AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್​​​ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ!

Father Stabs Daughter: ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಬಂದು ತಂದೆ ಚಾಕು ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಜುಲೈ 25 ರಂದು ನಡೆದಿರುವ ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.

40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್​​​ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ!
ತಂದೆ ನಾಗೇಂದ್ರ, ಮಗಳು ಲಕ್ಷ್ಮೀದುರ್ಗಾImage Credit source: tv9 kannada
ನವೀನ್ ಕುಮಾರ್ ಟಿ
| Edited By: |

Updated on:Jul 30, 2026 | 6:36 PM

Share

ಮುಖ್ಯಾಂಶಗಳು

  • ಪುತ್ರಿ ಕೆಲಸ ಮಾಡ್ತಿದ್ದ ಕಾಲೇಜಿಗೆ ಬಂದು ಚೇಂಬರ್​ನಲ್ಲೇ ಚಾಕು ಇರಿತ ತಂದೆ
  • ಬೆಂಗಳೂರಿನ ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಘಟನೆ
  • ಆರೋಪಿ ನಾಗೇಂದ್ರನನ್ನು ಬಂಧಿಸಿದ ರಾಜಾನುಕುಂಟೆ ಪೊಲೀಸರು

ದೇವನಹಳ್ಳಿ, ಜುಲೈ 30: ಮದುವೆ ವಿಚಾರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ವಿರೋಧಿಸಿದ ಕಾರಣಕ್ಕೆ ಕಾಲೇಜ್​ನ​​ ಚೇಂಬರ್​​ಗೆ ನುಗ್ಗಿ ಕೆಲಸ ಮಾಡುತ್ತಿದ್ದ ಮಗಳಿಗೆ (Daughter) ಚಾಕುವಿನಿಂದ ಇರಿದು ತಂದೆ (Father) ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಜುಲೈ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗಳು ಲಕ್ಷ್ಮೀದುರ್ಗಾಗೆ ಚಾಕುವಿನಿಂದ ಇರಿದ ತಂದೆ ನಾಗೇಂದ್ರನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಆರೋಪಿ ನಾಗೇಂದ್ರ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದು, ಲಕ್ಷ್ಮೀದುರ್ಗಾ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪೋಷಕರು ಮಗಳಿಗೆ ಮದುವೆ ಮಾಡಬೇಕೆಂದು ಗಂಡು ನೋಡಿದ್ದರು.  ಮದುವೆ ಮಾಡಿಕೊಳ್ಳಲು ಹುಡುಗನ ಮನೆಯವರು ಕೂಡ ಒಪ್ಪಿಕೊಂಡಿದ್ದರು. ಆದರೆ ಮಗಳು ಲಕ್ಷ್ಮೀದುರ್ಗಾಳನ್ನು ಕಷ್ಟಪಟ್ಟು ಓದಿಸಿದ್ದೇನೆ. ಮದುವೆಯಾಗಲು 40 ಲಕ್ಷ ರೂ ಕೊಡಬೇಕೆಂದು ಹುಡುಗನ ಬಳಿ ನಾಗೇಂದ್ರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಇನ್ನೊಂದೆಡೆ ಮಗಳ ಪ್ರತಿ ತಿಂಗಳ ಸಂಬಳವನ್ನೂ ನನಗೇ ಕೊಡಬೇಕೆಂದು ಕೇಳಿದ್ದರು. ನಾಗೇಂದ್ರನ ಈ ಬೇಡಿಕೆಗಳಿಗೆ ಹೆಂಡತಿ ಮತ್ತು ಮಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಳಿಕ ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಜಗಳವಾಗಿತ್ತು.

ಚೇಂಬರ್​ನಲ್ಲೇ ಚಾಕು ಇರಿತ

ಇನ್ನು ಕೋಪದಲ್ಲಿ ನಾಗೇಂದ್ರ, ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಬಂದಿದ್ದಾರೆ. ಹೆಚ್‌ಒಡಿ ಕ್ಯಾಬಿನ್​​ಗೆಎ​​ ಹೋಗಿ ಪುತ್ರಿಯನ್ನ ನೋಡಬೇಕು ಎಂದಿದ್ದಾರೆ. ಲಕ್ಷ್ಮೀದುರ್ಗಾ ಆಗಮಿಸುತ್ತಿದ್ದಂತೆ ಚೇಂಬರ್​ನಲ್ಲೇ ಹೊಟ್ಟೆ, ಎದೆ, ಕುತ್ತಿಗೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!

ಭೀಕರ ದಾಳಿಗೆ ಒಳಗಾಗಿರುವ ಲಕ್ಷ್ಮೀದುರ್ಗಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಾನುಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:35 pm, Thu, 30 July 26

Follow Us