AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆ ಕಡೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುವೆ: ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟ ಸಿದ್ದರಾಮಯ್ಯ

badami constituency: ನೀವು ಅಲ್ಲೇ ನಿಲ್ಲಬೇಕು ಎಂದು ಬಾದಾಮಿ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ಅಲ್ಲಿಂದ ಬಂದಿದ್ದ ಅಭಿಮಾನಿಗಳು ಕೂಗಿದಾಗ ನಿಮಗೆ ಚಿರ ಋಣಿಯಾಗಿರ್ತಿನಿ. ನಾನು ಬಾದಾಮಿ ಕ್ಷೇತ್ರದ ಶಾಸಕ ಜನ ಇಚ್ಛೆ ಪಡುತ್ತಿರುವ ಹಿನ್ನೆಲೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಮುಂದೆ ಘೋಷಣೆ ಮಾಡಿದರು.

ಬೇರೆ ಕಡೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುವೆ: ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟ ಸಿದ್ದರಾಮಯ್ಯ
ಬೇರೆ ಕಡೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುವೆ: ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟ ಸಿದ್ದರಾಮಯ್ಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 06, 2021 | 2:01 PM

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ 2023ರಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರಾದರೂ ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುತ್ತೇನೆ ಎಂದು ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟರು.

ಬಾದಾಮಿಯಿಂದ ಕ್ಷೇತ್ರದ ಜನ ಇಂದು ಬೆಳಗ್ಗೆ ಬೆಂಗಳೂರಿಗೆ ಬಂದು ಬಾದಾಮಿ ಕ್ಷೇತ್ರ ಬಿಡ ಬೇಡಿ ಎಂದು ಮನವಿ ಮಾಡಿದ್ದರು. ಬಾದಾಮಿ ಕ್ಷೇತ್ರದ ಜನ ಬೆಂಗಳೂರಿಗೆ ಬಂದು ತನ್ನನ್ನು ಭೇಟಿ ಮಾಡುವುದರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಇದನ್ನ ನಿರೀಕ್ಷೆ ಮಾಡಲಿಲ್ಲ. ನಿನ್ನೆ ಗೊತ್ತಾಯ್ತು.. ಪಾಪಾ ಏಕೆ ಬರ್ತಾ ಇದಾರೆ ಅಂತಾ ಕೇಳಿದೆ. ಇಲ್ಲ. 2023 ರಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಲು ಬರ್ತಾ ಇದಾರೆ ಅಂದರು. ಖರ್ಚು ಮಾಡಿಕೊಂಡು ಬರುವುದು ಬೇಡ ಅಂತಾ ಹೇಳಿದ್ದೆ ಎಂದರು.

ನಾನು ಎಲ್ಲೂ ಕೂಡ ಬಾದಾಮಿಯಿಂದ ನಿಲ್ಲೊಲ್ಲ ಎಂದಿದ್ದೀನಾ? ಅಭಿಮಾನದಿಂದ ಬೇರೆ ಬೇರೆ ಕ್ಷೇತ್ರದ ಜನ ನನ್ನ ಕರೆಯುತಾರೆ. ಚಾಮರಾಜ ಪೇಟೆ, ಕೊಪ್ಪಳ ಕೋಲಾರ ಹೀಗೆ ಎಲ್ಲ ಕಡೆ ಕರೀತಾರೆ. ನಾನು ಅಲ್ಲಿ ಎಲ್ಲೂ ಕೂಡ ನಿಲ್ತೀನಿ ಅಂತಾ ಹೇಳಿಲ್ಲ. ಅಸೆಂಬ್ಲಿಯಲ್ಲಿ ಆರ್ ಅಶೋಕ ಕೇಳಿದಾಗ ನಾನು ಬಾದಾಮಿ ಶಾಸಕ, ಮುಂದೆಯೂ ಬಾದಾಮಿಯಿಂದ ನಿಂತ್ಕೋತೀನಿ ಅಂದಿದ್ದೀನಿ ಎಂದು ಸಿದ್ದರಾಮಯ್ಯ ಹೇಳಿದರು.

ನೀವು ನನ್ನ ಗೆಲ್ಲಿಸಿ ಕಳುಹಿಸಿದ್ದೀರಿ. ನಿಮ್ಮ ಅಭಿಪ್ರಾಯ ಕೇಳದೇ ನಾನು ನಿರ್ಧಾರ ಮಾಡಲು ಆಗುತ್ತಾ? ಚಾಮುಂಡೇಶ್ವರಿಯಲ್ಲಿ 5 ಸಾರಿ ಗೆದ್ದಿದ್ದೆ. ಎಲ್ಲರು ಸೇರಿ ನನ್ನ ಸೋಲಿಸಿದರು. ನೀವು ನನ್ನ ಗೆಲ್ಲಿಸಿದ್ರಿ… ನಿಮ್ಮನ್ನ ಮರೆಯಲು ಸಾಧ್ಯವಾ? ಶಾಸಕನಾದವನು ಕ್ಷೇತ್ರದಲ್ಲೇ ಇರಬೇಕು. ಆದರೆ ನಾನು ವಿಪಕ್ಷ ನಾಯಕನಾಗಿರುವ ಕಾರಣ ಕ್ಷೇತ್ರಕ್ಕೆ ಹೆಚ್ಚಾಗಿ ಬರಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ನೀವು ಅಲ್ಲೇ ನಿಲ್ಲಬೇಕು ಎಂದು ಬಾದಾಮಿ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ಅಲ್ಲಿಂದ ಬಂದಿದ್ದ ಅಭಿಮಾನಿಗಳು ಕೂಗಿದಾಗ ನಿಮಗೆ ಚಿರ ಋಣಿಯಾಗಿರ್ತಿನಿ. ನಾನು ಬಾದಾಮಿ ಕ್ಷೇತ್ರದ ಶಾಸಕ. ಜನ ಇಚ್ಛೆ ಪಡುತ್ತಿರುವ ಹಿನ್ನೆಲೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಮುಂದೆ ಘೋಷಣೆ ಮಾಡಿದರು.

(i will contest from badami constituency only assures sitting mla siddaramaiah to his supporters in bangalore)

Published On - 1:10 pm, Tue, 6 July 21

ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ