆ.

ಗದಗ, ಜ.06: ಜಿಲ್ಲೆಯ ಸಾರಿಗೆ ಇಲಾಖೆಯ ಮತ್ತೊಂದು ಅಸಲಿ ಮುಖವಾಡ ಕಳಿಚಿದೆ. ಕಳೆದ ತಿಂಗಳ ಗದಗ (Gadag) ಜಿಲ್ಲೆಯಲ್ಲಿನ ಬ್ರೇಕ್, ಕ್ಲಚ್ ಇಲ್ಲದ ಅಪಾಯಕಾರಿ ಡಕೋಟ್ ಬಸ್(Bus)​ಗಳ ಕುರಿತು ಟಿವಿ9 ವಿಸ್ತೃತ ವರದಿ ಮಾಡಿತ್ತು. ಈಗ ಬಸ್​ಗಳ ಕಂಡಿಷನ್ ಮತ್ತಷ್ಟು ಹದಗೆಟ್ಟು ಹೋಗಿವೆ. ಪ್ರಯಾಣಿಕನ್ನು ಹೊತ್ತೊಯುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗಳು ನಡುರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿವೆ. ಅದರಂತೆ ಇಂದು ಗದಗ ನಗರದ ನಡುರಸ್ತೆಯಲ್ಲೇ ಸರ್ಕಾರಿ ಬಸ್ ಕೆಟ್ಟು ನಿಂತಿದೆ. ಪ್ರಯಾಣಿಕರು, ಪೊಲೀಸರು, ಸಾರ್ವಜನಿಕರೇ ಬಸ್ ತಳ್ಳಿದ್ದಾರೆ.

ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಿಂದ ಮುಳಗುಂದ ಪಟ್ಟಣಕ್ಕೆ ಬಸ್ ಪ್ರಯಾಣಿಕರನ್ನು ಕರೆದ್ಯೊಯುತ್ತಿತ್ತು. ಪುಟ್ಟರಾಜ್ ಗವಾಯಿಗಳ ಸರ್ಕಲ್​ನಲ್ಲಿ ಬಸ್ ಏಕಾಏಕಿ ಬಂದ್ ಆಗಿದೆ. ಬಳಿಕ ಚಾಲಕ ಬಸ್ ಸ್ಟಾರ್ಟ್ ಮಾಡಲು ಸಾಕಷ್ಟು ಪ್ರಯತ್ನ ಪಟ್ಟು ಸ್ಟಾರ್ಟ್ ಆಗಲೇ ಇಲ್ಲ. ಇದ್ರಿಂದ ಸಿಗ್ನಲ್​ನಲ್ಲಿ ಬಸ್ ಕೆಟ್ಟು ನಿಂತಿದ್ದು, ಟ್ರಾಫಿಕ್ ಸಮಸ್ಯೆಯಾಗಿತ್ತು.

ಇದನ್ನೂ ಓದಿ:ಚಾಲಕ ಸ್ಟೇರಿಂಗ್ ತಿರುಗಿಸುತ್ತಿದ್ದರೂ ಚಕ್ರಗಳು ತಿರುಗಲೇ ಇಲ್ಲ! ಗದಗ ಸಾರಿಗೆ ಇಲಾಖೆ‌ಯಲ್ಲಿ ಮತ್ತೊಂದು ಅಧ್ವಾನ

ಆಗ ಪೊಲೀಸ್ ಸಿಬ್ಬಂದಿ, ಪ್ರಯಾಣಿಕರು ಸೇರಿ ಬಸ್ ತಳ್ಳಿದ್ದಾರೆ. ಡಕೋಟಾ ಬಸ್ ,ತಳ್ಳು ಗೋವಿಂದಾ ತಳ್ಳು ಎಂದು ತಳ್ಳಿದ್ದಾರೆ. ಆಗ ಟ್ರಾಫಿಕ್ ನಲ್ಲಿ ಬೈಕ್ ಸವಾರರು ಡಕೋಟಾ ಬಸ್ ಗಳ ಅಸಲಿಯತ್ತು ಪ್ರಸಾರ ಮಾಡಿ ಎಂದುಕೊಂಡು ತೆರಳಿದ್ದಾರೆ. ಸರ್ಕಾರ ಬಸ್​ಗಳ ರಿಪೇರಿ ಗೆಸಾಕಷ್ಟು ಹಣ ಇದೆ ಎಂದು ಹೇಳುತ್ತಿದೆ. ಆದ್ರೆ, ಗದಗ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ರಿಪೇರಿಗೆ ಹಣವೇ ಇಲ್ಲ. ಏನ್ ಮಾಡೋಣ ಅಂತಿದ್ದಾರೆ. ಹೀಗಾಗಿ ಗಂಡ-ಹೆಂಡಿರ ನಡುವೆ ಕೂಸು ಬಡvಆಯ್ತು ಎಂಬಂತೆ ಪ್ರಯಾಣಿಕರು, ಚಾಲಕರು ಸಫರ್ ಆಗ್ತಾಯಿದ್ದಾರೆ.

ಬಸ್​ಗಲ ಕಂಡಿಷನ್ ಇಲ್ಲದಿದ್ರೂ ಅಧಿಕಾರಿಗಳು ಬಸ್​ಗಳು ರಸ್ತೆ ಇಳಿಸುತ್ತಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏನಾದ್ರೂ ದುರಂತ ಆದ್ರೆ, ಹೊಣೆ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದುರಂತ ನಡೆಯುವ ಮುನ್ನವೇ ಇನ್ನಾದರೂ ಸಾರಿಗೆ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಡಕೋಟಾ ಬಸ್​ಗಳಿಗೆ ಮುಕ್ತಿ ನೀಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Sat, 6 January 24

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us