AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಪೊಲೀಸರಿಂದ ಮೊಬಿಫೈ ತಂತ್ರಜ್ಞಾನ ಜಾರಿ; ಏನಿದರ ವೈಶಿಷ್ಟ್ಯ, ಇಲ್ಲಿದೆ ಮಾಹಿತಿ

ಗದಗವನ್ನು ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಗದಗ ಪೊಲೀಸ್​​ ಇಲಾಖೆ ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ. ಗದಗ ನಗರದ ಯಾವುದೇ ಭಾಗದಲ್ಲಿ ಮೊಬೈಲ್​ ಕಳ್ಳತನವಾದರೂ ಸುಲಭವಾಗಿ ಪತ್ತೆಹಚ್ಚಲು "ಮೊಬಿಫೈ" ತಂತ್ರಜ್ಞಾನವೊಂದನ್ನು ಪ್ರಾರಂಭಿಸಿದೆ.

Gadag: ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಪೊಲೀಸರಿಂದ ಮೊಬಿಫೈ ತಂತ್ರಜ್ಞಾನ ಜಾರಿ; ಏನಿದರ ವೈಶಿಷ್ಟ್ಯ, ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on:Feb 21, 2023 | 1:47 PM

Share

ಗದಗ: ಗದಗ (Gadag) ಅನ್ನು ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಗದಗ ಪೊಲೀಸ್​​ ಇಲಾಖೆ (Gadag Police Department) ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ. ಗದಗ ನಗರದ ಯಾವುದೇ ಭಾಗದಲ್ಲಿ ಮೊಬೈಲ್​ ಕಳ್ಳತನವಾದರೂ ಸುಲಭವಾಗಿ ಪತ್ತೆಹಚ್ಚಲು “ಮೊಬಿಫೈ” (Mobify technology) ತಂತ್ರಜ್ಞಾನವೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಗದಗ ನಗರವನ್ನು ಮೊಬೈಲ್​ ಕಳ್ಳತನ ಮುಕ್ತವನ್ನಾಗಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಈ ಮೊಬಿಫೈ ನಾಲ್ಕು ದಿನಗಳ ಹಿಂದೆ ಪ್ರಾರಂಭಿಸಲಾಗಿದ್ದು, ಶನಿವಾರ (ಫೆ.18) ರವರೆಗೆ ಈಗಾಗಲೇ 200 ಪ್ರಕರಣಗಳು ದಾಖಲಾಗಿವೆ.

ಸದ್ಯ ಪೊಲೀಸ್​ ಇಲಾಖೆ ಈ ಪ್ರಕರಣಗಳನ್ನು ಒಂದೊಂದಾಗಿ ತನಿಖೆ ನಡೆಸುತ್ತಿದೆ. ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಗದಗ ಪೊಲೀಸ್​ ಇಲಾಖೆಗೆ ಸಲ್ಲುತ್ತದೆ. ಇನ್ಮುಂದೆ ಜನರು ಮೊಬೈಲ್​ ಕಳ್ಳತನವಾದ ಬಳಿಕ ಪೊಲೀಸ್​ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಮೊಬೈಲ್​ ಕಳೆದುಕೊಂಡಿರುವ ವ್ಯಕ್ತಿ ತಾನು ಇದ್ದ ಜಾಗದಿಂದಲೇ ವೇಗವಾಗಿ ಮೊಬಿಫೈ ಮೂಲಕ ದೂರು ನೀಡಬಹುದಾಗಿದೆ.

ದೂರುದಾರ, ಮೊಬಿಫೈ ತಂತ್ರಜ್ಞಾನದ ಮೂಲಕ, ಪೊಲೀಸ್​​ ಇಲಾಖೆ ನೀಡಿದ ನಂಬರ್​ಗೆ ಸಂದೇಶ ರವಾನೆ ಮಾಡಬೇಕು. ಇದರಿಂದ ದೂರುದಾರನ ಬೊಬೈಲ್​ನನ್ನು ಬ್ಲಾಕ್​​ ಮಾಡಲಾಗುತ್ತದೆ. ಇದರಿಂದ ಕಳ್ಳನಿಗೆ ಕದ್ದ ಮೊಬೈಲ್​ನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆಗ ಕದ್ದ ಮೊಬೈಲ್​ ಡಮ್ಮಿಯಾಗುತ್ತದೆ. ಇದರಿಂದ ಕಳ್ಳರು ಮೊಬೈಲ್​ ಕಳ್ಳತನಕ್ಕೆ ಕೈ ಹಾಕುವುದಿಲ್ಲ. ಈ ಮೂಲಕ ಮೊಬೈಲ್ ಕಳ್ಳತನ ಮುಕ್ತ ನಗರವಾಗಲಿದೆ. ಈ ಹೊಸ ತಂತ್ರಜ್ಞಾನಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿ ನಿಮಿಷಕ್ಕೊಂದು ಪ್ರಕರಣ ದಾಖಲಾಗುತ್ತಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಈ ಬಗ್ಗೆ ಗದಗ ಎಸ್​ಪಿ ಬಿಎಸ್​ ನೇಮಗೌಡ ಮಾತನಾಡಿ ನಾವು ಮೊದಲು ಪ್ರಾಯೋಗಿಕವಾಗಿ ಜಾರಿಗೆ ಮಾಡಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇದನ್ನು ಉತ್ತಮಗೊಳಿಸಿ ಜಾರಿಮಾಡಲಾಗುತ್ತದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ತಂತ್ರಜ್ಞಾನದಿಂದ ಕದ್ದ ಮೊಬೈಲ್​ ಟ್ರ್ಯಾಕಿಂಗ್​, ಬ್ಲಾಕ್​, ಮೊಬೈಲ್​ ಲೊಕೇಶನ್​ ಪತ್ತೆ ಹಚ್ಚಲು ಸುಲಭವಾಗುತ್ತಿದೆ. ಮತ್ತು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರಯೋಗ ಮಾಡುತ್ತಿರುವುದು ಗದಗ ನಗರ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಏನಿದು ಮೊಬಿಫೈ ತಂತ್ರಜ್ಞಾನ

ಯಾರು ಮೊಬೈಲ್​ನ್ನು ಕಳೆದುಕೊಂಡಿರುತ್ತಾರೋ ಅವರು ಬೇರೊಂದು ಮೊಬೈಲ್​ನಿಂದ ಹಾಯ್​ ಎಂದು 8277969900 ನಂಬರ್​ ಅಥವಾ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಕ್ಯೂ ಆರ್​ ಕೋಡ್​​ ಅನ್ನು ಸ್ಕ್ಯಾನ್​ ಮಾಡಬೇಕು. ಇದರಿಂದ ಇಲಾಖೆಯ Whatsapp ಸಂಖ್ಯಗೆ ಸಂದೇಶ ಹೋಗುತ್ತದೆ.

ಕೂಡಲೇ ಇಲಾಖೆ ನಿಮಗೆ ಲಿಂಕ್​ವೊಂದನ್ನು ಕಳುಹಿಸುತ್ತದೆ. ಆಗ ಲಿಂಕ್​ ಒತ್ತಿ ನೀವು ಕಳೆದುಕೊಂಡ ಮೊಬೈಲ್​​ನ ಮಾಹಿತಿ ದಾಖಲಿಸಬೇಕು. ಇದರ ಮೂಲಕ ಮೊಬೈಲ್​ ಲೊಕೇಶನ್ ಪತ್ತೆಹಚ್ಚಲಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೇ ಮೊಬೈಲ್​ನಲ್ಲಿದ್ದ ನಿಮ್ಮ ಖಾಸಗಿ ಮಾಹಿತಿಗಳನ್ನು ರಕ್ಷಣೆ ಮಾಡಲು ಮೊಬೈಲ್​ನ್ನು ಬ್ಲಾಕ್​​ ಮಾಡಲಾಗುತ್ತದೆ. ಇದೇ ಮಾಹಿತಿಯನ್ನು ಇಲಾಖೆ Central Equipment Identity Register (CEIR) ನೊಂದಿಗೆ ಹಂಚಿಕೊಳ್ಳುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:18 pm, Tue, 21 February 23

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?