ಕೆಂಪಣ್ಣ ನಮ್ಮ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಅಲ್ಲಾ: ಕೆಂಪಣ್ಣ ವಿರುದ್ಧ ಗದಗ ಗುತ್ತಿಗೆದಾರರು ಆಕ್ರೋಶ

ಗುತ್ತಿಗೆದಾರರು ದೂರು ನೀಡಿ ಒಂದೂವರೆ ವರ್ಷವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೆಂಪಣ್ಣ ಪ್ರಸ್ತಾಪಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮತ್ತೆ ಮುಂಚೂಣಿಗೆ ತರಲು ಗುತ್ತಿಗೆದಾರರ ಸಂಘ ಮುಂದಾಗಿದೆ.

ಕೆಂಪಣ್ಣ ನಮ್ಮ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಅಲ್ಲಾ: ಕೆಂಪಣ್ಣ ವಿರುದ್ಧ ಗದಗ ಗುತ್ತಿಗೆದಾರರು ಆಕ್ರೋಶ
Contractors
Edited By:

Updated on: Aug 29, 2022 | 2:33 PM

ಗದಗ: ಕೆಂಪಣ್ಣ ನಮ್ಮ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಅಲ್ಲಾ ಎಂದು ಗದಗನಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಕೆ.ವಿ ಹಂಚಿನಾಳ ಹೇಳಿಕೆ ನೀಡಿದರು. ಗುತ್ತಿಗೆದಾರರ ಸಂಘದ ಸಮಸ್ಯೆ ಯಾವುದೇ ಸಚಿವರ ಮುಂದೆ ತಿಳಿಸಿಲ್ಲಾ. 40 ಪರ್ಸೆಂಟೇಜ್ ನೀಡುತ್ತೇವೆ ಅಂತಾ ಹೇಳ್ತಾರೆ, ಅವರು ಹೇಳೋ ಪ್ರಕಾರ 75 ಪರ್ಸೆಂಟೇಜ್, ಕೆಲಸ ಮಾಡೋದು ಹೇಗೆ ಅಂತ ಪ್ರಶ್ನೆ ಮಾಡಿದರು. ಕೆಂಪಣ್ಣ ಎಂದು ಕೆಲಸ ಮಾಡಿಲ್ಲಾ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್ನುವದು ಈವಾಗ ಬೆಳಕಿಗೆ ಬಂದಿದೆ.

ಕೆಂಪಣ್ಣ ನಮಗೆ ಅಧಿಕೃತ ಅಧ್ಯಕ್ಷರೇ ಅಲ್ಲಾ. ಅವರು ಮೊನ್ನೆ ಆರೋಪ ಮಾಡಿದಾಗ ಗೊತ್ತಾಗಿದೆ. 40 ಪರ್ಸೆಂಟೇಜ್ ಹೇಳಿಕೆ ಶುದ್ಧ ಸುಳ್ಳು, ಇದನ್ನು ನಾವು ಖಂಡಿಸುತ್ತೇವೆ. ಹಿಂದೆ ಎಷ್ಟು ಪರ್ಸೆಂಟೆಜ್ ಇತ್ತು, ಈವಾಗಲೂ ಅಷ್ಟೇ ಇದೆ. ನಾವು ದುಡಿದುಕೊಂಡು ತಿನ್ನುವವರು ನಮಗೆ ಬಹಳ ತ್ರಾಸ ಮಾಡಬೇಡಿ. ಮೊದಲಿನಿಂದಲೂ ಹೀಗೆ ಇದೆ ಈವಾಗ ಹಾಗೆ ಇದೆ. ಗದಗ ಜಿಲ್ಲೆಯಾದ್ಯಂತ ಆದ್ಯತೆ ಮೇರೆಗೆ ಬಿಲ್ ನೀಡ್ತಾಯಿದ್ದಾರೆ ಎಂದು ಮಾಜಿ ಅಧ್ಯಕ್ಷ ಕೆ.ವಿ ಹಂಚಿನಾಳ ಹೇಳಿದರು.

ನನ್ನ ಮರ್ಡರ್ ಮಾಡ್ತಾರಾ ಮಾಡಲಿ: ಕೆಂಪಣ್ಣ
ನನ್ನ ಮರ್ಡರ್ ಮಾಡ್ತಾರಾ ಮಾಡಲಿ 82 ವರ್ಷಾ ಆಗಿದೆ. ನಾನು ಯಾವುದಕ್ಕೂ ಹೆದರಲ್ಲ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಕೆಂಪಣ್ಣ ಅವರಿಗೆ ಬೆದರಿಕೆ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು ಇತಂವರನ್ನು ನಾನು ತುಂಬಾ ನೋಡಿದ್ದೇನೆ. ದೇಶವನ್ನೆ ನುಂಗಿ ನೀರು ಕುಡಿಯುತ್ತಿದ್ದಾರೆ ಅವರನ್ನ ಬಿಟ್ಟು ನಮ್ಮನ್ನ ಟಾರ್ಗೆಟ್ ಮಾಡಿದರೆ ಮಾಡಲಿ ಎಂದರು.

ಘಟನೆ ಹಿನ್ನೆಲೆ:
ಕರ್ನಾಟಕ ಸರ್ಕಾರದ ಆಡಳಿತದ ವಿವಿಧ ಹಂತಗಳಲ್ಲಿ ಬೇರೂರಿರುವ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆಯಲು ಮುಂದಾಗಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಭ್ರಷ್ಟಾಚಾರದ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿರುವ ಮೋದಿ ಅವರ ಮಾತನ್ನೇ ಉಲ್ಲೇಖಿಸಿ‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಭಿನಂದನೆ ಪತ್ರ ಬರೆದಿದ್ದಾರೆ.

ಗುತ್ತಿಗೆದಾರರು ದೂರು ನೀಡಿ ಒಂದೂವರೆ ವರ್ಷವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೆಂಪಣ್ಣ ಪ್ರಸ್ತಾಪಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮತ್ತೆ ಮುಂಚೂಣಿಗೆ ತರಲು ಗುತ್ತಿಗೆದಾರರ ಸಂಘ ಮುಂದಾಗಿದೆ.

Published On - 2:30 pm, Mon, 29 August 22

Loading...
Unable to load recommendations.
Follow Us