AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯವೂ ಇದೆ -ಎಚ್ಚರಿಸಿದ ಹೆಚ್ ​ಡಿ ಕುಮಾರಸ್ವಾಮಿ

The Kashmir Files: ಸಿನಿಮಾವನ್ನ ಎಮೋಷನಲಿ ಸಕ್ಸಸ್ ಆಗೋಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡ್ತಾರೆ. ಗೋಧ್ರಾದಲ್ಲಿ ಗರ್ಭಿಣಿ ಹೆಣ್ಣುಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ. ಇಂತವೆಲ್ಲಾ ಮತ್ತೆ ಮುಂದುವರೆಸಿಕೊಂಡು ಹೋಗಬೇಕಾ, ಇದು ಆಗಬಾರದು ಎನ್ನೋದು ನನ್ನ ಅಭಿಪ್ರಾಯ - ಹೆಚ್​ಡಿ ಕುಮಾರಸ್ವಾಮಿ

ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯವೂ ಇದೆ -ಎಚ್ಚರಿಸಿದ ಹೆಚ್ ​ಡಿ ಕುಮಾರಸ್ವಾಮಿ
ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ - ಎಚ್ಚರಿಸಿದ ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:Mar 18, 2022 | 4:15 PM

Share

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸುದ್ದಿಗಾರರೊಂದಿಗೆ ಮಾತನಾಡಿದರು. ದಿ ಕಾಶ್ಮೀರಿ ಫೈಲ್ಸ್​ ಸಿನಿಮಾ (The Kashmir Files) ಬಗ್ಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ ಅವರು ಹತ್ಯಾಕಂಡಗಳು ಮಹಾಭಾರತ, ಕುರುಕ್ಷೇತ್ರ ಕಾಲದಿಂದಲೂ ನಡೆದುಕೊಂಡು ಬಂದಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆದಾಗ 20 ಲಕ್ಷ ಕುಟುಂಬಗಳ ಬಲಿದಾನ ಆಗಿದೆ. ದೇಶದ ಹಿಂದಿನ ಚರಿತ್ರೆ ಹೀಗಿರುವಾಗ ಮತ್ತೆ ಇಂತಹ ರಕ್ತಪಾತವೇ ಮುಂದುವರಿದುಕೊಂಡು ಬರಬೇಕಾ? ಅವರು ಸಿನಿಮಾ ತೆಗೆದಿರೊದು ನೋವು ಹೇಳಿಕೊಂಡಿರೋದು ಎಲ್ಲವೂ ನಡೆದಿದೆ. ಆದರೆ ಅದು ಎಷ್ಟರಮಟ್ಟಿಗೆ ನಡೆದಿದೆ ನಾನು ಹೋಗಿ ನೋಡಿಲ್ಲ.

ಸಿನಿಮಾವನ್ನ ಎಮೋಷನಲಿ ಸಕ್ಸಸ್ ಆಗೋಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡ್ತಾರೆ. ಗೋಧ್ರಾದಲ್ಲಿ ಗರ್ಭಿಣಿ ಹೆಣ್ಣುಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ (2002 Gujarat riots). ಇಂತವೆಲ್ಲಾ ಮತ್ತೆ ಮುಂದುವರೆಸಿಕೊಂಡು ಹೋಗಬೇಕಾ, ಇದು ಆಗಬಾರದು ಎನ್ನೋದು ನನ್ನ ಅಭಿಪ್ರಾಯ. ನಾವೇನಾದ್ರು ನಿಜ ಹೇಳೋಕೆ ಹೋದ್ರೆ ಅದನ್ನ ತಿರುಚುತ್ತಾರೆ ಏನು ಮಾಡೋದು. ಈಗ ಜನರ ಅಭಿವೃದ್ಧಿ ಕೆಲಸದ ಮೇಲೆ ಓಟ್ ಕೇಳ್ತಾ ಇಲ್ಲಾ, ಅವರವರದೇ ಅದ ಅಜೆಂಡಾ ಇಟ್ಟುಕೊಂಡಿದಾರೆ. ಭಾವನಾತ್ಮಕ ವಿಚರಗಳ ಮೇಲೆ ಮತ ಕೇಳಲು ಹೊರಟಿದ್ದಾರೆ. ಕೊನೆಗೆ ಇದಕ್ಕೆ ಪ್ರಾಯಶ್ಚಿತ್ತ ಪಡೋದು ಅಮಾಯಕ ಜನರಲ್ಲವೆ? ಅಧಿಕಾರ ಯಾರಿಗೂ ಶಾಶ್ವತ ಅಲ್ಲಾ, ಯಾವ ವಂಶ ಕೂಡ ಉಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನರೇ ಅಂತಿಮ ತೀರ್ಮಾನ ಮಾಡೋರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ​ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಸಿದರು.

ಹಿಜಾಬ್‌ ಯಾಕೆ ದೊಡ್ಡದು ಮಾಡ್ತೀರಾ… ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ: ಹಿಜಾಬ್‌ ಸಂಬಂಧ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದೆ. ಹೈಕೋರ್ಟ್‌ನ ತೀರ್ಪನ್ನು ತಲೆಬಾಗಿ ಸ್ವೀಕರಿಸಬೇಕೆಂದಿದ್ದೆ. ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ನಿಯಮ ಪಿಯುವರೆಗಿದೆ. ಈ ಗೊಂದಲ ನಿವಾರಣೆಗೆ ಸರ್ಕಾರ ಪ್ರಯತ್ನ ಮಾಡಬೇಕು. ಹೈಕೋರ್ಟ್ ಇದರ ಹಿಂದೆ ಕಾಣದ ಕೈ ಇದೆ ಎಂದು ಹೇಳಿದೆ. ಸರ್ಕಾರ ಆ ಕಾಣದ ಕೈಗಳನ್ನ ಗುರ್ತಿಸಲಿ. ಹಿಜಾಬ್‌ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಶಾಲಾ ಮಕ್ಕಳು ಹಾಲಿನಂತಾ ಪರಿಶುದ್ಧ ಮನಸ್ಸಿನವರು, ಅದನ್ನ ಕಲುಷಿತ ಮಾಡಬೇಡಿ.

ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಸರ್ಕಾರ ಆರೂವರೆ ಕೋಟಿ ಜನರಿಗೆ ಇದೆ, ಅವರಿಗಾಗಿ ಕೆಲಸ ಮಾಡಬೇಕು. ಸರ್ಕಾರವೇ ಕೊಟ್ಟ ಯೂನಿಫಾರ್ಮ್ ದುಪ್ಪಟ್ಟಾವನ್ನು ಹೆಣ್ಣು ಮಕ್ಕಳು ತಲೆ ಮೇಲೆ‌ ಸುತ್ತಿ ಹಾಕಿಕೊಳ್ಳಲಿ ಬಿಡಿ. ಇದನ್ನ ಅವರು ನೆರಳಿಗಾಗಿಯೊ, ಧೂಳಿಗಾಗಿ ಹಾಕೊತ್ತಾರೋ ಗೊತ್ತಿಲ್ಲ. ಕಸ್ತೂರಬಾ, ಮದರ್ ತೆರೆಸಾ ಹಾಕುತ್ತಿರಲಿಲ್ಲವಾ ಅದನ್ನೇ ಯಾಕೆ ದೊಡ್ಡದು ಮಾಡ್ತೀರಾ. ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ ಎಂದೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

Published On - 4:05 pm, Fri, 18 March 22

ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ