BS Yediyurappa: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಜೆ ಪಿ ನಡ್ಡಾ ಜತೆ ಅಮಿತ್ ಶಾ ಚರ್ಚೆ

| Updated By: guruganesh bhat

Updated on: Jul 26, 2021 | 3:29 PM

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಪಕ್ಷದಲ್ಲಿ ಏನು ನಿರ್ಧಾರ ಆಗುತ್ತದೆ ಎಂದು ನೋಡೋಣ. ರಾಜ್ಯಾದ್ಯಂತ ಪ್ರವಾಸ ಮಾಡೋಣ, ಪಕ್ಷ ಬಲಪಡಿಸೋಣ’ ಎಂದು ತಮ್ಮ ಬಳಗದ ಮಾಜಿ ಸಚಿವರು, ಆಪ್ತರ ಜತೆ ಚರ್ಚೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

BS Yediyurappa: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಜೆ ಪಿ ನಡ್ಡಾ ಜತೆ ಅಮಿತ್ ಶಾ ಚರ್ಚೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಇದೇ ವೇಳೆ ಪಾರ್ಲಿಮೆಂಟ್ ಹೌಸ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜತೆ ಜೆ.ಪಿ.ನಡ್ಡಾ (JP Nadda) ಕರ್ನಾಟಕದ ಮುಂದಿನ ಸಿಎಂ (Karnataka Politics)  ಆಯ್ಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಪಕ್ಷದಲ್ಲಿ ಏನು ನಿರ್ಧಾರ ಆಗುತ್ತದೆ ಎಂದು ನೋಡೋಣ. ರಾಜ್ಯಾದ್ಯಂತ ಪ್ರವಾಸ ಮಾಡೋಣ, ಪಕ್ಷ ಬಲಪಡಿಸೋಣ’ ಎಂದು ತಮ್ಮ ಬಳಗದ ಮಾಜಿ ಸಚಿವರು, ಆಪ್ತರ ಜತೆ ಚರ್ಚೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯದಲ್ಲೇ ಕರ್ನಾಟಕಕ್ಕೆ ಕಳಿಸುವ ವೀಕ್ಷಕರ ಹೆಸರನ್ನು ಘೋಷಿಸಲಿದ್ದು, ಕೇಂದ್ರದ ವೀಕ್ಷಕರು ಬೆಂಗಳೂರಿಗೆ ಬಂದು ಸಭೆ ನಡೆಲಿದ್ದಾರೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ನೂತನ ನಾಯಕನ ಆಯ್ಕೆ ನಡೆಸಲಿದ್ದಾರೆ. ನಾಯಕನ ಆಯ್ಕೆ ಬಳಿಕ ರಾಜ್ಯಪಾಲರಿಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದು, ಆಬಳಿಕ ನೂತನ ಸಿಎಂ ಪದಗ್ರಹಣ ನಡೆಸಲಿದ್ದಾರೆ.

ಇದನ್ನೂ ಓದಿ: 

ಬಿ.ಎಸ್. ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭವಿದ್ದಂತೆ; ಬಿಎಸ್‌ವೈ ರಾಜೀನಾಮೆಯಿಂದ ನಮ್ಮ ಬಲ ಕುಸಿದ ಭಾವನೆ: ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ

ಬಿಜೆಪಿ ಹಿರಿಯ ನಾಯಕರನ್ನೆಲ್ಲ ಮೋದಿ ಮೂಲೆಗುಂಪು ಮಾಡ್ತಿದ್ದಾರೆ..  ಆ ಸಾಲಿಗೆ ಈಗ ಯಡಿಯೂರಪ್ಪ ಸೇರ್ಪಡೆ: ರಣದೀಪ್ ಸಿಂಗ್​​ ಸುರ್ಜೇವಾಲಾ

(Home Minister Amit Shah discussion with BJP President J P Nadda for next Karnataka CM after BS Yediyurappa)

Published On - 3:19 pm, Mon, 26 July 21