AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಮನೆಗೆ ಬರುವ ಪತಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿಕೊಡಿ, ಮನೆಯಲ್ಲೇ ಇರುತ್ತಾರೆ: ರೇವಣ್ಣ ವ್ಯಂಗ್ಯ

ಅಂದು ಸಾರಾಯಿಗೆ 12 ರೂ. ಇತ್ತು, ಈಗ ಕ್ವಾರ್ಟರ್​ ಬೆಲೆ 80 ರೂ. ಆಗಿದೆ. ಜೀವನ ಸಾಗಿಸಲು ರೈತರು ಹಸು ಸಾಕಿ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಆ ಹಣದಲ್ಲಿ ಸಾರಾಯಿ ಕುಡಿದು ಬಂದರೆ ಗಂಡನಿಗೆ ಹಾಲಿನಲ್ಲಿ ಜಪಾಳ ಮಾತ್ರೆ (ಭೇದಿ ಮಾತ್ರೆ) ಹಾಕಿಕೊಡಿ, ಕುಡಿಯಲು ಹೋಗಲ್ಲ, ಮನೆಯಲ್ಲೇ ಇರುತ್ತಾರೆ ಎಂದು ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.

ಕುಡಿದು ಮನೆಗೆ ಬರುವ ಪತಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿಕೊಡಿ, ಮನೆಯಲ್ಲೇ ಇರುತ್ತಾರೆ: ರೇವಣ್ಣ ವ್ಯಂಗ್ಯ
ಹೆಚ್ ಡಿ ರೇವಣ್ಣ
Rakesh Nayak Manchi
Rakesh Nayak Manchi|

Updated on:Mar 07, 2023 | 3:49 PM

Share

ಹಾಸನ: ಹಸು ಸಾಕಿಕೊಂಡು ಅದರಿಂದ ಸಿಗುವ ಹಾಲನ್ನು ಡೈರಿಗೆ ಹಾಕಿ ಬಂದ ಹಣದಲ್ಲಿ ಕೆಲವರು ಮದ್ಯಪಾನ (Alcohol) ಮಾಡಿ ಬರುತ್ತಾರೆ. ಈ ಬಗ್ಗೆ ಮಾತನಾಡುತ್ತಾ ವ್ಯಂಗ್ಯವಾಡಿದ ಮಾಜಿ ಸಚಿವರೂ ಆಗಿರುವ ಶಾಸಕ ಹೆಚ್.ಡಿ.ರೇವಣ್ಣ (HD Revanna), ಮದ್ಯಪಾನ ಮಾಡಿ ಮನೆಗೆ ಬರುವ ಪತಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ (ಭೇದಿ ಮಾತ್ರೆ) ಹಾಕಿಕೊಡಿ ಎಂದು ಹೇಳಿದ್ದಾರೆ. ಹಾಸನ ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ 157 ಕೋಟಿ ರೂ ವೆಚ್ಚದ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಹಾಲಿನಲ್ಲಿ ಜಾಪಾಳ ಮಾತ್ರೆ (Dysentery pills) ಹಾಕಿಕೊಟ್ಟರೆ ಅವರು ಕುಡಿಯಲು ಹೋಗುವುದಿಲ್ಲ, ಮನೆಯಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾರಾಯಿ ಬಂದ್​ ಮಾಡಿ ಎಂದು ಮಹಿಳೆಯರು ಕೇಳಿದ್ದರು. ಅದರಂತೆ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿದ್ದರು. ಈಗ ಏನಾಯಿತು? ಅಂದು 12 ರೂಪಾಯಿಗೆ ಸಾರಾಯಿ ಸಿಗುತ್ತಿತ್ತು. ಈಗ ಒಂದು ಕ್ವಾರ್ಟರ್​ಗೆ 80 ರೂಪಾಯಿ ಆಗಿದೆ ಎಂದು ಬೈಯುತ್ತಿದ್ದಾರೆ. ರೈತರು ನಿಮ್ಮ ಮಕ್ಕಳು, ಮರಿ, ನೀವೆಲ್ಲ ಕುಡಿದು ಹೆಚ್ಚಾದ ಹಾಲನ್ನು ಡೈರಿಗೆ ಹಾಕಬೇಕು. ದುಡ್ಡಿಗೋಸ್ಕರ ಹಾಲನ್ನು ಡೈರಿಗೆ ಜಾಸ್ತಿ ಹಾಕುತ್ತೀರಿ. ಆ ದುಡ್ಡು ಇಟ್ಟುಕೊಂಡು ಮನೆಗೆ ಬಂದವರಿಗೆ ಒಂದು ಕ್ವಾಟರ್ ಹಾಕಂಡು ಬರೋಗಿ ಅಂತ ಕಳುಸ್ತಿರಾ, ಹಾಲಿನ ಜೊತೆಗೆ ಒಂದೆರಡು ಜಾಪಾಳ ಮಾತ್ರೆನೂ ಹಾಕಿ ಕುಡಿದುಕೊಂಡು ಅಲ್ಲೇ ಮಲಗಿರಬೇಕು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಹೊಳೆನರಸೀಪುರದ ರಥೋತ್ಸವ ನಡೆಯುವಾಗ ಸ್ಥಳೀಯ ಯುವಕರಿಂದ ಬಣ್ಣ ಹಚ್ಚಿಸಿಕೊಳ್ಳಲು ಪ್ರಜ್ವಲ್ ರೇವಣ್ಣ ನಿರಾಕರಿಸಿದರು

ಆ ಶರಾಬು ಕುಡಿಯುವುದನ್ನು ಸ್ವಲ್ಪ ಕಡಿಮೆ ಮಾಡಿಸಿ. ಈಗ ಯಾವ ಊರಿಗೆ ಹೋದರೂ ಯಾವ ಬ್ರಾಂಡ್ ಸಿಗುವುದಿಲ್ಲ ಎಂದು ಹೇಳುವಹಾಗಿಲ್ಲ. ಯಾವ ಪೆಟ್ಟಿಗೆ ಅಂಗಡಿ ಹೋದರೂ ಬಾರ್ ತರ ಎಣ್ಣೆ ಸಿಗುತ್ತದೆ ಎಂದು ಆಕ್ರೊಶ ಹೊರಹಾಕಿದ ರೇವಣ್ಣ, ನಾನು ಮಹಿಳೆಯರು, ಪುರುಷರಿಗೆ ಹೇಳುವುದು ಇಷ್ಟೆ, ಇದೆಲ್ಲ ಆಗಬಾರದು. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ. ನಾಲ್ಕು ಜನರ ಮುಂದೆ ನಿಮ್ಮ ಗಂಡು, ಹೆಣ್ಣು ಮಕ್ಕಳು ನಿಲ್ಲಬೇಕು ಎಂದು ಸಲಹೆ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Tue, 7 March 23

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ