AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೀತಿಯ ಕೊರೊನಾ ಟೆಸ್ಟ್ ನಡೆಸಲು ಒಪ್ಪಿಗೆ; ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದ ಸ್ಟಾರ್ಟ್​ಅಪ್​ಗೆ ಅನುಮತಿ

ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ ಇದು ಪ್ರತಿಕಾಯಗಳನ್ನು ಕಂಡುಹಿಡಿಯಲು ಸಹಕರಿಸುವ ಪರೀಕ್ಷೆಯಾಗಿರುವ ಕಾರಣ ಕೊರೊನಾ ಲಸಿಕೆ ವಿತರಣೆಗೂ ಮುಂಬರುವ ದಿನಗಳಲ್ಲಿ ಸಹಕಾರಿಯಾಗಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಪುಟ್ಟ ಸಾಧನದ ಮೂಲಕವೇ ಕೈಯಲ್ಲಿ ಹಿಡಿದು ತಿಳಿದುಕೊಳ್ಳಬಹುದಾಗಿದ್ದು, ಬಳಸಿ ಎಸೆಯಬಹುದಾದ ಸ್ಟ್ರಿಪ್​ಗಳನ್ನು ಅದು ಹೊಂದಿರಲಿದೆ.

ಹೊಸ ರೀತಿಯ ಕೊರೊನಾ ಟೆಸ್ಟ್ ನಡೆಸಲು ಒಪ್ಪಿಗೆ; ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದ ಸ್ಟಾರ್ಟ್​ಅಪ್​ಗೆ ಅನುಮತಿ
ಕೊವಿಡ್​ 19 ಪರೀಕ್ಷೆ ಮಾಡುವ ಹೊಸ ಮಾದರಿಯ ಉಪಕರಣ
Skanda
|

Updated on: May 20, 2021 | 12:23 PM

Share

ಕೊರೊನಾ ಎರಡನೇ ಅಲೆ ವೈದ್ಯಕೀಯ ಲೋಕಕ್ಕೆ ಹೊಸ ಸವಾಲೊಡ್ಡಿ ನಿಂತಿದೆ. ಕಳೆದ ಬಾರಿ ಕೊರೊನಾ ವೈರಾಣು ಪತ್ತೆಗೆ ಬಳಸುತ್ತಿದ್ದ ವಿಧಾನಗಳಿಗೂ ಈ ವರ್ಷ ವೈರಾಣು ಪತ್ತೆಯಾಗದೇ ಸೋಂಕಿತರನ್ನು ಗುರುತಿಸುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಕೃಪಾಪೋಷಿತ ಸ್ಟಾರ್ಟ್​ಅಪ್​ ಒಂದು ನೂತನ ಮಾದರಿಯ ಕೊರೊನಾ ಪರೀಕ್ಷಾ ವಿಧಾನವನ್ನು ಪರಿಚಯಿಸಿದ್ದು ಅದು ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂದು ಪತ್ತೆಹಚ್ಚುವುದಕ್ಕೂ ಸಹಾಯ ಮಾಡುವ ನಿರೀಕ್ಷೆ ಇದೆ ಎಂದು ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದ ತಜ್ಞರು ಹೇಳಿದ್ದಾರೆ.

ಪಥ್​ಶೋಧ್ ಹೆಲ್ತ್​ಕೇರ್ ವತಿಯಿಂದ ಈ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಹೇಳುವಂತೆ ಇದು ಕೊವಿಡ್​ 19 IgM ಹಾಗೂ IgG ಪ್ರತಿಕಾಯಗಳನ್ನು ಪತ್ತೆಹಚ್ಚಲು ಸಹಕರಿಸಲಿದೆ. ಕೊವಿಡ್ 19 ವೈರಾಣುವಿನ ಗ್ಲೈಕೋಪ್ರೋಟೀನ್​ಗೆ ಸಂಬಂಧಿಸಿದಂತೆ ಇದು ಪ್ರತಿಕಾಯಗಳನ್ನು ಪತ್ತೆ ಹಚ್ಚಲು ಎಲೆಕ್ಟ್ರೋಕೆಮಿಕಲ್ ರೆಡಾಕ್ಸ್ ಚಟುವಟಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದೆ.

ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ ಇದು ಪ್ರತಿಕಾಯಗಳನ್ನು ಕಂಡುಹಿಡಿಯಲು ಸಹಕರಿಸುವ ಪರೀಕ್ಷೆಯಾಗಿರುವ ಕಾರಣ ಕೊರೊನಾ ಲಸಿಕೆ ವಿತರಣೆಗೂ ಮುಂಬರುವ ದಿನಗಳಲ್ಲಿ ಸಹಕಾರಿಯಾಗಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಪುಟ್ಟ ಸಾಧನದ ಮೂಲಕವೇ ಕೈಯಲ್ಲಿ ಹಿಡಿದು ತಿಳಿದುಕೊಳ್ಳಬಹುದಾಗಿದ್ದು, ಬಳಸಿ ಎಸೆಯಬಹುದಾದ ಸ್ಟ್ರಿಪ್​ಗಳನ್ನು ಅದು ಹೊಂದಿರಲಿದೆ ಎಂದಿದ್ದಾರೆ. ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿ ಅಭಿವೃದ್ಧಿಪಡಿಸಲಾಗಿರುವ ಈ ಪರೀಕ್ಷಾ ವಿಧಾನವು ಗೊಂದಲ ಮುಕ್ತವಾಗಿರಲಿದೆ. ಅಲ್ಲದೇ ಇದನ್ನು ಸ್ಮಾರ್ಟ್​ಫೋನ್​ಗೆ ಸಂಪರ್ಕಿಸುವ ರೀತಿಯಲ್ಲೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್ 

ಭಾರತದಲ್ಲಿ ಕೊರೊನಾ 2ನೇ ಅಲೆ ಕೊನೆ ಯಾವಾಗ? ಮೂರನೇ ಅಲೆಯ ಪ್ರಾರಂಭಕ್ಕೆ ಇನ್ನೆಷ್ಟು ತಿಂಗಳು ಬಾಕಿ?-ಇಲ್ಲಿದೆ ನೋಡಿ ತಜ್ಞರು ನೀಡಿದ ವರದಿ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ