AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿಗೆ ಸಿದ್ದಾಪುರದ ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಈ ಬಾರಿ ಆಲೆಮನೆಯದ್ದೇ ವಿಶೇಷ

ಬಾನ್ಕುಳಿ ಮಠದಲ್ಲಿ ಪ್ರತಿ ಸಂಕ್ರಾಂತಿಯಂದು ಗೋದಿನ ಆಚರಿಸಲಾಗುತ್ತಿದೆ. ಈ ಬಾರಿ ವಿಷೇಶವಾಗಿ ನಾಲ್ಕು ದಿನಗಳ ಆಲೆಮನೆ ಹಬ್ಬ ಕೂಡ ನಡೆಯಲಿದೆ ಜನರಿಗೆ ಗೋವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ.

ಸಂಕ್ರಾಂತಿಗೆ ಸಿದ್ದಾಪುರದ ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಈ ಬಾರಿ ಆಲೆಮನೆಯದ್ದೇ ವಿಶೇಷ
ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಗೋದಿನ ಮತ್ತು ಆಲೆಮನೆ ಹಬ್ಬ
shruti hegde
|

Updated on:Jan 11, 2021 | 5:02 PM

Share

ಉತ್ತರ ಕನ್ನಡ: ಸಿದ್ದಾಪುರ ತಾಲೂಕಿನ ರಾಮದುಘಾ ಟ್ರಸ್ಟ್ ಆಶ್ರಯದಲ್ಲಿ ತಾಲೂಕಿನ ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಗೋದಿನ ಮತ್ತು ಆಲೆಮನೆ ಹಬ್ಬವನ್ನು ಜನವರಿ 14ರಿಂದ 17ರ ವರೆಗೆ ನಡೆಸಲಾಗುತ್ತಿದೆ ಎಂದು ಬಾನ್ಕುಳಿ ಮಠದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಬಾನ್ಕುಳಿ ಮಠದಲ್ಲಿ ಪ್ರತಿ ಸಂಕ್ರಾಂತಿಯಂದು ಗೋದಿನ ಆಚರಿಸಲಾಗುತ್ತಿದೆ. ಈ ಬಾರಿ ವಿಷೇಶವಾಗಿ ನಾಲ್ಕು ದಿನಗಳ ಆಲೆಮನೆ ಹಬ್ಬ ಕೂಡ ನಡೆಯಲಿದೆ ಜನರಿಗೆ ಗೋವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಾನ್ಕುಳಿ ಗೋ ಸ್ವರ್ಗದಲ್ಲಿ 700 ಗೋವುಗಳ ಸಂರಕ್ಷಣೆ ಮಾಡುತ್ತಿದ್ದೇವೆ. ಈಗ ನಾವು ಗೋವುಗಳನ್ನು ಸಾಕುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಗೋವುಗಳೇ ನಮ್ಮನ್ನ ಸಾಕುತ್ತವೆ. ಇಲ್ಲಿ ಗೋವುಗಳ ಸಂಶೋಧನಾ ಕೇಂದ್ರ ಕೂಡ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಈಗಾಗಲೇ ಆ ಬಗ್ಗೆ ಸಿದ್ಥತೆಗಳಾಗುತ್ತಿವೆ ಎಂದು Tv9 ಡಿಜಿಟಲ್ ಜೊತೆ ಸಮಿತಿಯ ಗೌರವಾಧ್ಯಕ್ಷ ಆರ್.ಎಸ್ ಹೆಗಡೆ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮಗಳ ವಿವರ:

ಗೋದಿನ ಮತ್ತು ಆಲೆಮನೆ ಹಬ್ಬ ಉದ್ಘಾಟನೆ ಜನವರಿ 14 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ವಿಚಾರಗೋಷ್ಠಿ ಇರಲಿದೆ. ಜನವರಿ 15ರ ಮಧ್ಯಾಹ್ನ 12ಗಂಟೆಗೆ ಗೋ ಸೇವೆ, ಗೋಪೂಜೆ, ಗೋ ಸಂತರ್ಪಣೆ, 2.30ಕ್ಕೆ ವಿಚಾರಸಂಕೀರ್ಣ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 16 ರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಅಂತರ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಗೋ ಸೇವೆ, ಗೋ ಸಂತರ್ಪಣೆ, 3.30ಕ್ಕೆ ಹರಿಕಥೆ, ಸಂಜೆ 4 ಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ 5ಕ್ಕೆ ಸಾಲಂಕೃತ ಗೋದಾನ ನಡೆಯಲಿದೆ. ಅಂತೆಯೇ, ಜನವರಿ 17 ರಂದು ಬೆಳಿಗ್ಗೆ 5ಕ್ಕೆ ಸ್ವರ್ಗ ಸಂಗೀತ, 7ಕ್ಕೆ ದಾಸ ಸಂಕೀರ್ತನೆ, 10.30ಕ್ಕೆ ವಿಚಾರಗೋಷ್ಠಿ, 12ಕ್ಕೆ ಗೋ ಸೇವೆ ಮತ್ತು ಗೋ ಪೂಜೆ, ಗೋ ಸಂತರ್ಪಣೆಗಳು ನಡೆಯಲಿಲಿದ್ದು, 2.30ಕ್ಕೆ ಸಾಲಂಕೃತ ಗೋದಾನ, 3ಕ್ಕೆ ಮಾತೃತ್ವಮ್ ಸಮಾವೇಶ ನಡೆಯಲಿದ್ದು ರಾಘವೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಸಾವಯವ ಕಬ್ಬಿನ ಹಾಲಿನ ವಿತರಣೆ:

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಮಠದಲ್ಲೇ ಬೆಳೆದ ಸಾವಯವ ಕಬ್ಬಿನಿಂದ ತಯಾರಿಸಿದ್ದ ಕಬ್ಬಿನ ಹಾಲನ್ನು ಜನರಿಗೆ ನೀಡಲಾಗುತ್ತದೆ. ಮಠದಲ್ಲೇ ಕೆಲ ಎಕೆರೆ ಜಾಗದಲ್ಲಿ ಕಬ್ಬಿನ ಬೆಳೆ ಬೆಳೆಯಲಾಗಿದ್ದು ಅದಕ್ಕೆ ಯಾವುದೇ ರೀತಿಯ ಸರ್ಕಾರಿ ಗೊಬ್ಬರ ಬಳಸದೇ ಕೇವಲ ದನದ ಕೊಟ್ಟಿಗೆ ಗೊಬ್ಬರ ಮತ್ತು ಗೋಮೂತ್ರದಿಂದ ತಯಾರಿಯಾದ ಇಷ್ಟಾಮೃತವನ್ನೇ ಹಾಕಿ ಬೆಳೆಸಿದ ಸಾವಯವ ಕಬ್ಬಿನ ಹಾಲನ್ನು ಮಠದ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.

ಬದುಕು ರೂಪಿಸಿದ ಆಲೆಮನೆ!

Published On - 4:56 pm, Mon, 11 January 21

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?