AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಜಾನೆ ಮಂಜಿನ ಸೊಬಗು: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಹಾವೇರಿ ಜನ

ಹಾವೇರಿ: ಜೇಡರ ಬಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಯ ಹಾಸು. ಹಸಿರೆಲೆಗಳ ಮೇಲೆ ಮಂಜಿನ ಸೊಬಗು. ಇಳೆಗೆ ಸ್ವರ್ಣ ಬಿಂಬ ತಾಕುತ್ತಿರೋ ಸೂರ್ಯೋದಯದ ಕಿರಣಗಳು. ಚುಮು ಚುಮು ಚಳಿಯಲಿ, ಮುಂಜಾನೆ ಹೊತ್ತಲ್ಲಿ ಮುಂದಕ್ಕೆ ಹೆಜ್ಜೆ ಹಾಕ್ತಿದ್ರೆ ಸ್ವರ್ಗವೇ ಭಾಸವಾಗುತ್ತೆ. ಹೆಜ್ಜೆ ಹೆಜ್ಜೆಗೂ ನೀರಿನ ಹನಿ ಸೋಕುತ್ತೆ. ತಂಗಾಳಿ ಸ್ಪರ್ಶಕ್ಕೆ ಮನಸು ಹಕ್ಕಿಯಂತೆ ಹಾರುತ್ತೆ. ಪದಗಳಿಗೆ ನಿಲುಕದ ಇಂಥ ರಮಣೀಯ ದೃಶ್ಯಗಳು ಕಂಡುಬಂದಿದ್ದು ಹಾವೇರಿ ನಗರ ಸುತ್ತಮುತ್ತ. ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ವಾತಾವರಣವಿದೆ. ಹೀಗಾಗಿ ಮುಂಜಾನೆ […]

ಮುಂಜಾನೆ ಮಂಜಿನ ಸೊಬಗು: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಹಾವೇರಿ ಜನ
ಸಾಧು ಶ್ರೀನಾಥ್​
|

Updated on: Feb 02, 2020 | 5:54 PM

Share

ಹಾವೇರಿ: ಜೇಡರ ಬಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಯ ಹಾಸು. ಹಸಿರೆಲೆಗಳ ಮೇಲೆ ಮಂಜಿನ ಸೊಬಗು. ಇಳೆಗೆ ಸ್ವರ್ಣ ಬಿಂಬ ತಾಕುತ್ತಿರೋ ಸೂರ್ಯೋದಯದ ಕಿರಣಗಳು.

ಚುಮು ಚುಮು ಚಳಿಯಲಿ, ಮುಂಜಾನೆ ಹೊತ್ತಲ್ಲಿ ಮುಂದಕ್ಕೆ ಹೆಜ್ಜೆ ಹಾಕ್ತಿದ್ರೆ ಸ್ವರ್ಗವೇ ಭಾಸವಾಗುತ್ತೆ. ಹೆಜ್ಜೆ ಹೆಜ್ಜೆಗೂ ನೀರಿನ ಹನಿ ಸೋಕುತ್ತೆ. ತಂಗಾಳಿ ಸ್ಪರ್ಶಕ್ಕೆ ಮನಸು ಹಕ್ಕಿಯಂತೆ ಹಾರುತ್ತೆ. ಪದಗಳಿಗೆ ನಿಲುಕದ ಇಂಥ ರಮಣೀಯ ದೃಶ್ಯಗಳು ಕಂಡುಬಂದಿದ್ದು ಹಾವೇರಿ ನಗರ ಸುತ್ತಮುತ್ತ. ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ವಾತಾವರಣವಿದೆ. ಹೀಗಾಗಿ ಮುಂಜಾನೆ ಧರೆಗೆ ಮುತ್ತಿಕ್ಕೋ ಮಂಜಿನ ಹನಿ ಹೊಸ ಲೋಕವನ್ನೇ ಸೃಷ್ಟಿಸಿದೆ.

ಮುಂಜಾನೆ ಮಂಜಿನ ಹನಿಗೆ ಫುಲ್ ಫಿದಾ: ಬೆಳ್ಳಂಬೆಳಗ್ಗೆ ಮನೆಯಿಂದ ಹೊರಟು ವಾಯುವಿಹಾರಕ್ಕೆ ಬರೋರಂತೂ ಸುಂದರ ಪರಿಸರಕ್ಕೆ ಫುಲ್ ಫಿದಾ ಆಗಿದ್ದಾರೆ. ಗಿಡಗಂಟಿಗಳಲ್ಲಿ ಕಟ್ಟಿರೋ ಜೇಡರ ಬಲೆ, ಮುಂಜಾನೆ ಬೀಳೋ ಮಂಜಿನ ಹನಿ, ಸೂರ್ಯೋದಯದ ಸೊಬಗು ಸಖತ್ ಎಂಜಾಯ್ ಮಾಡ್ತಿದ್ದಾರೆ. ಒಟ್ನಲ್ಲಿ, ಪ್ರಕೃತಿ ಸೌಂದರ್ಯ ಅಂದ್ರೇನೆ ಹಾಗೆ.. ಎಂಥವರನ್ನೂ ಮೂಕವಿಸ್ಮಿತರನ್ನಾಗಿಸೋ ಶಕ್ತಿ ಹೊಂದಿದೆ. ಸದ್ಯ ಹಾವೇರಿ ನಗರ ನಿವಾಸಿಗಳಿಗೆ ಪ್ರಕೃತಿ ಕಟ್ಟಿಕೊಟ್ಟಿರೋ ಇಬ್ಬನಿಯ ಸೊಬಗು ಕಣ್ಣಿಗೆ ಹಬ್ಬದಂತಾಗಿದೆ.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ