ಹೆಚ್ ಡಿ ರೇವಣ್ಣ ಹೇಳಿದ್ದನ್ನು ತಿಳಿಸಿದಾಗ ನಿಖಿಲ್ ದೊಡ್ಡಪ್ಪನ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದರು!
ರಾಮನಗರ ಜಿಲ್ಲೆಯ ಜನ ತಮ್ಮ ಕುಟುಂಬಕ್ಕೆ ಸಾಕಷ್ಟು ಪ್ರೀತಿ ಮತ್ತು ವಿಶ್ವಾಸ ತೋರಿದ್ದಾರೆ, 8ಬಾರಿ ಶಾಸಕ ಮತ್ತು 3 ಬಾರಿ ಸಂಸದನಾಗಿ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾರೆ, ಅದಕ್ಕೆ ಅನುಗುಣವಾಗಿ ತಮ್ಮ ಕುಟುಂಬ ರಾಮನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದೆ, ಚನ್ನಪಟ್ಟಣದ ಜನತೆ ಈ ಸಲ ನೀಡಿರುವ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತೇವೆ ಎಂದು ನಿಖಿಲ್ ಹೇಳಿದರು.
ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ಕುಟುಂಬದಲ್ಲಿ ಹೆಚ್ ಡಿ ರೇವಣ್ಣ ಈಗಲೂ ಅನಪೇಕ್ಷಿತ ವ್ಯಕ್ತಿಯೇ? ನಿಖಿಲ್ ಕುಮಾರಸ್ವಾಮಿಯ ಮಾತುಗಳನ್ನು ಕೇಳುತ್ತಿದ್ದರೆ ಹಾಗನ್ನಿಸದರದು. ಈ ಬಾರಿ ಸೋತರೂ ಚಿಂತೆಯಿಲ್ಲ, ರಾಮನಗರ ಜಿಲ್ಲೆಯಿಂದ ಮುಂದೆ ಗೆದ್ದೇಗೆಲ್ಲುತ್ತಾನೆ ಎಂದು ರೇವಣ್ಣ ಹೇಳಿರುವುದನ್ನು ನಿಖಿಲ್ ಗಮನಕ್ಕೆ ತಂದಾಗ, ಅವರು ತಮ್ಮ ದೊಡ್ಡಪ್ಪನ ಹೆಸರನ್ನು ಉಲ್ಲೇಖಿಸದೆ ಮಾತಾಡುತ್ತಾರೆ ಮತ್ತು ವಿಷಯಾಂತರ ಮಾಡುತ್ತಾರೆ. ಪಕ್ಷ ಸ್ಥಾಪನೆಯಾದ ಸಮಯದಿಂದ ಅಸೆಂಬ್ಲಿ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆದ್ದಿರುವುದು ಒಂದು ದಾಖಲೆಯಾಗಿ ಇತಿಹಾಸ ಪುಟ ಸೇರಿದೆ, ಆ ದಾಖಲೆಯನ್ನು ಸರಿಗಟ್ಟಬೇಕು ಅಂತೆಲ್ಲ ತಮ್ಮ ಮುಂದಿನ ಗುರಿಯ ಬಗ್ಗೆ ಅವರು ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಮ್ಮ ಕುರ್ಚಿಯನ್ನು ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಸಮಾವೇಶ ಮಾಡಿಸುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ